ಕಲಬುರಗಿ: ಜಗತ್ ಬಡಾವಣೆಯಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ವತಿಯಿಂದ ಹನ್ನೇರನೆಯ ಶತಮಾನದ ಶರಣ ಡೋಹರ ಕಕ್ಕಯ್ಯನವರ ದೇವರ ಮಂದಿರದ ಕಳಸರೋಹಣ ಹಾಗೂ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಸಾಯಬಣ್ಣ ಹೋಳ್ಕರ್ ಅವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಕ್ಕಳ ಹಿರಿಯ ಕವಿ ಎ.ಕೆ.ರಾಮೇಶ್ವರ ಮಾತನಾಡುತ್ತಾ, ಶರಣ ಡೋಹರ ಕಕ್ಕಯ್ಯನವರು ಹಿರಿಯ ಶರಣರಾಗಿ ಅಣ್ಣ ಬಸ ವಣ್ಣನವರೊಂದಿಗೆ ಶರಣ ತತ್ವಗಳನು ಮೈಗೂಡಿಸಿಕೊಂಡು ಕಾಯಕದೊಂದಿಗೆ ಇದ್ದರು. ಆ ಸಂದರ್ಭದಲ್ಲಿ ಅವರು ರಚಿಸಿದ ಆರು ವಚನಗಳು ಮಾತ್ರ ನಮಗೆ ದೊರಕಿವೆ, ಅವರಿಗೆ ಬಸವಣ್ಣನವರು ಲಿಂಗಧೀಕ್ಷೆ ಮಾಡಿದರೆಂದು ತಿಳಿದು ಬರುತ್ತದೆ.
ಡೋಹರ ಕಕ್ಕಯ್ಯನವರು 770 ಅಮರ ಗಣಂಗಗಳಲ್ಲಿ ಇವರು ಕೂಡ ಶರಣ ಜೀವಿಗಳಾಗಿ ಬದುಕಿ ಬಾಳಿದವರೆಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ, ಸಾಹಿತಿಗಳಾದ ಭೀಮಣ್ಣ ಬೋನಾಳ ಅವರು ಮಾತನಾಡಿ ಶರಣ ಕಕ್ಕಯ್ಯ ನವರು ನಿಷ್ಠಾವಂತ ಕಾಯಕ ಶರಣರಾಗಿ ಬಸವಣ್ಣನವ ರೊಂದಿಗೆ ಸದಾ ಕಾಯಕದಲ್ಲಿರುತ್ತಿದ್ದರು ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಅವರು ಒಂದು ಶರಣರ ವಚನ ಗಾಯನ ಮಾಡಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಲಿಂಗೋಜಿ ಗಾಜರೆ, ಪ್ರಧಾನ ಕಾರ್ಯದರ್ಶಿ ಮೋತಿಲಾಲ ಎಂ.ಕಟಕ್ಕೆ, ಖಜಾಂಚಿ ರಮೇಶ್ ಗಾಯಧನಕರ್, ನಿರ್ದೇಶಕರಾದ ಡಾ. ಸಂತೋಷ್ ಕಟಕೆ, ಡಾ. ಲಕ್ಷಣ ಕಾವಳೆ, ಡಾ. ತುಳಜಾರಾಂ ಗಾಯಧನಕರ್, ಅನಿಲ್ ಸಾವಳಕರ, ದೇವಿಂದ್ರ ಧಡಕೆ, ಅರ್ಜುನ್ ಸೋನಕವಡೆ, ಅಶೋಕ ಖರಟಮಲ, ಮಲ್ಲಿಕಾರ್ಜುನ ಖರಟಮಲ, ಸಾಯಬಣ ಗಜರೆ, ಸರ್ಯಕಾಂತ ಸಾವಳಕರ ಸೇರಿದಂತೆ ಇತರರು ಇದ್ದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…