ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯ

ಸುರಪುರ: ಬದುಕಿನಲ್ಲಿ ಪ್ರತಿಯೊಬ್ಬ ಮನುಷ್ಯನಿಗೆ ಮೋಕ್ಷ ಎನ್ನುವುದು ತುಂಬಾ ಮುಖ್ಯವಾದುದು,ಆ ಮೋಕ್ಷವನ್ನು ಕಾಣಬೇಕಾದರೆ ಸಂಸ್ಕಾರಯುಕ್ತ ಆಚರಣೆಗಳು ಹಾಗೂ ಧರ್ಮ ಮತ್ತು ಜ್ಞಾನ ಮಾರ್ಗ ದಿಂದ ಗಳಿಸಲು ಸಾಧ್ಯವಿದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಬಡಿಗೇರ ಬಾವಿ ಬಳಿಯಲ್ಲಿನ ರೇಣುಕಾ ಮಾತಾ ದೇವಸ್ಥಾನದಲ್ಲಿ ಶ್ರೀ ಮಹಾ ಶಿವಶರಣೆ ರೇಣುಕಾ ಮಾತೆಯ 8ನೇ ಆರಾಧನಾ ಮಹೋತ್ವ ಪ್ರಯುಕ್ತ ಹಮ್ಮಿಕೊಂಡಿದ್ದ ಸಂಗೀತೋತ್ಸವ,ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ನಾವು ಹುಟ್ಟುವಾಗ ಯಾರೂ ಕುಲಜರಲ್ಲ ಶ್ರೀಕೃಷ್ಣ ಪರಮಾತ್ಮ ಹಾಗೂ ಶಂಕರಾಚಾರ್ಯರು ಹೇಳಿರುವಂತೆ ನಾವೆಲ್ಲರೂ ಆರ್ತರು ಮನುಷ್ಯ ಭೂಮಿಗೆ ಬಂದಾಗ ಅಳುತ್ತಾ ಬರುತ್ತಾನೆ ಆದರೆ ಬೆಳೆದಂತೆ ಶ್ರೀಮಂತನಾಗಬೇಕು ಎಂಬ ಆಸೆ ಹುಟ್ಟುತ್ತದೆ ಅರ್ಥಾತ್ ಸಂಪತ್ತ ಬರಬೇಕು ಎಂದು ಬರುತ್ತದೆ ಐವತ್ತು ವರ್ಷಗಳು ದಾಟಿದ ನಂತರ ಅರ್ಥಾತ್ ದಾಟಿ ಜಿಜ್ಞಾಸು ಬರುತ್ತದೆ ನಾನು ಮಾಡಿರುವ ಸಾಧನೆ ಭಗವಂತನಿಗೆ,ಕುಟುಂಬ,ಸಮಾಜ ಹಾಗೂ ದೇಶಕ್ಕೆ ಏನು ಮಾಡಿದ್ದಾನೆ ಎಂಬ ಜಿಜ್ಞಾಸೆ ಪ್ರತಿಯೊಬ್ಬರಲ್ಲಿ ಬರಬೇಕು ಇದನ್ನು ಸಾಧಿಸಲು ಜ್ಞಾನ ಮಾರ್ಗ ಅವಶ್ಯಕ ಎಂದು ಹೇಳಿದರು.

ಹೆಡಗಿಮುದ್ರಾ ಶಾಂತ ಶಿವಯೋಗಿ ಮಠದ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಆರಾಧನಾ ಮಹೋತ್ಸವವನ್ನು ಸಂಗೀತ,ಗ್ರಂಥ ಬಿಡುಗಡೆ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಉತ್ತಮ ಕಾರ್ಯ ಎಂದ ಅವರು ಇವತ್ತು ಆಧುನಿಕ ಶಿಕ್ಷಣದ ಹಿಂದೆ ಹೋಗಿ ನಾವು ನಮ್ಮ ಕಲೆ,ಸಾಹಿತ್ಯ,ಸಂಗೀತ,ಚಿತ್ರಕಲೆ ನಮ್ಮ ಸಂಸ್ಕøತಿ ಪರಂಪರೆಗಳನ್ನು ನಾವು ಮರೆತು ಹೋಗುತ್ತಿದ್ದೇವೆ ಸಂಗೀತಕ್ಕೆ ಬಹಳಷ್ಟು ಶಕ್ತಿ ಇದೆ ಎಂತಹವರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಅದಕ್ಕೆ ಇದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ ಮಾತನಾಡಿದರು ಟ್ರಸ್ಟ್‍ನ ಕಾರ್ಯದರ್ಶಿ ಜಯರಾಮ ಕಟ್ಟಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಎ.ಎಲ್.ದೇಸಾಯಿ ನಿರೂಪಿಸಿದರು ಪ್ರಿಯಾಂಕ ಪತ್ತಾರ ಪ್ರಾರ್ಥಿಸಿದರು ರೋಶನಾ ಪಟ್ಟಣಕರ ವಂದಿಸಿದರು.ಪ್ರವೀಣ ಕಟ್ಟಿಮನಿ,ಪ್ರಶಾಂತ ಕಟ್ಟಿಮನಿ ಇತರರಿದ್ದರು.

ಪ್ರಲ್ಹಾದ ಕಟ್ಟಿಮನಿ ವಿರಚಿತ ದಾಸಾನುದಾಸ ಕೃತಿಯನ್ನು ಬಿಡುಗಡೆಗೊಳಿಸಲಾಯಿತು, ಯುವ ಗಾಯಕ ರವಿಕುಮಾರ ದಾವಣಗೆರೆ ಅವರಿಗೆ ಶಿವಶರಣೆ ಶ್ರೀ ರೇಣುಕಾ ಮಾತೆ ಜ್ಞಾನ ಸಿಂಚನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ನಂತರ ನಾಡಿನ ಖ್ಯಾತ ಸಂಗೀತ ಕಲಾವಿದರಾದ ಶರಣುಕುಮಾರ ವಠಾರ,ಮಲ್ಲಯ್ಯ ಹಿರೇಮಠ,ಮಾಸ್ಟರ್ ವಿಹಾನಸಾಗರ ಮಳಲಿ ಹಾಗೂ ಮಾತಾಶ್ರಮದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಜರುಗಿತು,ಭೀಮಾಶಂಕರ ಬಿದನೂರು ಮೈಸೂರು ತಬಲಾ ಹಾಗೂ ಹನಮಂತ ಮಳಲಿ ಹಾರ್ಮೋನಿಯಂ ಸಾಥ ನೀಡಿದರು.

emedialine

Recent Posts

ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಬೆಳಿಕಿನಡೆಗೆ ಕರೆದೊಯ್ಯುವ ಜ್ಯೋತಿಯೇ ಶಿಕ್ಷಕ

ಕಲಬುರಗಿ: ನಗರದ ಆಳಂದ ರಸ್ತೆಯಲ್ಲಿರುವ ಕೆ.ಹೆಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಬುಧವಾರ ಗೆಳೆಯರ ಬಳಗದ ವತಿಯಿಂದ…

2 hours ago

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಗಮನ ಸೆಳೆದ ಚೇತನ ಬಿ.ಕೋಬಾಳ್ ಸಂಗೀತ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ( ಸಮಾಜ ಕಲ್ಯಾಣ ಇಲಾಖೆ…

11 hours ago

15ರಂದು ಮಾನವ ಸರಪಳಿ: ನಾಳೆ ಪೂರ್ವ ಭಾವಿ ಸಭೆ

ಶಹಾಬಾದ :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ತಾಲೂಕಿನ ಪ್ರೌಢಶಾಲಾ ಮುಖ್ಯ…

12 hours ago

ಸೆಪ್ಟೆಂಬರ್ 17ರಂದು ವಿಮೋಚನಾ ದಿನ ರದ್ದುಪಡಿಸಿ, ಪ್ರಜಾಸತ್ತಾತ್ಮಕ ದಿನ ಆಚರಿಸಿ: ಕೆ ನೀಲಾ

ಕಲಬುರಗಿ: ಹೈದ್ರಾಬಾದ್ ಕರ್ನಾಟಕದಲ್ಲಿ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತಿರುವ ವಿಮೋಚನಾ ದಿನವಲ್ಲ, ಅದು ವಿಲೀನಿಕರಣದ ಅಥವಾ ಪ್ರಜಾಸತ್ತಾತ್ಮಕ ದಿನವಾಗಿದ್ದು, ವಿಮೋಚನಾ…

12 hours ago

ಸಮಿತಿಗಳ ಕಾರ್ಯ ಪರಾಮರ್ಶಿಸಿದ ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ

ಕಲಬುರಗಿ; ಕಲಬುರಗಿಯಲ್ಲಿ ಇದೇ ಸೆ.17 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದ್ದರಿಂದ ಸಭೆ ಯಶಸ್ಸಿಗೆ ರಚಿಸಲಾಗಿರುವ ವಿವಿಧ ಸಮಿತಿಗಳ…

15 hours ago

SC/STಗೆ ಪಾಲಿಕೆಯಿಂದ ವಿತರಣೆಯಾಗದ ಸಂಸ್ಕೃತಿ ಸಮಾಗ್ರಿ: ಸಚಿನ ಶಿರವಾಳ ಬೇಸರ

ಕಲಬುರಗಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ವಿತರಿಸಬೇಕಾಗಿರುವ ಸಾಮಗ್ರಿಗಳಾದ ಕ್ರಿಕೆಟ್ ಸೈಟ್‍ ಗಳಾದ, ಬ್ಯಾಂಡ್ ಸೆಟ್‍ಗಳು ಮತ್ತು…

15 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420