ಸಾಧಕರ ಸಾಮಾರ್ಥ್ಶಕ್ಕೆ ಜ್ಞಾನವೇ ಅಳತೆಗೋಲು: ಹಿರಿಯ ಸಾಹಿತಿ ಡಾ.ಕೃಷ್ಣ ಕುಲಕರ್ಣಿ

ಕಲಬುರಗಿ: ಅತ್ತುನ್ನತ ಸಾಧನೆ ಮಾಡಿದವರಿಗೆ ಯಾವುದೇ ಜಾತಿˌ ಮತˌ ಕುಲಗಳಿಲ್ಲ. ಜ್ಞಾನವೊಂದೇ ಅವರನ್ನು ಗುರುತಿಸುವ ಸಾಧನವಾಗಿದೆ ಎಂದು ವಿಜಯಪುರದ ಹಿರಿಯ ಸಾಹಿತಿ ಡಾ. ಕೃಷ್ಣಾ ಕೊಲ್ಹಾರ ಕುಲಕರ್ಣಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಶಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ಡ ಕನಕದಾಸರ 537ನೇ ಜಯಂತ್ಶುತ್ಸವ ಕಾರ್ಯಕ್ರಮದಲ್ಲಿ ಮುಖ್ಶ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಜ್ಞಾನ ಎಂಬುವುದು ಯಾವುದೇ ಶ್ರೇಣಿಕೃತ ಜಾತಿಗೆ ಸೀಮಿತವಾಗಿಲ್ಲ ಎಂಬುವುದನ್ನು ತೋರಿಸಿಕೊಟ್ಟವರು ಕನಕದಾಸರು. ವೇದˌ ಉಪನಿಷತ್ತುˌ ಭಾಗವತಗಳಿಂದ ಮಾತ್ರ ದೇವರು ಒಲಿಯುವುದಿಲ್ಲˌ ಭಕ್ತಿಗೂ ದೇವರು ಒಲಿಯುತ್ತಾನೆ ಎಂದವರು ಕನಕರು. ಭಕ್ತಿಯೊಂದಿದ್ದರೆ ಸಾಕು. ದೇವರಿಗೆ ಬೇಡಿಕೊಳ್ಳುವ ಸಂದರ್ಭ ಬಂದಾಗ ನನಗೆ ಜ್ಞಾನ ಮತ್ತು ಭಕ್ತಿಗಳು ಮಾತ್ರ ಸಾಕು. ಜ್ಞಾನˌ ಭಕ್ತಿ ಇದ್ದರೆ ವೈರಾಗ್ಶ ತಾನಾಗೆ ಬರುತ್ತದೆ. ನನಗೆ ನಿಂದಿಸಿದವರಿಗೆ ಹಣˌ ಹೊನ್ನುˌ ಮಣ್ಣು ಮತ್ತು ಮಕ್ಕಳು ಕೊಟ್ಟು ಕಾಪಾಡು ಎಂದು ಬಯಸಿದ ಸಂತ ಕನಕದಾಸರಾಗಿದ್ದಾರೆ. ಕಲಿಯುಗದ ಬಗ್ಗೆ 5 ನೂರು ವರ್ಷಗಳ ಹಿಂದೆಯೇ ಮಾತನಾಡಿದ ಕನಕದಾಸˌ ಹರಿಹರ ಪೂಜೆಗಳು ಹಗರಣಗಳಾಗುತ್ತವೆ. ಸುಳ್ಳರುˌ ಕಳ್ಳರು ಸಂಪತ್ತು ಸಂಗ್ರಹಿಸಿ ಮೆರೆಯುತ್ತಾರೆ. ನುಡಿಯುವ ಕಾರ್ಯಗಳು ನಡೆಯುವುದಿಲ್ಲ ಎಂದು ಮೊದಲೇ ಹೇಳಿದ್ದರು. ನಿಂದಿಸಿದವರಿಗೆ ಹಾಲುˌ ತುಪ್ಪˌ ಸಕ್ಕರೆಯ ಊಟ ಸಿಗಲಿ ಎಂದು ಹರಿಸುವ ಗುಣ ಕನಕನಲ್ಲಿತ್ತು ಎಂದರು.

ನಂತರ ಮಾತನಾಡಿದ ಕುಲಪತಿ ಪ್ರೊ.ಪರಿಮಳಾ ಅಂಬೇಕರ್ˌ ಕಬೀರದಾಸರ ಹತ್ತಿರದ ವ್ಶಕ್ತಿ ಕನಕದಾಸರಾಗಿದ್ದಾರೆ. ಜಾತಿಯನ್ನು ಮೀರಿದ ಅತ್ಶಂತ ಸಂವೇಧನಾಶೀಲ ಕವಿ. ಸ್ರಜನರಿಗೆ ಕುಲವೇ ಇಲ್ಲ ಎಂಬುವುದನ್ನು ತೋರಿಸಿಕೊಟ್ಟವರು ಕನಕದಾಸರಾಗಿದ್ದಾರೆ ಎಂದರು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಅಧ್ಶಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ ಪೋತೆˌ ಸ್ವಾತಂತ್ರಭಾತ್ರತ್ವ ಮತ್ತು ಸಮಾನತೆಯನ್ನು ನಾವು ಕನಕದಾಸರಿಂದ ಕಲಿಯಬೇಕಾಗಿದೆ. ಡಾ.ಅಂಬೇಡ್ಕರ್ ಮತ್ತು ಕನಕದಾಸ ಇಬ್ಬರೂ ಸಹ ಯೋಧರ ಕುಟುಂಬದಿಂದ ಬಂದವರು ಎಂಬುವುದನ್ನು ಮರೆಯಬಾರದು. ಈ ಇಬ್ಬರು ಮಹನಿಯರು ಜಾತಿˌ ಶೋಷಣಿಯ ವಿರುದ್ಧ ಧ್ಶನಿ ಎತ್ತಿದ್ದಾರೆ ಎಂದರು.

ಕನಕದಾಸ ಒಬ್ಬ ಕವಿˌ ಸಾಮಾಜಿಕ ಚಿಂತಕ ಎನ್ನುವುದನ್ನು ನಾವು ಮರೆಯಬಾರದು. ಸಮಾಜವನ್ನು ಸರಿ ದಾರಿಗೆ ತರಲು ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದಾರೆ. ಇವರ ಆದರ್ಶಮಯ ಬದುಕು ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು ಎಂದರು. ನಂತರ ಅತಿಥಿಗಳಾದ ಡಾ.ಚಂದ್ರಕಲಾ ಬಿದರಿ ಮಾತನಾಡಿದರು. ಕುಲಸಚಿವ ಪ್ರೊ.ಸಿ.ಸೋಮಶೇಖರˌ ಮೌಲ್ಶಮಾಪನ ಕುಲಸಚಿವ ಪ್ರೊ.ಸಂಜೀವಕುಮಾರ ಕೆ.ಎಂˌˌ ವಿತ್ತಾಧಿಕಾರಿ ಪ್ರೊ.ಬಿ.ವಿಜಯˌ ಪ್ರೊ.ಎಂ.ಎಸ್.ಪಾಸೋಡಿˌ ಪತ್ರಿಕೋದ್ಶಮ ವಿಭಾಗದ ಮುಖ್ಶಸ್ಥ ಪ್ರೊ.ಡಿ.ಬಿ. ಪಾಟೀಲ್ ಸೇರಿದಂತೆ ಇತರರು ಇದ್ದರು.

emedialine

Recent Posts

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

13 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

13 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

13 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

13 hours ago

ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು

ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…

13 hours ago

ಜುಡೋಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420