ಬಿದ್ದಾಪುರ ಕಾಲೋನಿಯಲ್ಲಿ: ಔಟ್ ಪೊಲೀಸ್ ಠಾಣೆ ಸ್ಥಾಪನೆಗೆ ಆಯುಕ್ತರ ಸೂಚನೆ

ಕಲಬುರಗಿ: ಇಲ್ಲಿಯ ಬಿದ್ದಾಪುರ ಕಾಲೋನಿಯ ಜಾಧವ ಲೇಔಟ್, ಶಿವನಗರಗಳಲ್ಲಿ ನಿರಂತರವಾಗಿ ಕಳ್ಳತನಗಳು ನಡೆಯುತ್ತಿರುವ ವಿಷಯವನ್ನು ಅರಿತುಕೊಂಡು ಪೊಲೀಸ್ ಆಯುಕ್ತರಾದ ಎಂ.ಎನ್.ನಾಗರಾಜ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಯ ಪಿಐ ಅವರಿಗೆ ಔಟ್ ಪೊಲೀಸ್ ಠಾಣೆ ಸ್ಥಾಪನೆಗೆ ಸೂಚನೆ ನೀಡಿದರು.

ಬಿದ್ದಾಪುರ ಕಾಲೋನಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೆಲ್ಲರೂ ಸೇರಿಕೊಂಡು ಪೊಲೀಸ್ ಆಯುಕ್ತರ ಕಾರ್ಯಾಲಯಕ್ಕೆ ಸೋಮವಾರ ಇಂದು ತೆರಳಿ ಮನವಿ ಪತ್ರ ಸಲ್ಲಿಸಿದ ನಂತರ ಗ್ರಾಮೀಣ ಪೊಲೀಸ ಠಾಣೆಯ ಪಿಐ ಸೋಮಲಿಂಗ ಕಿರೆದಳ್ಳಿ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಳ್ಳತನ ತಡೆ ನಿಯಂತ್ರಣಕ್ಕೆ ಹೆಚ್ಚು ಗಸ್ತು ಹಾಕಿ, ಸಾಧ್ಯವಾದರೆ ಹನುಮಾನ ಗುಡಿ ಬಳಿ ಔಟ್ ಪೊಲೀಸ ಠಾಣೆ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ಹಾಡಹಗಲೇ ಕಳ್ಳತನಗಳು ನಡೆದಿರುವ ಸಂದರ್ಭದಲ್ಲಿ ನಿವಾಸಿಗಳು ಮನೆಗೆ ಕೀಲಿ ಹಾಕಲು ಹೆದರುತ್ತಿದ್ದಾರೆ. ಇನ್ನೂ ರಾತ್ರಿ ಹೊತ್ತು ಕಳ್ಳರ ಹಾವಳಿಯಿಂದ ಎಚ್ಚೆತ್ತುಕೊಂಡು ಕಾವಲು ಕಾಯುವಂತಾಗಿದೆ. ಇದರಿಂದ ಬಿದ್ದಾಪುರ ಕಾಲೋನಿ ನಿವಾಸಿಗಳಿಗೆ ಕಳ್ಳತನದಿಂದ ನೆಮ್ಮದಿ ಹಾಳಾಗಿದೆ. ಬಡಾವಣೆಯಲ್ಲಿ ಹೆಚ್ಚು ಜನ ಪೊಲೀಸರ ಗಸ್ತು ಹಾಕುವಂತೆ ಅನೇಕ ಸಲ ಮನವಿ ಮಾಡಲಾಗಿದ್ದರೂ, ಕಳ್ಳತನ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಬಿದ್ದಾಪುರ ಕಾಲೋನಿಯ ಒಂಬತ್ತನೆ ತರಗತಿಯ ವಿದ್ಯಾರ್ಥಿ ಬಸವರಾಜ ಎಂಬಾತನನ್ನು ಕೆಲ ದಿನಗಳ ಹಿಂದೆ ಅಪಹರಣ ನಡೆಸಿದ್ದರು. ಅಪಹರಣಕ್ಕೊಳಗಾದ ವಿದ್ಯಾರ್ಥಿ ತುಮಕೂರಲ್ಲಿ ಪತ್ತೆಯಾಗಿದ್ದನ್ನು ಮನವಿಯಲ್ಲಿ ನಿವಾಸಿಗಳು ಸ್ಮರಿಸಿದ್ದಾರೆ.

ಬಿದ್ದಾಪುರ ಬಡವಾಣೆಯ ನಾಗರಿಕರು ದೂರನ್ನು ಸಲ್ಲಿಸಬೇಕಾದರೆ, ದೂರದ ಗಂಜ್ ಪ್ರದೇಶದ ಎಪಿಎಂಸಿ ಬಳಿಯ ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಬೇಕಾಗುತ್ತದೆ. ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿದ್ದಾಪುರ ಕಾಲೋನಿ ಬರುತ್ತಿರುವುದರಿಂದ ನಿವಾಸಿಗಳಿಗೆ ಮತ್ತು ಪೊಲೀಸರಿಗೂ ಕಷ್ಟದ ಕೆಲಸವಾಗಿದೆ. ಕೂಡಲೇ ಔಟ್ ಪೊಲೀಸ್ ಠಾಣೆ ಸ್ಥಾಪನೆ ಮಾಡುವುದರಿಂದ ಕಳ್ಳತನ ತಡೆ ಸಾಧ್ಯವಾಗಲಿದೆ ಎಂದು ನಿವಾಸಿಗಳು ಮನವಿ ಪತ್ರದಲ್ಲಿ ಹೇಳಿದ್ದಾರೆ.

ಬಿದ್ದಾಪುರ ಕಾಲೋನಿ ಹನುಮಾನ ಗುಡಿ ಮುಖ್ಯರಸ್ತೆ ಬಳಿ ಬಾಡಿಗೆಗೆ ಯಾರಾದರೂ ಮನೆ ಅಥವಾ ಕಟ್ಟಡ ಕೊಟ್ಟರೆ ಔಟ್ ಪೊಲೀಸ್ ಠಾಣೆಗೆ ಅನುಕೂಲವಾಗಲಿದೆ ಎಂದು ಗ್ರಾಮೀಣ ಪೊಲೀಸ ಠಾಣೆಯ ಪಿಐ ಸೋಮಲಿಂಗ ಅವರು ಕೋರಿದ್ದಾರೆ. ಸಂಘದ ಅಧ್ಯಕ್ಷ ಸಿ.ಎನ್.ಬಾಬಳಗಾಂವ, ಶಿವಶರಣಪ್ಪ ಕರೂಟಿ, ಈರಣ್ಣ ಪಾಟೀಲ, ವಿಜಯಕುಮಾರ ಡಿ, ಬಸವರಾಜ, ಕಲಶೆಟ್ಟಿ, ಸತೀಶ ಪತ್ತಾರ, ಕುಲಕರ್ಣಿ ಮುಂತಾದವರು ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

44 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420