ಸುರಪುರ: ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಸುರಪುರ ವಿದಾನಸಭೆಯ ನೂತನ ಶಾಸಕರಾದ ಸನ್ಮಾನ್ಯ ರಾಜಾ ವೇಣುಗೋಪಾಲ್ ನಾಯಕ ರವರು ಮುಖ್ಯಮಂತ್ರಿಗಳ ಅಮೃತ ನಗರೋತ್ತನ 4 ನೇ ಹಂತದ ಯೋಜನೆಯಲ್ಲಿ 20.00 ಲಕ್ಷ ರೂಗಳಲ್ಲಿ ಬೌದ್ಧಸ್ತುಪ ಗೇಟ್ ಮತ್ತು ಕಂಪೌಂಡ ಗಾರ್ಡನ ಒಳಗೊಂಡಂತೆ ಸರಕಾರದಿಂದ ಮಂಜೂರಾಗಿದ್ದ ಪ್ರಥಮ ಹಂತದ ಕಾಮಾಗಾರಿಯನ್ನು ಪ್ರಾರಂಭಿಸಲೂ ಭೂಮಿ ಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ವಂದನಾ ಕಾರ್ಯಾಕ್ರಮವನ್ನು ವಿಹಾರದ ಪೂಜ್ಯ ಸುಮನ ಅರಿಯಾ ಭಂತೇಜಿಯವರ ಸಾನಿದ್ಯದಲ್ಲಿ ನೆರವೇರಿಸಲಾಯಿತು ಹಾಗೂ ನೂತನ ಶಾಸಕರಾಗಿ ಆಯ್ಕೆಯಾದ ನಂತರ ಪ್ರಥಮ ಬಾರಿಗೆ ವಿಹಾರಕ್ಕೆ ಆಗಮಿಸಿದ ಶಾಸಕ ರಾಜಾ ವೇಣುಗೊಪಾಲ ನಾಯಕರನ್ನು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ಇನ್ನು ಅವಶ್ಯಕತೆಯಿರುವ ಅಭಿವೃದ್ದಿ ಕೆಲಸಗಳನ್ನು ಹಂತ ಹಂತವಾಗಿ ನೇರವೆರಿಸಲಾಗುವದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯಾದರ್ಶಿ ರಾಹುಲ್ ಹುಲಿಮನಿ ಸ್ವಾಗತಿಸಿ ನಿರೂಪಿಸಿರು.
ಈ ಕಾರ್ಯಾಕ್ರಮದಲ್ಲಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ರಾಜಾ ಪಿಡ್ಡನಾಯಕ ತಾತಾ, ನಗರ ಯೋಜನಾಪ್ರಾಧಿಕಾರದ ಅದ್ಯಕ್ಷರಾದ ಪ್ರಕಾಶ್ ಗುತ್ತೆದಾರ, ಟ್ರಸ್ಟಿನ ಅದ್ಯಕ್ಷ ವೆಂಕಟೇಶ ಹೊಸಮನಿ, ಮಲ್ಲಣ್ಣ ಸಾಹುಕಾರ, ನಗಸಭೆಯ ಸದಸ್ಯರುಗಳಾದ ಶಿವುಕುಮಾರ್ ಕಟ್ಟಿಮನಿ, ಮೌಲಾನಸಾಬ್ , ನಗರಸಭೆ ಅಧಿಕಾರಿಗಳಾದ ಎಇಇ ಶಾಂತಪ್ಪ ಎಸ್, ಇಂಜಿನಿಯರ್ ಮಹೇಶ್, ಮಲ್ಲಿಕಾರ್ಜುನ್ ಕುಂಬಾರಪೇಟ್, ಟ್ರಸ್ಟ್ ಉಪಾದ್ಯಕ್ಷರಾದ ನಾಗಣ್ಣ ಕಲ್ಲದೆವನಹಳ್ಳಿ, ಭೀಮರಾಯ ಸಿಂದಗೇರಿ, ಸದಸ್ಯರಾದ, ಮಾಳಪ್ಪ ಕಿರದಳ್ಳಿ ಮತ್ತು ಮಾನಪ್ಪ ಬಿಜಾಸಪೂರ, ಧರ್ಮರಾಜ್ ಬಡಿಗೇರ, ಜಗದೀಶ ಶಾಖನವರ್, ಪ್ರಶಾಂತ ಉಗ್ರಮ್, ನಾಗರಾಜ ಬೇವಿನಗಿಡ, ಅವಿನಾಶ ಹೊಸಮನಿ ಇತರರು ಬಾಗವಹಿಸಿದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…