ಸುರಪುರ: ತಾಲೂಕಿನ ಹುಣಸಗಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕುಮಾರಿ ಧನ್ಯಶ್ರೀ ಮಹಾಂತೇಶ ಮುರಾಳರ ಹುಟ್ಟು ಹಬ್ಬದ ಅಂಗವಾಗಿ ಸಾವಿರ ಮಕ್ಕಳಿಗೆ ಬಟ್ಟೆ ಚೀಲಗಳ ವಿತರಿಸುವ ಮೂಲಕ ಪರಿಸರ ಜಾಗೃತಿ ನಮ್ಮ ನಿಮ್ಮ ಹೊಣೆ ಎಂದು ಅರಿವು ಮೂಡಿಸಲಾಯಿತು.
ಧನ್ಯಶ್ರೀಯ ಏಳನೆ ವರ್ಷದ ಹುಟ್ಟು ಹಬ್ಬವನ್ನು ವಿಶಿಷ್ಟವಾಗಿ ಆಚರಿಸಬೇಕೆಂಬ ಬಯಕೆ ಹೊಂದಿದ್ದ ಮಹಾಂತೇಶ ಮುರಾಳ ದಂಪತಿಗಳು ಇಂದು ಪ್ಲಾಸ್ಟಿಕ್ ಎಂಬ ರಾಕ್ಷಸ ಹೇಗೆ ಪರಿಸರ ಹಾಳು ಮಾಡುತ್ತಿದೆ ಎಂಬುದರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಚರಣೆ ಮಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಸೇವಾ ಕಾರ್ಯಕರ್ತ ನಂದುಲಾಲ್ ಠಾವಣಿ ಮಾತನಾಡಿ,ಪರಿಸರ ಮನುಷ್ಯನಿಗೆ ಏನೆಲ್ಲವನ್ನು ಕೊಟ್ಟಿದ್ದರು ಅದಕ್ಕೆ ನಾವೇನು ಕೊಡುವುದಿಲ್ಲ.ಆದಕಾರಣ ಕನಿಷ್ಟ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಭಾರತ ಸ್ವಚ್ಛ ಸುಂದರ ಭಾರತ ಹಾಗು ಮಕ್ಕಳ ಸುಂದರ ಬಾಲ್ಯ ನಿರ್ಮಿಸುವುದು ಹೇಗೆ ಎಂಬ ವಿಷಯದ ಕುರಿತು ಶಿಕ್ಷಕ ಸಾಹೇಬಗೌಡ ಬಿರೆದಾರ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ,ಸುಂದರ ಪರಿಸರ ನಮ್ಮದಾಗಿದೆ ಅದನ್ನು ಹಾಳು ಮಾಡುವುದು ಮನುಷ್ಯನ ವಿಕೃತಿಯಾಗಿದೆ.ಪ್ಲಾಸ್ಟಿಕ್ ಬಳಕೆಯಿಂದ ಪಶುಪಕ್ಷಿ ಜಲಚರಗಳಿಗು ಅಪಾಯವಿದೆ.ಮಣ್ಣಿನ ಗುಣಮಟ್ಟವು ಹಾಳಾಗುತ್ತದೆ.ಮನುಷ್ಯನ ಆರೋಗ್ಯದ ಮೇಲು ಪರಿಣಾಮ ಬೀರುತ್ತದೆ ಆದ್ದರಿಂದ ನಾವು ಮನೆಯಿಂದ ಹೋಗುವಾಗ ಇಂತಹ ಬಟ್ಟೆಯ ಚೀಲಗಳನ್ನು ಬಳಸಬೇಕೆಂದು ತಿಳಿಸಿದರು.ಈಗ ನೀವೆಲ್ಲರು ತೆಗೆದುಕೊಂಡ ಬಟ್ಟೆ ಚೀಲಗಳನ್ನು ನಿಮ್ಮ ಮನೆಯವರಿಗೆ ನೀಡಿ ಅವರಿಗೂ ಇದರ ಬಗ್ಗೆ ತಿಳಿಸುವಂತೆ ಕರೆ ನೀಡಿದರು.ಮಗಳ ಹುಟ್ಟು ಹಬ್ಬದ ಕಾರಣದಲ್ಲಿ ಇಂತಹ ಪರಿಸರ ಕಾಳಜಿ ತೋರಿದ ಮಹಾಂತೇಶ ಮುರಾಳ ದಂಪತಿಗಳ ಸೇವೆ ಅಮೋಘವಾಗಿದೆ ಎಂದರು.
ಕಾರ್ಯಕ್ರಮದ ಕುರಿತು ಬಸವರಾಜ ಮೇಲಿನಮನಿ ಮಾತನಾಡಿ,ಪರಿಸರ ಸಂರಕ್ಷಣೆ ಹಾಗು ದೇಶಾಭಿಮಾನ ಬೆಳೆಸಿಕೊಳ್ಳುವುದು ಇಂದು ಅವಶ್ಯಕವಾಗಿದೆ.ಇಂದಿನ ಮಕ್ಕಳೆ ಮುಂದಿನ ನಾಗರಿಕರು ಇವರಲ್ಲಿ ಪರಿಸರ ಕಾಳಜಿ ಬೆಳೆಸಿದರೆ ಪರಿಸರ ಬೆಳೆಸಿದಂತಾಗಲಿದೆ ಎಂದರು.
ಅಮೃತಬಾಯಿ ಜಹಾಗೀರದಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು,ನಂತರ ಶಾಲೆಯ ಎಲ್ಲಾ ಮಕ್ಕಳಿಗೂ ಬಟ್ಟೆ ಚೀಲಗಳನ್ನು ವಿತರಿಸಲಾಯಿತು.ವೇದಿಕೆ ಮೇಲೆ ದೇವು ಬೈಚಬಾಳ,ಶ್ರೀಶೈಲ ಹೂಗಾರ, ಮಹಾಂತೇಶ ಮುರಾಳ ದಂಪತಿಗಳು, ಸುಮಂಗಲಾ ಇದ್ದರು.ನಾಗನಗೌಡ ಪಾಟೀಲ ನಿರೂಪಿಸಿದರು,ಮಶಾಕ ಯಾಳಗಿ ವಂದಿಸಿದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…