ಬೆಳಗಾವಿ: ವಾಲೀಕಾರ ನೆನೆದು ಕಣ್ಣೀರಿಟ್ಟ ಬರಗೂರ

ಬೆಳಗಾವಿ: ಸೋಮವಾರ ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯಿಂದ ಅಗಲಿದ ಹಿರಿಯ ಬಂಡಾಯ ಸಾಹಿತಿ ಚೆನ್ನಣ್ಣ ವಾಲೀಕಾರ ಅವರಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.

ಎಲ್ಲ ಸರ್ವಾಧಿಕಾರಿಗಳಿಗಿಂತ ದೊಡ್ಡ ಸರ್ವಾಧಿಕಾರಿ ಸಾವು. ಬೇರೆ ಸರ್ವಾಧಿಕಾರಿಗಳನ್ನು ಸೋಲಿಸ್ತೀವಿ ಆದರೆ ಸಾವನ್ನು ಸೋಲಿಸಲು ಸಾಧ್ಯವಿಲ್ಲ. ಎಲ್ಲರನ್ನೂ ಸಾಯಿಸುವಂತ ಸಾವಿಗೆ ಸಾವಿಲ್ಲ ಹೀಗಾಗಿ ಚೆನ್ನಣ್ಣ ವಾಲೀಕಾರರಿಗೆ ಸಾವಿದೆ ಚೆನ್ನಣ್ಣನ ಸಾಹಿತ್ಯಕ್ಕೆ ಸಾವಿಲ್ಲ ಎಂದು ಮಾತನಾಡುತ್ತಲೇ ಚೆನ್ನಣ್ಣನ್ನು ನೆನೆದು ನಾಡೋಜ ಬರಗೂರು ರಾಮಚಂದ್ರಪ್ಪ ಕಣ್ಣೀರಿಟ್ಟರು.  ಸೋಮವಾರ ಮಧ್ಯಾಹ್ನ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಏರ್ಪಡಿಸಿದ್ದ “ಚೆನ್ನಣ್ಣ ವಾಲೀಕಾರ್ ಅವರ ಶೃದ್ಧಾಂಜಲಿ ಸಭೆ”ಯಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಚೆನ್ನಣ್ಣ ವಾಲೀಕಾರ್ ಅವರು ಸಾಹಿತ್ಯ ರಚನೆಯಲ್ಲಿ ಅನೇಕ ಹೊಸಬಗೆಯ ಪ್ರಯೋಗಗಳನ್ನು ಮಾಡಿದರೂ ಮನುಷ್ಯ ಸಂಬಂಧವನ್ನೇ ಪ್ರತಿಪಾದಿಸುತಿದ್ದರು.

ಸಾಹಿತ್ಯ ಮತ್ತು ಸಮಾಜದಲ್ಲಿ ಮನುಷ್ಯ ಸಂಬಂಧದ ಸಂವೇದನೆ ಬಹಳ ಮುಖ್ಯ. ಬಹಳಷ್ಟು ಲೇಖಕರು ಸಿದ್ದಾಂತವನ್ನು ಸೆರೆಮನೆ ಮಾಡಿಕೊಂಡಿದ್ದರೂ ಅವರು ತಾವು ನಂಬಿದ ಸಿದ್ದಾಂತದ ಸೆರೆಮನೆಯಲ್ಲಿರಲ್ಲ, ಸಿದ್ದಾಂತದ ವಿಷಯದಲ್ಲಿ ಮೀರುವಿಕೆಯಿತ್ತು, ಜಡವಾಗದ ಸಂವೇದನೆಯಿತ್ತು. ಟೀಕೆಗಳನ್ನು ಸ್ವಾಗತಿಸಿ ಆನಂದಿಸುತ್ತಿದ್ದ ಚೆನ್ನಣ್ಣ ಬರವಣಿಗೆಯನ್ನು ತಪಸ್ಸಿನಂತೆ ಮಾಡುತ್ತಿದ್ದರು. ಅವರು ಚಳುವಳಿ ಮತ್ತು ಮನುಷ್ಯ ಸಂಬಂಧಕ್ಕಿರಬೇಕಾದ ಸಂಬಂಧವನ್ನು ತೋರಿಸಿಕೊಟ್ಟಂತ ರೂಪಕವಾಗಿದ್ದರು ಎಂದು ಅವರ ವ್ಯಕ್ತಿತ್ವವದ ಹಲವು ನಿದರ್ಶನಗಳನ್ನು ವಿವರಿಸಿದರು.

ಬಂಡಾಯ ಸಾಹಿತಿಗಳಾದ ಸರಜೂ ಕಾಟ್ಕರ್, ಸತೀಶ್ ಕುಲಕರ್ಣಿ, ಟಿ. ಆರ್. ಚಂದ್ರಶೇಖರ್ ಅಗಲಿದ  ವಾಲೀಕಾರ್ ಅವರ ಸಾಹಿತ್ಯ ಮತ್ತು ಮಾನವೀಯ ಅಂತಃಕರಣದ ಕುರಿತು ಮಾತನಾಡಿದರು. ಹಿರಿಯ ಸಾಹಿತಿಗಳಾದ ರಾಘವೇಂದ್ರ ಪಾಟೀಲ, ಡಿ. ಎಸ್. ಚೌಗಲೆ, ರಾಮಕೃಷ್ಣ ಮರಾಠೆ, ಸಿ. ಕೆ  ನಾವಲಗಿ, ಎಸ್. ಎಸ್. ಅಂಗಡಿ, ಎ. ಎ. ಸನದಿ, ಸಿದ್ದಗಂಗಮ್ಮಾ, ಆಶಾ ಕಡಪಟ್ಟಿ, ನದೀಮ್ ಸನದಿ ಕಾರ್ಮಿಕ ಚಳುವಳಿಯ ಮುಖಂಡರಾದ ಜಿ. ವಿ. ಕುಲಕರ್ಣಿ, ಎಲ್. ಎಸ್. ನಾಯಕ್ ಅಧ್ಯಾಪಕರುಗಳಾದ ಪಿ. ನಾಗರಾಜ್, ಶೋಭಾ ನಾಯಕ, ಶಂಕರ್  ಬಾಗೇವಾಡಿ,ಅಡಿವೆಪ್ಪ ಇಟಗಿ, ಮಲ್ಲಿಕಾರ್ಜುನ ಲೋಕಳೆ, ಮಹೇಶ್ ಢಾಲೆ, ಬಿ. ಎನ್ ಕಸಾಳೆ, ಅತೀಶ್ ಢಾಲೆ, ಸಂತೋಷ್ ನಾಯಕ  ವಿದ್ಯಾರ್ಥಿ ಮುಖಂಡರಾದ ಬಾಲಕೃಷ್ಣ ನಾಯಕ, ಮಂಜುನಾಥ ಪಾಟೀಲ, ಅನೀಲ್ ನಡೂವಿನಕೇರಿ, ಸೈದಪ್ಪ ಹಿರೇಮನಿ, ಹನುಮಂತ ಯರಗಟ್ಟಿ, ಸುನೀಲ್ ನಾಟೀಕಾರ್, ಸಚಿನ್ ಮಾಳಗೆ, ಧರ್ಮಣ್ಣ ಮಾದರ, ನಿಂಗಪ್ಪ ಮಸ್ತಿ, ಶಿವರಾಜ್ ಗಸ್ತಿ, ಸಾಗರ್ ನಾಯಕ, ನಕುಶಾ, ನಿಖಿತಾ ಭೈರಣ್ಣವರ, ಗೋಪಿಕಾ ಹೇರಗೆ, ಬೇಬಿ ಕುತಿಜಾ, ಬಾಳವ್ವ ಶಿವನಾಯಕರ, ಭೀಮಾರತಿ ಕುಂದರಗಿ ಮುಂತಾದವರು ಭಾಗವಹಿಸಿದ್ದರು.

ಪ್ರಾರಂಭದಲ್ಲಿ ಚೆನ್ನಣ್ಣ ವಾಲೀಕಾರ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮೌನ ಆಚರಿಸಲಾಯಿತು. ಹೋರಾಟದ ಹಾಡುಗಾರ್ತಿ ಕಾವೇರಿ ಬುಕ್ಯಾಳಕರ ಅವರು ಚೆನ್ನಣ್ಣ ವಾಲೀಕಾರ್ ಅವರು ಬರೆದ ‘ ನೀ ಹೋದ ಮರುದಿನ’ ಹಾಡು ಹಾಡಿ ಚಾಲನೆ ನೀಡಿದರು. ಸಂಘಟಕ, ಬಂಡಾಯ ಸಾಹಿತಿ ಯಲ್ಲಪ್ಪ ಹಿಮ್ಮಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

17 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

22 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420