ವಾಡಿ: ನಲವತ್ತಕ್ಕೂ ಹೆಚ್ಚು ಬಸ್ಗಳು ಸಂಚಾರ ಆರಂಭಿಸಿದ್ದರೂ ಜನರಿಗೆ ಕೂಡಲು ಜಾಗ ಸಿಗುವುದಿಲ್ಲ. ನಿಂತು ಪ್ರಯಾಣಿಸಬೇಕು ಎಂದರೂ ಕಾಲಿಡಲು ಸ್ಥಳವಿಲ್ಲ. ಕಂಡೆಕ್ಟರ್ ಎದ್ದು ಪ್ರಯಾಣಿಕರಿಗೆ ಟಿಕೆಟ್ ವಿತರಿಸಲು ಆಗದಂತಹ ಉಸಿರುಗಟ್ಟುವ ವಾತಾವರಣ. ಈ ಭಾಗದ ಬಸ್ ಪ್ರಯಾಣ ಎಂಬುದು ಅಕ್ಷರಶಃ ನರಕಸದೃಶ್ಯ ಸಂಕಟ!
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ-ಯಾದಗಿರಿ ಘಟಕಗಳ ಬಸ್ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.
ಕಲಬುರಗಿ-ಸೊಲ್ಲಾಪುರ ಮಧ್ಯೆ ಹಳಿ ಜೋಡಣೆ ಕಾಮಗಾರಿ ನಡೆಯುತ್ತಿರುವ ಕಾರಣ ನ.೨೮ರ ವರೆಗೆ ಈ ಭಾಗದ ಬಹುತೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ. ಪರಿಣಾಮ ಯಾದಗಿರಿ-ವಾಡಿ-ಕಲಬುರಗಿ ನಡುವೆ ಸಂಚರಿಸುವ ಎಕ್ಸ್ಪ್ರೆಸ್ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಜನರು ಹತ್ತುವ ಮುಂಚೆಯೇ ಬಸ್ಗಳು ಓಡುತ್ತವೆ. ಪ್ರಯಾಣಿಕರು ಕೂಗಿ ಕರೆದರೂ ಬಹುತೇಕ ಬಸ್ಗಳು ನಿಲ್ಲಿಸದೆ ಓಡುತ್ತಿವೆ. ಇನ್ನೂ ಕೆಲವು ವಾಡಿ ಹೊರ ವಲಯದ ಮಾರ್ಗದಿಂದ ನಿಯಮಬಾಹೀರವಾಗಿ ಸಂಚರಿಸುತ್ತಿವೆ. ಇದು ಪ್ರಯಾಣಿಕರ ಗೋಳಾಟಕ್ಕೆ ಕಾರಣವಾಗಿದೆ.
ಕಲಬುರಗಿ ಹಾಗೂ ಯಾದಗಿರಿ ಸಾರಿಗೆ ಘಟಕದಿಂದ ಬಿಡಲಾಗಿರುವ ೪೦ ಬಸ್ಗಳ ಸಂಖ್ಯೆ ಪ್ರಯಾಣಿಕರ ಸಂಖ್ಯೆಗಿಂತ ಕಡಿಮೆಯಾಗಿದೆ. ಈ ಭಾಗದಲ್ಲಿ ಸಂಚರಿಸುತ್ತಿರುವ ಎಲ್ಲಾ ಬಸ್ಗಳು ಮಿತಿಮೀರಿ ಪ್ರಯಾಣಿಕರನ್ನು ಸಾಗಿಸುತ್ತಿವೆ. ಆದರೂ ಕೂಡ ಸಾಕಷ್ಟು ಜನ ಪ್ರಯಾಣಿಕರು ಬಸ್ ಪ್ರಯಾಣದಿಂದ ವಂಚಿತರಾಗುತ್ತಿದ್ದಾರೆ.
ಯಾದಗಿರಿಯಿಂದ ಬರುವ ಬಸ್ಗಳಲ್ಲಿ ಕಲಬುರಗಿ ಪ್ರಯಾಣಿಕರು ಮತ್ತು ಕಲಬುರಗಿಯಿಂದ ಹೊರಡುವ ಬಸ್ಗಳಲ್ಲಿ ಯಾದಗಿರಿ ಪ್ರಯಾಣಿಕರಿಂದ ಭರ್ತಿಯಾದಾಗ ವಾಡಿ, ನಾಲವಾರ, ರಾವೂರ, ಶಹಾಬಾದ, ಭಂಕೂರ, ಮಾಲಗತ್ತಿ, ಯರಗೋಳ ಬಸ್ ನಿಲ್ದಾಣದಲ್ಲಿ ಕಾಯ್ದು ಕುಳಿತವರಿಗೆ ಜಾಗವಿಲ್ಲದಂತಾಗುತ್ತಿದೆ. ತುಂಬಿದ ಬಸ್ಗಳಲ್ಲಿ ಹತ್ತಿ ಸಂಚರಿಸುವವರು ೪೪ ಕಿ.ಮೀ ರಸ್ತೆ ಕ್ರಮಿಸುವವ ವರೆಗೂ ನಿಂತು ಹಿಂಸೆ ಅನುಭವಿಸಬೇಕಾದ ಅನಿವಾರ್ಯ ಪರಸ್ಥಿತಿ ಉಂಟಾಗಿದೆ ಎಂದು ಪ್ರಯಾಣಿಕರು ಉದಯವಾಣಿ ಎದುರು ಅಳಲು ಹೇಳಿಕೊಂಡಿದ್ದಾರೆ.
ಕಲಬುರಗಿ-ಯಾದಗಿರಿ ಮಧ್ಯೆ ಸಂಚರಿಸುವ ಬಸ್ಗಳು ಕಡ್ಡಾಯವಾಗಿ ವಾಡಿ ಪಟ್ಟಣ ಪ್ರವೇಶ ಪಡೆಯಬೇಕು. ರೈಲು ಸಂಚಾರ ಆರಂಭವಾಗುವ ವರೆಗೂ ಹೆಚ್ಚಿನ ಬಸ್ ವ್ಯವಸ್ಥೆ ಒದಗಿಸಬೇಕು. ವಾಡಿ-ರಾವೂರ ಮಧ್ಯೆ ಕಳೆದ ೧೨ ತಿಂಗಳಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಅಲ್ಲಲ್ಲಿ ಸ್ಥಗಿತಗೊಂಡಿದೆ. ಬೇಕಾಬಿಟ್ಟಿ ನಿರ್ಮಿಸಲಾದ ರಾವೂರ ಸಿಸಿ ರಸ್ತೆ ವಾಹನಗಳಿಗೆ ತಾಗಿ ಬಸ್ಗಳು ಮಾರ್ಗ ಬದಲಿಸುವಂತಾಗಿದೆ. ಬಸ್ ಪ್ರಯಾಣಕರು ವಿವಿಧ ಸಮಸ್ಯೆಗಳಿಂದ ಗೋಳಾಡುತ್ತಿದ್ದರೂ ಕೂಡ ಸಂಸದ ಡಾ.ಉಮೇಶ ಜಾಧವ ಹಾಗೂ ಜಿಲ್ಲಾ ಉಸ್ತೂವಾರಿ ಸಚಿವ ಗೋವಿಂದ ಕಾರಜೋಳ ಅವರು ಕ್ರಮಕ್ಕೆ ಮುಂದಾಗದಿರುವುದು ಜನರ ಅಸಮಾಧಾನಕ್ಕೆ ಗುರಿಯಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…