ಗ್ರಾಮೀಣ ಭಾಗದಲ್ಲಿ ಜಾನಪದ ಸಂಸ್ಕೃತಿ ಜೀವಂತ: ಶ್ರೀಮಂತರಾವ ನೆಲ್ಲೂರೆ

ಕಲಬುರಗಿ: ಈ ನಾಡಿನ ಹಳ್ಳಿ ಹಳ್ಳಿಯಲ್ಲಿ ದೇಶಿಯ ಜಾನಪದ ಕಲೆಗಳು ಜೀವಂತವಾಗಿವೆ ಅದರಿಂದಾಗಿಯೇ ನಮ್ಮ ನಾಡು ಇಂದು ಸಂಪದ್ಭರಿತವಾಗಿದೆ ಎಂದು ಎಂ ಸಲಗರನ ಸಿದ್ದೇಶ್ವರ ಪ್ರೌಢ ಶಾಲೆಯ ಶಿಕ್ಷಕ ಶ್ರೀಮಂತರಾವ ನೆಲ್ಲೂರೆ ಅಭಿಪ್ರಾಯಪಟ್ಟರು.

ಇತ್ತೀಚಿಗೆ ಆಳಂದ ತಾಲೂಕಿನ ಕಾಮನಳ್ಳಿಯಲ್ಲಿ ಗುರು ಕುಮಾರೇಶ್ವರ ಸಾಂಸ್ಕೃತಿಕ ಕಲಾ ಸಂಘ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜಾನಪದ ಪ್ರಕಾರದ ಸಂಗೀತವನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಸರ್ಕಾರವು ಇಂತಹ ಕಾರ್ಯಕ್ರಮಗಳನ್ನು ಹೆಚ್ಚು ರೀತಿಯಲ್ಲಿ ಆಯೋಜನೆ ಮಾಡಬೇಕು ಈ ರೀತಿಯ ಕಲಾ ಪ್ರಕಾರಗಳಲ್ಲಿ ಗುರುತಿಸಿಕೊಂಡ ಕಲಾವಿದರಿಗೆ ಸೂಕ್ತ ಗೌರವ ಸನ್ಮಾನಗಳು ದೊರೆಯುವಂತಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಪ್ಪಾರಾವ ಬೆಳಮಗಿ, ಮೌಲಪ್ಪ ಸೋನಕಾಂಬಳೆ, ಶಿವರಾಜ ಸರಡಗಿ, ಅಜೀತ ಕುಲಕರ್ಣಿ, ಮಹಾದೇವ ಕುಮಟಗಿ, ಶರಣಪ್ಪ ನೆಲ್ಲೂರೆ, ದೌಲತರಾವ ದಿಕ್ಸಂಗಿ, ವಿಜಯಕುಮಾರ ಬೆಳಮಗಿ, ಬಸವರಾಜ ದಿಕ್ಸಂಗಿ, ಪರಮೇಶ್ವರ ಚಲಗೇರಿ, ಶ್ರೀಮಂತರಾವ ಬಿಂದಗೇರಿ, ಪರಮೇಶ್ವರ ಸರಡಗಿ, ಶ್ಯಾಮರಾವ ಸರಡಗಿ, ಕಾಂತಪ್ಪ ಬಿಂದಗೇರಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.

ಕಲಾವಿದರಾದ ಶಾಂತಕುಮಾರ ಸಾವಳಗಿ, ಪವಿತ್ರಾ ಜಿ ಎಸ್, ಸೈದಪ್ಪ ಸಪ್ಪನಗೋಳ, ಪ್ರಶಾಂತ ಗೋಲ್ಡಸ್ಮೀಥ್, ಶಾಂತಯ್ಯ ಹಿರೇಮಠ, ರೇವಣಯ್ಯಸ್ವಾಮಿ ಸುಂಟನೂರ, ತೇಜು ನಾಗೋಜಿ, ಶಿವಶರಣಯ್ಯ ಮಠ, ವೀರಭದ್ರಯ್ಯ ಸ್ಥಾವರಮಠ, ಉದಯಕುಮಾರ ಶಾಸ್ತ್ರೀ, ಗುರುಶಾಂತಪ್ಪ ಕುಂಬಾರ, ರಾಜಕುಮಾರ ಮಾಡಿಯಾಳ, ರಾಚಯ್ಯಸ್ವಾಮಿ ರಟಕಲ್, ಮಹಾಲಿಂಗಯ್ಯ ಸ್ಥಾವರಮಠ, ಶ್ರೀಮಂತ ಚಿಂಚನಸೂರ, ಇಸ್ಮಾಯಿಲಸಾಬ್ ಲದಾಫ, ಮಲ್ಲಯ್ಯ ಮಠಪತಿ, ಶಂಭುಲಿಂಗ ಪಾಟೀಲ, ಭೀಮಬಾಯಿ ಹಡಲಗಿ, ಸುಭದ್ರಾಬಾಯಿ ಕಾರಭಾರಿ, ಗುರುಶಾಂತಯ್ಯ ಸ್ಥಾವರಮಠ, ರೇವಣಸಿದ್ದ ದೇಸಾಯಿಕಲ್ಲೂರ, ಅಶೋಕ ಆಳಂದ, ವಿಜಯಕುಮಾರ ಆಳಂದ ನಾಗಲಿಂಗಯ್ಯ ಸ್ಥಾವರಮಠ, ಶಿವಾನಂದ ಹಿತ್ತಲಶಿರೂರ ಹಾಗೂ ಜೈ ಹನುಮಾನ ಭಜನಾ ಮಂಡಳಿ, ಪರಮೇಶ್ವರ ಭಜನಾ ಮಂಡಳಿಯವರು ಸಂಗೀತ ಸೇವೆ ಸಲ್ಲಿಸಿದರು. ಮಲ್ಲಿನಾಥ ಪೊಲೀಸ್‌ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

1 hour ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

1 hour ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

1 hour ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

1 hour ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

1 hour ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420