ಸುರಪುರ: ತಾಲ್ಲುಕಿನಲ್ಲಿಯ ರೈತರಿಗೆ ನೀರು ಒದಗಿಸುವಲ್ಲಿ ಮಾನ್ಯ ಶಾಸಕರಾದ ರಾಜುಗೌಡರ ಶ್ರಮ ದೊಡ್ಡದಿದೆ. ಹಿಂದೆ ಮಾನ್ಯ ಶಾಸಕರು ಮಾತು ಕೊಟ್ಟಂತೆ ಇಂದು ತಾಲ್ಲುಕಿನ ಕೆ.ತಳ್ಳಳ್ಳಿ,ಬಂಡೇರದೊಡ್ಡಿ,ಹಾಳ ಅಮ್ಮಾಪುರ, ಚಿಕ್ಕನಹಳ್ಳಿ,ಬಾಚಿಮಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ರೈತರ ಜಮೀನುಗಳಿಗೆ ಕೆ.ತಳ್ಳಳ್ಳಿಯ ಹಿರೆಹಳ್ಳದಿಂದ ಲಿಫ್ಟ್ ಇರಿಗೇಶನ್ ಮೂಲಕ ನೀರು ಒದಗಿಸಲು ಕಾಮಗಾರಿಗೆ ಅನುಮೋದನೆಗೊಳಿಸಿಕೊಂಡು ರೈತರಿಗೆ ನೆರವಾಗಿದ್ದಾರೆ. ಶಾಸಕರಿಗೆ ನಮ್ಮ ಭಾಗದ ರೈತರು ಆಭಾರಿಗಳಾಗಿದ್ದೆವೆ ಎಂದು ಬಿಜೆಪಿ ರೈತ ಮೋರ್ಚಾದ ಮಾಜಿ ಅಧ್ಯಕ್ಷ ಭಿಮಣ್ಣ ಚಿಕ್ಕನಹಳ್ಳಿ ಮಾತನಾಡಿದರು.
ಕೆ.ತಳ್ಳಳ್ಳಿ ಬಳಿಯ ಹಿರೆಹಳ್ಳದಲ್ಲಿ ಲಿಫ್ಟ್ ಇರಿಗೇಶನ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ,ಆದಷ್ಟು ಬೇಗ ಇಲಾಖೆಯವರು ಕಾಮಗಾರಿ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತರಾದ ಚನ್ನಬಸವ ಕಮತಗಿ,ನಬೀಸಾಬ ಬಡಿಗೇರ,ಸಾಬಣ್ಣ ದೊರೆ,ಗುರ್ಗಪ್ಪ ದೇವಿಕೇರಾ,ಕಾಂತುಗೌಡ ಚೆನ್ನೂರ,ಅಶೋಕ ಮಾಲಗತ್ತಿ,ಗೋಪುರೆಡ್ಡಿ ಕಾಕರಗಲ್,ಆನಂದ ಅಲಗೂರು,ತಿರುಪತಿ ಹಾಗು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿದ್ದರು.
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 114ನೇ ಮನ್ ಕೀ ಬಾತ್ ಕಾರ್ಯಕ್ರಮವನ್ನು ಮುಖಂಡರು ವೀಕ್ಷಣೆ ಮಾಡಿದರು.…
ವಾಡಿ: ಸಾಮಾಜಿಕ ನ್ಯಾಯದ ಹೆಸರಿನ ಮೇಲೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸಹ ಮತ ಹಾಕಿದ ನಮ್ಮನ್ನೇ ನಿರಂತರವಾಗಿ ಮೋಸ ಮಾಡುತ್ತಿರುವುದು…
ಕಲಬುರಗಿ: ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ಜಿಲ್ಲಾಶಾಖೆಯಿಂದ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಫಾರ್ಮಸಿಸ್ಟ್…
ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ರಜತ್ ಮಹೋತ್ಸವಕ್ಕೆ ಪೂಜ್ಯ ಡಾ. ದಾಕ್ಷಾಯಣಿ ಎಸ್. ಅಪ್ಪಾ ಅವರು…
ಕಲಬುರಗಿ: ನಗರದ ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ…
ಕಲಬುರಗಿ: ನಗರದ ರಾಮಮಂದಿರ ಹಿಂದುಗಡೆ ಇರುವ ಸಮಾಜ ಭವನದಲ್ಲಿ ಶ್ರೀ ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ ವತಿಯಿಂದ ಎಸ್ಎಸ್ಎಲ್ಸಿ…