ಪ್ಲಾಸ್ಟಿಕ ಮುಕ್ತಗೊಳಿಸಿ ಆರೋಗ್ಯವಂತರಾಗೋಣ: ದೊಡ್ಡಪ್ಪ ನಿಷ್ಠಿ

ಸುರಪುರ: ಪರಿಸರ ಮಾಲಿನ್ಯದಿಂದ ಹಲವಾರು ರೋಗಗಳು ಹರಡುತ್ತವೆ ಅದರಲ್ಲಿ ಪ್ಲಾಸ್ಟಿಕ ವಸ್ತುಗಳು ನಮ್ಮ ಪರಿಸರಕ್ಕೆ ಹಾನಿಉಂಟುಮಾಡಿ ಮನಷನ ಆರೋಗ್ಯವನ್ನು ಹದಗೆಡಿಸುತ್ತದೆ ಕಾರಣ ಪ್ಲಾಸ್ಟಿಕ ಮುಕ್ತಗೊಳಿಸಿ ಆರೋಗ್ಯವಂತರಾಗೋಣ ಎಂದು ವೀರಪ್ಪ ನಿಷ್ಠ ತಾಂತ್ರಿಕ ಮಹಾವಿದ್ಯಾಲಯದ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಕರೆನೀಡಿದರು.

ತಾಲೂಕಿನ ರುಕ್ಮಾಪುರ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕಲಿಕೆ ಮತ್ತು ಬಿ.ಜೆ.ಎಸ್. ಎನ್.ಜಿ.ಓ ರವರ ಸಂಯುಕ್ತಾಶ್ರಯದಲ್ಲಿ ನಡೆದ ಪ್ಲಾಸ್ಟಿಕ ಮುಕ್ತ ಪರಿಸರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ಲಾಸ್ಟಿಕ ವಸ್ತುಗಳು ನಮ್ಮ ಪರಿಸರದಲ್ಲಿ ನಶಿಸದೆ ಹಾಗೆ ಉಳಿಯುವುದರಿಂದ ಪರಿಸರದಲ್ಲಿರುವ ಮರಗಿಡಗಳಿಗೆ ಹಾನಿಯಾಗುತ್ತವೆ ಅದಕ್ಕಾಗಿ ನಾವುಗಳು ಪ್ಲಾಸ್ಟಿಕ ವಸ್ತಗಳನ್ನು ಬಳಸುವುದನ್ನು ಬಿಡಬೇಕು ಎಂದು ತಿಳಿಸಿದರು.

ನಂತರ ಅತಿಥಿಯಾಗಿ ಆಗಮಿಸಿದ ನಿವೃತ್ತ ಲೋಕಾಯುಕ್ತ ಎಸ್.ಪಿ ಸಿ.ಎನ್.ಭಂಡಾರೆ ಮಾತನಾಡಿ ಇಂದಿನ ಯುಗವು ಪ್ಲಾಸ್ಟಿಕ ಮಯವಾಗಿಬಿಟ್ಟಿದೆ ಇದರಿಂದ ನಮ್ಮ ಪರಿಸರಕ್ಕೂ ಹಾನಿ ಹಾಗೂ ಮನುಷನಿಗೆ ಹಾಗೂ ನಮ್ಮ ದನಕರುಗಳ ಆರೋಗ್ಯಕ್ಕೂ ಹಾನಿಯಾಗಿದೆ ಕಾರಣ ಪ್ಲಾಸ್ಟಿಕ ವಸ್ತುಗಳ ಬಳಕೆಯನ್ನು ಬಿಟ್ಟು ಪರ್ಯಾಯ ವಸ್ತುಗಳ ಬಳಕೆಗೆ ಮುಂದಾಗಬೇಕು ಎಂದು ತಿಳಿಸಿದರು.

ಗ್ರಾಮದ ಎಲ್ಲಾ ಬಡಾವಣೆಯಲ್ಲಿ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ಪ್ಲಾಸ್ಟಿಕ ಮುಕ್ತಗೊಳಿಸಲು ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳಲಾಯಿತು ಬಿ.ಜೆ.ಎಸ್. ಎನ್.ಜಿ.ಓ ಅಧ್ಯಕ್ಷ ಅಜೀತ್, ಮಲ್ಲಿಕಾರ್ಜುನ ಪಾಟೀಲ್, ವೆಂಕೋಬ ಬಾಕ್ಲಿ, ಪ್ರಾಂಶುಪಾಲ ರವೀಂದ್ರಕುಮಾರ ನಾಗರಾಳೆ, ರಾಜೇಶ ಧೋಖಾ ಜೈನ್ ವೇದಿಕೆಯಲ್ಲಿದ್ದರು, ಎನ್.ಎಸ್.ಎಸ್. ಸಂಯೋಜಕ ಪ್ರೊ.ಪ್ರಭಾಕರ ಪಾಟೀಲ ಉಪನ್ಯಾಸ ನೀಡಿದರು. ಪ್ರಾರ್ಥನಾ ಗೀತೆಯನ್ನು ಸ್ನೇಹಾ ಹಾಡಿದರು, ಪ್ರೊ.ಮಲ್ಕನಗೌಡ ನಿರೂಪಿಸಿ ವಂದಿಸಿದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

5 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

5 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

5 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

6 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

6 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

6 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420