ಬಿಸಿ ಬಿಸಿ ಸುದ್ದಿ

24ಕ್ಕೆ ಕಲಬುರಗಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಆಚರಣೆ

ಕಲಬುರಗಿ: ಇಡೀ ವಿಶ್ವದಲ್ಲಿಯೇ ಅತ್ಯಂತ ಪ್ರಸಿದ್ಧ ಹಾಗೂ ಹೆಚ್ಚಿನ ಭಕ್ತರು ದರ್ಶನ ಪಡೆಯುವ ದೇವಾಲಯವೆಂದರೆ ತಿರುಪತಿ ತಿರುಮಲದ ವೆಂಕಟೇಶ್ವರ ದೇವಾಲಯ. ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಸ್ಥಾನದ ಅನೇಕ ಸೇವೆಗಳಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸೇವೆಯೂ ಒಂದು.  ಪ್ರತಿದಿನವು ತಳಿರು ತೋರಣ ಕಟ್ಟಿ ಮುಂಜಾನೆ ಶ್ರೀನಿವಾಸ ಮತ್ತು ಭೂದೇವಿ, ಶ್ರೀದೇವಿಯವರ ಮದುವೆ ಜರುಗುವುದು ಪರಂಪರೆ ಇದನ್ನೆ ಶ್ರೀನಿವಾಸ ಕಲ್ಯಾಣೋತ್ಸವ ಎಂದು ಪ್ರಸಿದ್ಧಿಪಡೆದಿದೆ ಎಂದು ಶ್ರೀ ಪವನಜಿ ಮಹಾರಾಜ ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಯಲ್ಲಿ ಮಾತನಾಡಿ ಬಡವರು, ಅಸಹಾಯಕರು ತಿರುಪತಿಗೆ ಹೋಗಿ ದೇವರ ದರ್ಶನ ಪಡೆಯಲಾಗದವರಿಗೆ ದರ್ಶನಭಾಗ್ಯ ಕಲ್ಪಿಸಲು ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯವರು ಭಕ್ತರ ಕೋರಿಕೆಯ ಮೆರೆಗೆ ಈ ಶ್ರೀನಿವಾಸ ಕಲ್ಯಾಣವನ್ನು ತೊರುಪತಿ ಕ್ಷೇತ್ರದ ಹೊರಗಡೆಯೂ ಕೂಡ ಈ ಸೇವೆಯನ್ನು ಮಾಡಲು ಅನುಮತಿ ಕೊಡುವವರು. ಈ ಸೇವೆಗೆ ಇಚ್ಛೆಯುಳ್ಳ ಭಕ್ತರು ಮೊದಲೆ ಅರ್ಜಿಸಲ್ಲಿಸಬೇಕಾಗುತ್ತದೆ. ಕೆಲವರಿಗೆ ಅರ್ಜಿಸಲ್ಲಿಸಿದ ಹತ್ತು ವರ್ಷ ಇಲ್ಲವೇ ಐದು ವರ್ಷಕ್ಕೆ ಅನುಮತಿ ದೊರೆಯು ಸಾಧ್ಯತೆ ಇರುತ್ತದೆ. ಕಲಬುರಗಿ ಜನರ ಅದೃಷ್ಟವೆಂಬಂತೆ ಈ ಅನುಮತಿಯು ಕೇವೆಲ ಎರಡು ವರುಷದಲ್ಲಿಯೇ ಸಿಕ್ಕಿದೆ.

ಕಲಬುರಗಿಯ ಹಿರಿಯ ಉದ್ಯಮಿ ಮತ್ತು ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತರಾದ ಫಾರ್ಚೂನ ಜೀಯೋಫೋನಿಕ್ಸ್ ಕಂಪನಿಯ ಮಾಲೀಕರಾದ ಶ್ರೀ ಸಂಜೀವ ಲಕ್ಮೀನಾರಾಯಣ ಗುಪ್ತಾರವರು ಸಲ್ಲಿಸಿದ ಅರ್ಜಿಗೆ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಿಳಿಯುವರು ಸ್ಥಳ ಪರೀಕ್ಷೆ, ವ್ಯವಸ್ಥಾಪನಾ ಸಾಮರ್ಥ್ಯಗಳನ್ನು ಪರೀಶಿಲಿಸಿ ಕಲಬುರಗಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸಲು ಅನುಮತಿ ಕೊಟ್ಟಿರುತ್ತಾರೆ.

ಇದೇ ನವ್ಹೆಂಬರ್ 24 ರಂದು ಸಂಜೆ 5:30ಕ್ಕೆ ಈ ಕಾರ್ಯಕ್ರಮ ನಗರದ ಎನ್.ವ್ಹಿ. ಮೈದಾನದಲ್ಲಿ ಜರುಗುವುದು ಇದಕ್ಕಾಗಿ ಈಗಾಗಲೇ ಶ್ರೀನಿವಾಸ ಕಲ್ಯಾಣೋತ್ಸವ  ಸಮಿತಿ ರಚಿಸಿದ್ದು ಇದರಲ್ಲಿ ಸುಮಾಋಉ ೧೪ ಸಮಿತಿ ರಚಿಸಿ ಸುಮಾರು ೨೦೦೦ ಜನ ಸ್ವಯಂ ಇಚ್ಛೆಯಿಂದ ದೇವರ ಸೇವೆಗೆ ದುಡಿಯುತ್ತದ್ದಾರೆ. ಎನ್.ವ್ಹಿ. ಮೈದಾನದಲ್ಲಿ ಸುಮಾಋಉ ೨೦,೦೦೦ ಜನ ಕುಳಿತುಕೊಳ್ಳುವಂತೆ ಬೃಹತ ಪೆಂಡಾಲುಗಳ ವ್ಯವಸ್ಥೆ ಮಾಡಲಾಗುವುದು. ಈ ಸಮಾರಂಭಕ್ಕೆ ಬರುವ ಎಲ್ಲರಿಗೂ ಉಚಿತ ಪಾಸಗಳನ್ನು ವಿತರಿಸುವ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈಗಾಗಲೇ ೧೬೦೦೦ ಪಾಸಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕಲಬುರಗಿಯ ಎಲ್ಲ ಮಹಾಜನರು ಉಚಿತ ಪಾಸಗಳ ತೆಗೆದುಕೊಂಡು ದರುಶನ ಪಡೆಯಬೇಕೇಂದು ಸಮಿತಿ ಕೊರುತ್ತದೆ.

ದರುಶನಕ್ಕೆ ಬಂದ ಭಕ್ತಾದಿಗಳಿಗೆ ಲಡ್ಡು, ಗೋವಿಂದನಾಮಾವಳಿ ಮತ್ತು ಭಗವದ್ಗಿತೆ ಪುಸ್ತಕದ ಜೊತೆಗೆ ಪ್ರಸಾದವನ್ನು ಕೊಡಲಾಗುವುದು. ಪಾಸ್ ಸ್ವೀಕರಿಸಿದ ಎಲ್ಲ ಭಕ್ತರು ಕಾರ್ಯಕ್ರಮಕ್ಜಕೆ ಮುಂಚಿತವಾಗಿ ಅಂದರೆ ೫:೦೦ ಗಂಟೆಯ ಒಳಗಡೆ ಬಂದು ತಮ್ಮ ಸ್ಥಳದಲ್ಲಿ ಆಸೀನರಾಗಬೇಕೆಂದು ಕೇಳಿಕೊಳ್ಳುತ್ತೇವೆ. ಈ ಕಾರ್ಯಕ್ರಮಕ್ಕೆ ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧೀಪತಿಗಳಾದ ಶ್ರೀ ಶರಣಬಸವಪ್ಪಾ ಅಪ್ಪಾ, ಕೋಟನೂರು ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು, ಮತ್ತು ಶಾಸಕರು, ಸಂಸದರು, ಸೇರಿ ಸುಮಾರು ೨೦೦೦೦ ಜನರು ಆಗಮಿಸುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮಕ್ಕೆ ಶ್ರೀ ಸಂಜಿವ ಎಲ್. ಗುಪ್ತಾ ಪರಿವಾರದವರೇ ಎಲ್ಲ ಖರ್ಚುವೆಚ್ಚುಗಳ ನಿವೃಹಣೆಯನ್ನು ನೋಡಿಕೊಳ್ಳಲಿದ್ದಾರೆ. ಅದರ ಜೊತೆಗೆ ಸಮಿತಿಯ ಎಲ್ಲ ಸದಸ್ಯರು ತನುಮನದ ಸೇವೆ ಸಿದ್ಧರಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಲಬುರಗಿಯ ಎಲ್ಲ ಸಮಾಜ, ವೈಶ, ಬ್ರಾಹ್ಮಣ, ಮಾರವಾಡಿ, ಜೈನ, ವೀರಶೈವ ಸಮಾಜದ ಎಲ್ಲ ಮುಖಂಡರು, ಭಕ್ತಾದಿಗಳುಸೇವೆಸಲ್ಲಿಸುತ್ತದ್ದಾರೆ. ಇನ್ನೂ ಮೂರು  ದಿನ ಬಾಕಿ ಉಳಿದಿದ್ದು ಇಚ್ಚೆಯುಳ್ಳ ಭಕ್ತಾದಿಗಳಿಗೆ ಉಚಿತ ಪಾಸ ವಿತರಿಸುವ ವ್ಯವಸ್ಥಯನ್ನು ಮಾಡಲಾಗಿದೆ.

ಶ್ರೀ ಶರಣು ಮೋದಿ , ಸಂಜಿವ ಎಲ್. ಗುಪ್ತಾ, ಶ್ರೀಮತಿ ಮಂಜುಳಾ ಎಸ್. ಗುಪ್ತಾ, ಭರತ ಗುಪ್ತಾ, ಡಾ.ವೇಣುಗೋಪಾಲ ಮಂತ್ರಿ, ಡಾ. ಶಿವರಾಜ ಪಾಟೀಲ, ಡಾ.ವಿರೇಶ ಸಲಗರ, ಡಾ. ರಶ್ಮಿ ಸಲಗರ, ಹಾಗೂ ಇತರರು ಉಪಸ್ಥಿತರಿದ್ದರು.

emedialine

Recent Posts

ಮಕ್ಕಳ ಸೃಜನಶೀಲತೆ ಅನಾವರಣಗೊಳಿಸಿದ ಮಣ್ಣೆತ್ತಿನ ಸ್ಪರ್ಧೆ

ರಾವೂರ: ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಮಣ್ಣೆತ್ತಿನ ಸ್ಪರ್ಧೆಯ ಅಂಗವಾಗಿ ಹಮ್ಮಿಕೊಂಡಿದ್ದ ಮಣ್ಣೇತ್ತು ಮಾಡುವ ಸ್ಪರ್ಧೆಯಲ್ಲಿ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡು…

3 hours ago

ವಾಡಿ: ಕುಸ್ತಿ ಪಂದ್ಯಾವಳಿ: 50ಗ್ರಾಂ.ಬೆಳ್ಳಿ ಕಡಗ ವಿಜೇತ ಮಂಜುನಾಥ

ಇಂಗಳಗಿ ಹಜರತ್ ಸೈಯದ್ ಶೇರ್.ಖಾನ್.ವಲಿ ದುರ್ಗಾದ 621ನೇ ಜಾತ್ರಾ ಮಹೋತ್ಸವ ವಾಡಿ: ಪಟ್ಟಣ ಸಮೀಪದ ಇಂಗಳಗಿ ಗ್ರಾಮದ ಹಜರತ್ ಸೈಯದ್…

3 hours ago

ಹಿರಿಯ ನಾಗರಿಕರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಅಗತ್ಯ: ಅರ್ಥಶಾಸ್ತ್ರಜ್ಞ ವಿಜಯ್ ದೇಶಮುಖ್

ಕಲಬುರಗಿ: ದೇಶದ ಹಿರಿಯ ನಾಗರಿಕರನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರವು ಹಿರಿಯ ನಾಗರಿಕರ ಸಚಿವಾಲಯವನ್ನು…

5 hours ago

ಪ್ರಣವ್ ಮೆಂಡನ್ ಫಿಸಿಯೋಥೆರಪಿ ಪದವಿ ಪ್ರದಾನ

ಕಲಬುರಗಿ : ಜಿಲ್ಲಾ ಹೋಟೆಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯರಾದ ನರಸಿಂಹ ಮೆಂಡನ್ ಅವರ…

6 hours ago

ಕನ್ನಡ ಸಾಹಿತ್ಯಕ್ಕೆ ಕಮಲ ಹಂಪನಾ ಕೊಡುಗೆ ಅಪಾರ: ಹಣಮಂತ್ರಾಯ ಕಾಳನೂರ

ಯಾದಗಿರಿ : ಆಧುನಿಕ ಸಾಹಿತ್ಯದ ಪ್ರಕಾರಗಳಾದ ನವ್ಯ,ನವೋದಯ,ಪ್ರಗತಿಶೀಲ,ದಲಿತ ಬಂಡಾಯದ ಕಾವ್ಯ,ಕಥೆ,ಕಾದಂಬರಿ ಹಾಗೂ ನಾಟಕ ಮುಂತಾದ ಪ್ರಕಾರಗಳಲ್ಲಿ ಸ್ತ್ರೀ ಸಂವೇದನೆಗೆ ವಿಶೇಷವಾದ…

6 hours ago

ನಾಡೋಜ ಪಾಟೀಲ್ ಪುಟ್ಟಪ್ಪ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ: ಜುಲೈ 7ರಂದು

ಬೆಂಗಳೂರು: ಜಗತ್ತಿನ ಪ್ರಚಲಿತ ವಿದ್ಯಮಾನಗಳ ಮಾಹಿತಿ ನೀಡುವ ಪತ್ರಕರ್ತರು ಹಗಲುರಾತ್ರಿ ಎನ್ನದೇ ಕಷ್ಟವಾದರೂ ಇಷ್ಟಪಟ್ಟು ವರದಿ ಮಾಡುವ ಮಾಧ್ಯಮ ಮಿತ್ರರಿಗೆ,…

11 hours ago