ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ

ಶಹಾಬಾದ: ಬಾಲಕಿ ಮೇಲಿನ ಅತ್ಯಾಚಾರ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (ವಿಶೇಷ ಪೆÇೀಕ್ರೂ) ನ್ಯಾಯಾಲಯವು ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ತಾಲ್ಲೂಕಿನ ನಿವಾಸಿಯಾದ ಅಜಯ ಈರಣ್ಣ ಶಿಕ್ಷೆಗೆ ಒಳಗಾದವರು. ಬಾಲಕಿಯನ್ನು ಪ್ರೀತಿಸುವುದಾಗಿ ಆಕೆಯ ಹಿಂದೆ ಬಿದಿದ್ದ ಅಜಯ, ಆಗಾಗ ಮಾತನಾಡುತ್ತಿದ್ದನು. ಬಾಲಕಿಯ ಪೆÇೀಷಕರ ಎಚ್ಚರಿಕೆಗೂ ಕಿವಿಗೊಡುತ್ತಿರಲಿಲ್ಲ.
2023ರ ಮೇ 17ರಂದು ತಿರುಪತಿ ದೇವಸ್ಥಾನ ತೋರಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿದ ಅಜಯ, ಆಕೆಯನ್ನು ತಿರುಪತಿಗೆ ಕರೆದೊಯ್ದನು. ಕೆಲವು ದಿನ ತಿರುಪತಿ ದೇವಸ್ಥಾನವನ್ನು ಸುತ್ತಾಡಿಸಿದನು. ಆ ಬಳಿಕ ತಿರುಪತಿ- ಚೆನ್ನೈ ಬೈಪಾಸ್ ರಸ್ತೆ ಸಮೀಪದ ಕೋಣೆಯೊಂದಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಐದು ದಿನ ಅತ್ಯಾಚಾರಎಸಗಿದ್ದಾನೆ. ವಾಪಸ್ ಕರೆದುಕೊಂಡು ಬಂದು, ನಡೆದ ಕೃತ್ಯದ ಬಗ್ಗೆ ಮನೆಯವರಿಗೆ ತಿಳಿಸಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದ.

ಈ ಸಂಬಂಧ ಶಹಾಬಾದ್ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಐ ರಾಘವೇಂದ್ರ ಎಚ್.ಎಸ್. ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋμÁರೋಪ ಪಟ್ಟಿ ಸಲ್ಲಿಸಿದ್ದರು.ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ವಿಶೇಷ ಪೆÇೀಕ್ಸೋ) ಎಫ್‍ಟಿಎಸ್‍ಸಿ-1 ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು, ಅಜಯಗೆ ಪೆÇೀಕ್ಸೋ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿ 30 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ಡಿU. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ.ತುಪ್ಪದ ವಾದ ಮಂಡಿಸಿದ್ದರು. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 7 ಲಕ್ಷ ರೂ. ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.

emedialine

Recent Posts

ಕರ್ಜಗಿ ನೇತೃತ್ವದಲ್ಲಿ ಶೈಕ್ಷಣಿಕ ಸುಧಾರಣಾ ಸಮಿತಿ ರಚನೆ ಕಾಂಗ್ರೆಸ್ ಸರ್ಕಾರದ ದಿವಾಳಿಗೆ ಸಾಕ್ಷಿ: ಅರ್ಜುನ್ ಭದ್ರೆ ಕಿಡಿ

ಕಲಬುರಗಿ: ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸತತವಾಗಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಹಿಂದುಳಿಯುತ್ತಿದ್ದು, ಈ ಭಾಗದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಸಮಿತಿ ರಚನೆ ಮಾಡಿ…

1 hour ago

ಅಂತರ್ ಜಿಲ್ಲಾ ಕುಖ್ಯಾತ ಮನೆಗಳ್ಳರ ಬಂಧನ: 14.70 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಜಪ್ತಿ

ಶಹಾಬಾದ: ತಾಲೂಕಿನ ಮರತೂರ ಗ್ರಾಮದಲ್ಲಿನ ಅಬ್ದುಲ್ ರಜಾಕ್ ಬಾಗೋಡಿ ಅವರ ಮನೆಕಳ್ಳತನವಾಗಿರುವ ಬಗ್ಗೆ ದೂರಿನ್ವಯ ಜಾಡು ಹಿಡಿದ ಪೊಲೀಸರು ಇಬ್ಬರು…

4 hours ago

ನಗರಸಭೆಯ ವಿವಿಧ ಕಾಮಗಾರಿಗಳ ಮಂಜೂರಾತಿಗೆ ಸದಸ್ಯರ ಒಪ್ಪಿಗೆ

ಶಹಾಬಾದ:sನಗರಸಭೆಯ ನೂತನ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆಯ ಸಭಾಂಗಣದಲ್ಲಿ ಸಾಮನ್ಯ ಸಭೆ ನಡೆಯಿತು. ಸಭೆ…

4 hours ago

ಮನ್ನೂರ ಆಸ್ಪತ್ರೆ; ಬಡಜನರಿಗೆ ರಿಯಾಯಿತಿ ದರದಲ್ಲಿ ಕ್ಯಾನ್ಸರ್‌ ಚಿಕಿತ್ಸೆ ನೀಡಲು ನಿರ್ಧಾರ

ಕಲಬುರಗಿ: ಆಹಾರ ಪದ್ಧತಿ, ಒತ್ತಡದ ಜೀವನ ಮತ್ತು ಬೊಜ್ಜು, ಕಲುಷಿತ ಪರಿಸರ, ದೇಹ ದಂಡಿಸದೇ ಇರುವ ಕಾರಣದಿಂದ ಕ್ಯಾನ್ಸರ್ ರೋಗ…

5 hours ago

ದತ್ತಾತ್ರೇಯ ಪಾಟೀಲ್ ರೇವೂರ್ ಗೆ ಸನ್ಮಾನ

ಕಲಬುರಗಿ: ಬಿಜೆಪಿ ಮಹಾನಗರ ಜಿಲ್ಲೆಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಶಿವಲಿಂಗ ಪಾಟೀಲ್ ಸಾವಳಗಿ ಅವರನ್ನು ನೇಮಕ ಮಾಡಿದ ಕಾರಣೀಭೂತರಾದ ದಕ್ಷಿಣ…

5 hours ago

ಬಿಜೆಪಿ ಕಲಬುರಗಿ ಜಿಲ್ಲಾ ಒಬಿಸಿ ಮೋರ್ಚಾಕ್ಕೆ ಆಯ್ಕೆ

ಕಲಬುರಗಿ: ವಿಶ್ವ ಕರ್ಮಾ ಸಮಾಜ ವತಿಯಿಂದ ಬಿಜೆಪಿ ಮಹಾ ನಗರ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷರಾದ ದೇವೇಂದ್ರ ದೇಸಾಯಿ ಕಲ್ಲೂರ್…

5 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420