ಕಲಬುರಗಿ: ಜನ ಸಂಘದಿಂದ ಬೆಳೆದು ಬಂದ ಹಿರಿಯ ಕಾರ್ಯಕರ್ತರು ಭಾರತೀಯ ಜನತಾ ಪಕ್ಷಕ್ಕೆ ತಮ್ಮ ಆದರ್ಶಗಳ ಮೂಲಕ ಭದ್ರ ನೆಲೆಗಟ್ಟನ್ನು ನೀಡಿರುವುದರಿಂದ ಪಕ್ಷ ಇವತ್ತು ಇಷ್ಟು ವಿರಾಜಮಾನವಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅಭಿಪ್ರಾಯ ಪಟ್ಟರು.
ಕಲಬುರಗಿಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ, ಸಾಹಿತಿ 94 ರ ಹರೆಯದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಮಹಾದೇವಪ್ಪ ಅವರನ್ನು ಕಲಬುರಗಿ ಅವರ ಸ್ವಗೃಹದಲ್ಲಿ ಭೇಟಿಯಾಗಿ ಸನ್ಮಾನಗೈದು ಮಾತನಾಡಿ ಹಿರಿಯರ ಸಮರ್ಪಣಾ ಮನೋಭಾವದಿಂದ ಮಾದರಿಯಾಗಿ ಪಕ್ಷ ಬೆಳೆಯಲು ಭದ್ರ ತಳಪಾಯ ಒದಗಿಸಿಕೊಟ್ಟ ಹಿರಿಯರು ಅಭಿನಂದನೆಗೆ ಅರ್ಹರು. ಅವರು ಪಕ್ಷಕ್ಕೆ ಸದಾ ಮಾರ್ಗದರ್ಶನ ನೀಡಿ ಆಶೀರ್ವದಿಸುತ್ತಿದ್ದಾರೆ. ಈಗಿನ ನಾಯಕರು ಅವರಿಂದ ಪ್ರೇರಣೆ ಪಡೆದು ಪಕ್ಷಕ್ಕೆ ಶಕ್ತಿ ತುಂಬಬೇಕು. ಮಹದೇವಪ್ಪ ಕಡೇಚೂರ್ ಅವರದು ಅವಿಭಕ್ತ ಕುಟುಂಬವಾಗಿದ್ದು 25 ಜನರು ಒಂದೇ ಮನೆಯಲ್ಲಿ ಆದರ್ಶದ ಜೀವನ ಮಾಡುತ್ತಿರುವುದು ಭಾರತೀಯ ಕುಟುಂಬ ಪದ್ಧತಿಯ ಆದರ್ಶ ಎಂದು ಹೇಳಿದರು.
ಮಹಾದೇವಪ್ಪ ಕಡೇಚೂರ್ ಅಭಿನಂದನೆಗೆ ಪ್ರತ್ಯುತ್ತರ ನೀಡುತ್ತಾ ರಾಷ್ಟ್ರಮಟ್ಟದ ನಾಯಕರು ಹಿರಿಯ ಕಾರ್ಯಕರ್ತರನ್ನು ಹುಡುಕಿಕೊಂಡು ಮನೆಗೆ ಬಂದು ಗೌರವಿಸಿರುವುದು ನಿಷ್ಠಾವಂತರಾಗಿ ದುಡಿದ ಪಕ್ಷದ ಕಾರ್ಯಕರ್ತನಿಗೆ ರಾಷ್ಟ್ರ ನಾಯಕರು ನೀಡುವ ಅತ್ಯಮೂಲ್ಯವಾದ ಗೌರವ ವಾಗಿದೆ.ತತ್ವನಿಷ್ಟ ರಾಗಿ ಪ್ರಾಮಾಣಿಕರಾಗಿ ನಾಯಕರೆಲ್ಲರೂ ಬಿಜೆಪಿ ಪಕ್ಷದ ಮೂಲಕ ರಾಷ್ಟ್ರ ಕಟ್ಟುವ ಕೆಲಸ ಮಾಡುವಂತಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನೇತಾರ ಶರಣಪ್ಪ ತಳವಾರ, ಆರ್ ಎಸ್ ಎಸ್ ನ ವಿಭಾಗಿಯ ಸಂಘಟನಾ ಕಾರ್ಯದರ್ಶಿ ವಿಜಯ ಮಹಾಂತೇಶ್, ಸಂಜೀವ ಭೋಸಗೀಕರ್,ಭರತ್ ಖಮಿತ್ ಕರ್,ಮಹೇಶ್ ಕಡೇಚೂರ್, ಡಾ.ಸದಾನಂದ ಪೆರ್ಲ,ಪ್ರಮೀಳಾ ಎಂ ಕೆ.,ದಿನೇಶ್ ಕಡೇಚೂರ್,
ಅನೀಶ್ ಕಡೇ ಚೂರ್ ಮತ್ತಿತರರು ಇದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…