ಕಲಬುರಗಿ: ಬಸವಣ್ಣನವರ ಹಿರಿಯ ಸಮಕಾಲೀನರಾದ ಮಡಿವಾಳ ಮಾಚಿದೇವರು ಕೇವಲ ಬಟ್ಟೆಗಂಟಿದ ಕೊಳೆ ಮಾತ್ರ ತೊಳೆಯಲಿಲ್ಲ. ಮನಕ್ಕೆ ಅಂಟಿದ ಮೈಲಿಗೆ ಕೂಡ ತೊಳೆದು ಒಳಗೂ ಹೊರಗೂ ಒಂದಾಗಿಸುವ ನಿರಂಜನ, ವೀರವ್ರತಿ, ಗಣಾಚಾರಿ ಶರಣರಾಗಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಶ್ರಾವಣ ಮಾಸದ ನಿಮಿತ್ತ ಶನಿವಾರ ಮಹಾತ್ಮ ಬಸವೇಶ್ವರ ನಗರದ ಜಗನ್ನಾಥ ರಾಚಟ್ಟೆಯವರ ಶರಣ ಸಂಕುಲ ಸಭಾಂಗಣದಲ್ಲಿ ಜರುಗಿದ ವಚನ ವೈಭವ ಕಾರ್ಯಕ್ರಮದಲ್ಲಿ ‘ವೀರಗಣಾಚಾರಿ ಮಾಚಿದೇವರು’ ಕುರಿತು ವಿಶೇಷ ಅನುಭಾವ ನೀಡಿದ ಅವರು, ಅಲ್ಲಮಪ್ರಭು, ಬಸವಣ್ಣನವರಿಗಿಂತ ಹೆಚ್ಚು ಕಾಲ ಬದುಕಿದ್ದ ಮಡಿವಾಳ ಮಾಚಿದೇವರು ಬರೆದ 300 ವಚನಗಳು ಲಭ್ಯವಿದ್ದು, ಅವರ ವಚನಗಳು ವೈಚಾರಿಕ,ವೈಜ್ಞಾನಿಕ ವಿಚಾರಗಳಿಂದ ಕೂಡಿವೆ ಎಂದರು.
ಬಸವಣ್ಣ ಮತ್ತು ಮಾಚಿದೇವರರಿಗೆ ಅವಿನಾಭಾವ ಸಂಬಂಧವಿತ್ತು. ಒಬ್ಬರದು ಮುಗಿದ ಕೈ ಬಾಗಿದ ತಲೆ. ಇನ್ನೊಬ್ಬರದು ವೀರಗಂಟೆಯ ಎಚ್ಚರಿಕೆ. ಮಡಿವಾಳ ಮಾಚಿದೇವರು ಬಸವಣ್ಣನವರಿಗೆ ಸಾರ್ವಜನಿಕ ಕೆಲಸಗಳಿಗೆ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಆದರೂ “ಎನ್ನಂತರಂಗವ ಬೆಳಗಿದಾತ ಮಡಿವಾಳ, ಎನ್ನ ಬಹಿರಂಗವ ಬಿಡಿಸಿದಾತ ಮಡಿವಾಳ” ಎಂದು ಬಸವಣ್ಣನವರು ಕೊಂಡಾಡಿದ್ದಾರೆ ಎಂದು ಮಡಿವಾಳ ಮಾಚಿದೇವರ ಬದುಕು ಹಾಗೂ ಬೋಧನೆ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿದರು. ಪ್ರೊ. ಎಸ್.ಎಲ್. ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಗನ್ನಾಥ ರಾಚಟ್ಟೆ ಸ್ವಾಗತಿಸಿದರು. ಡಾ. ಆದಿತ್ಯ ರಾಚಟ್ಟೆ ವಂದಿಸಿದರು. ಸಿದ್ಧರಾಮ ಯಳವಂತಗಿ ನಿರೂಪಿಸಿದರು.
ಆರ್.ಜಿ. ಶೆಟಗಾರ, ಹಣಮಂತರಾಯ ಕುಸನೂರ, ವಿರೇಶ ಮಾಲಿಪಾಟೀಲ, ಮಹಾಂತೇಶ ಕಲ್ಬುರ್ಗಿ, ಅಂಬಾರಾಯ ಬಿರಾದಾರ, ಶಶಿಕಾಂತ ಪಸಾರ, ಡಾ. ಶಿವಾನಿ ರಾಚಟ್ಟೆ, ಅರ್ಜನ ಎಸ್. ಖಂಡೋಜಿ ಇತರರಿದ್ದರು.
ಸಮಾನತೆ, ಸೌಹಾರ್ದತೆ, ಸ್ವಾವಲಂಬಿ ವಿಚಾರಗಳನ್ನೊಳಗೊಂಡ ವಚನ ಸಾಹಿತ್ಯವು ನಮ್ಮ ನೆಲೆದ ಮೊಟ್ಟ ಮೊದಲ ವಿಚಾರ ಸಾಹಿತ್ಯ.ವಾಗಿದೆ. ಇಂತಹ ವಿಚಾರಗಳು ಸಮಾಜದಲ್ಲಿ ನೆಲೆಗೊಂಡರೆ ಸಮಾಜ ಜಾಗೃತಿ ಉಂಟಾಗಿ ಸಾಮಾಜಿಕ ಪರಿವರ್ತನೆಯಾಗುತ್ತದೆ ಎಂಬುದನ್ನು ಅರಿತ ವೈದಿಕರು ಅನೇಕ ಹುನ್ನಾರಗಳನ್ನು ಹೆಣೆಯುತ್ತಲೇ ಇದ್ದಾರೆ. ಇದಕ್ಕೆ ಬಲಿಯಾಗದೆ ಬದುಕಿನಲ್ಲಿ ವೈಚಾರಿಕ ಶಿಸ್ತು ಬೆಳೆಎಸಿಕೊಳ್ಳಬೇಕು. -ಅಲ್ಲಮಪ್ರಭು ಬೆಟ್ಟದೂರು, ಸಾಹಿತಿಗಳು
ಕಲಬುರಗಿ: ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ ಹಾನಗಲ್ ಇವರ 42ನೇ ವಾರ್ಷಿಕೋತ್ಸವದ ಅಂಗವಾಗಿ ಕೊಡುವ ರಾಜ್ಯಮಟ್ಟದ ಕುಮಾರಶ್ರೀ ಪ್ರಶಸ್ತಿಗೆ…
ಹಟ್ಟಿ: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಸಿಪಿಐ(ಎಂ) ಪಕ್ಷದ…
ಕಲಬುರಗಿ: ಇತ್ತೀಚಿನ ವರ್ಷಗಳಲ್ಲಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರವು ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ, ವಿವಿಧ ಕೈಗಾರಿಕೆಗಳನ್ನು ಪರಿವರ್ತಿಸುತ್ತದೆ ಮತ್ತು ನಮ್ಮ ದೈನಂದಿನ…
ಕಲಬುರಗಿ : ವೈಚಾರಿಕತೆಯ ನೆಲೆಯಲ್ಲಿ ಸಾಹಿತ್ಯಕ್ಕೆ ತನ್ನದೇ ಆದ ಮೌಲ್ಯ ಮತ್ತು ಮಹತ್ವವಿದೆ. ವಿದ್ಯಾರ್ಥಿಗಳು ಕನ್ನಡ ಭಾಷಾಭಿರುಚಿ ಬೆಳೆಸಿಕೊಂಡರೆ ಸಾಹಿತ್ಯ…
ಕಲಬುರಗಿ: ಕೇಂದ್ರ ಸರಕಾರ ಜಾರಿಗೊಳ್ಳಿಸುತ್ತಿರುವ ವಕ್ಫ್ ಬಚಾವ್ ಆಂದೋಲನದ ನಿಮಿತ್ತ ಇಂದು ಹಫ್ತ್ ಗುಂಬಜ್ ದರ್ಗಾ ರಸ್ತೆಯ ನ್ಯಾಷನಲ್ ಕಾಲೇಜು…
ಕಲಬುರಗಿ: ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಯುವಕನೊಬ್ಬನಿಗೆ ಸುಮಾರು 45 ದಿನಗಳ ಕಾಲ ಐಸಿಯುನಲ್ಲಿ ಚಿಕಿತ್ಸೆ ನೀಡುವುದರ ಜೊತೆಗೆ ಅಗತ್ಯವಿದ್ದ ಕ್ಲಿಷ್ಟಕರ…