ಬಿಸಿ ಬಿಸಿ ಸುದ್ದಿ

ಪೌರತ್ವ ಕಾಯ್ದೆಯು ತಾಯಿಯೇ ಮಗನಿಗೆ ನೀನು ಯಾರಿಗೆ ಹುಟ್ಟಿದಿಯಾ ಎಂದು ಕೇಳಿದಂತಿದೆ: ಶಶಿಕಾಂತ್ ಸೆಂಥಿಲ್

ಜೇವರ್ಗಿ: ಪ್ರಸ್ತುತ ಕೇಂದ್ರ ಸರ್ಕಾರ ತರಲು ಹೊರಟಿರುವ ಪೌರತ್ವ ಕಾಯ್ದೆಯು ತಾಯಿಯೇ ಮಗನಿಗೆ ನೀನು ಯಾರಿಗೆ ಹುಟ್ಟಿದಿಯಾ ಎಂದು ಕೇಳಿದಂತಿದೆ ಎಂದು ಶಶಿಕಾಂತ್ ಸೆಂಥಿಲ್ ಹೇಳಿದರು.

ಪಟ್ಟಣದ ಮಹಿಬೂಬ ಪಂಕ್ಷನ್ ಹಾಲ್ ದಲ್ಲಿ ಮಂಗಳವಾರ ಜೇವರ್ಗಿ ಪೀಪಲ್ಸ್ ಫೋರಂ ವತಿಯಿಂದ ಆಯೋಜಿಸಿದ್ದ ಪೌರತ್ವ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಮ್ಮ ದೇಶದ ಪ್ರಧಾನ ಮಂತ್ರಿಗಳು ಬರೀ ಮಾತೆತ್ತಿದರೆ ಪಾಕಿಸ್ತಾನದ ಹೆಸರು ತೆಗೆದುಕೊಳ್ಳುತ್ತಾರೆ. ಅದೇ ಚೀನಾ, ಅಮೆರಿಕದ ಹೆಸರು ಯಾಕೆ ತೆಗೆದುಕೊಂಡು ಚಾಲೆಂಜ್ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ಪಾಕಿಸ್ತಾನಕ್ಕೆ ಬೈದರೆ ಭಾರತದ ಪ್ರಜೆಗಳು ಮತ ಹಾಕುತ್ತಾರೆ ಎನ್ನುವ ಕಾರಣಕ್ಕಾಗಿಯೇ ಪಾಕಿಸ್ತಾನವನ್ನು ಬೈಯುತ್ತಾರೆ ಹೊರತು ಅಭಿವೃದ್ಧಿ ದೃಷ್ಟಿಯಿಂದಲ್ಲ.

ರಾಷ್ಟ್ರ ವಿರೋಧಿ ಜನವಿರೋಧಿ ನೀತಿಗಳನ್ನು ತರುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಎನ್ನಾರ್ ಸಿಯಿಂದ ಅತಿ ಹೆಚ್ಚು ಮಹಿಳೆಯರಿಗೆ ತೊಂದರೆಯಾಗುತ್ತದೆ. ಪ್ರಸ್ತುತ ಸರಕಾರ ಅರ್ಥಶಾಸ್ತ್ರಜ್ಞರು ಕೊಡುವ ಸಲಹೆಯನ್ನು ಸಹ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹಿಟ್ಲರ್ನಂತೆಯೇ ಈ ಸರ್ಕಾರವಿದೆ. ಇವತ್ತು ನಾವು ಪ್ರತಿಭಟಿಸದಿದ್ದರೆ ಇತಿಹಾಸ ನಮ್ಮನ್ನು ಕ್ಷಮಿಸಲ್ಲ.

ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ವಿರುದ್ಧವಿರುವ ಯಾವುದೇ ಕಾನೂನು ಬಂದರೂ ಅದನ್ನು ನಾವು ವಿರೋಧಿಸುತ್ತೇವೆ. ಈ ಕಾಯಿದೆ ವಿರೋಧಿಸಿ ದಲಿತರು, ಮುಸ್ಲಿಮರು, ಹಿಂದುಳಿದವರು ಕೂಡಿ ಸಂಘಟನೆ ಮಾಡಿದ್ದರಿಂದ ಕೇಂದ್ರದ ಮೈ ಉರಿಯುತ್ತಿದೆ. ದಲಿತರು ಮುಸ್ಲಿಮರು ಹಿಂದುಳಿದವರು ಸಹಪಂಕ್ತಿ ಭೋಜನ, ಹಾಡು ಹಾಡುವುದರ ಮೂಲಕ ಸಂಘಟನೆ ಮಾಡಿ ಹೋರಾಟ ಮಾಡಿ.

ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೋಪದಿಂದಲ್ಲ, ಧೈರ್ಯದಿಂದ ಎದುರಿಸಿ. ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧರಾಗಿ. ಅಂದು ಬ್ರಿಟಿಷರು, ಇಂದು ಮನುವಾದಿಗಳು . ಮನುವಾದಿಗಳು ಬೇಡ ಅಂದಿದ್ದೆ ನಾವು ಮಾಡಿ ತೋರಿಸಬೇಕಾಗಿದೆ ಎಂದು ಶಶಿಕಾಂತ್ ಸೆಂಥಿಲ್ ನೆರೆದಿದ್ದ ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಡಾ ಸಂಪತ್ ಕುಮಾರ್, ಮಲ್ಲಣ್ಣ ಕೊಡಚಿ, ಮಲ್ಲಿಕಾರ್ಜುನ ದಿನ್ನಿ, ಶಂಕರ ಕಟ್ಟಿ ಸಂಗಾವಿ, ಡಾ. ಮಹೇಶ್ ರಾಠೋಡ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಜಾಕ್ ಮನಿಯಾರ್, ರಾಜು ಮುದ್ದಡಗಿ, ಶ್ರೀಹರಿ ಕರಕಿಹಳ್ಳಿ, ಆರ್. ಬಿ ಭಂಡಾರಿ, ಸಿದ್ದು ಜನಿವಾರ, ಎಸ್.ಡಿ.ಪಿ.ಐನ ಸೊಹೇಲ್, ಬೆಣ್ಣೆಪ್ಪ ಕೊಂಬಿನ್, ಡಾ.ಅಶೋಕ್ ದೊಡ್ಮನಿ, ನಿಜಲಿಂಗ ದೊಡ್ಮನಿ, ಬಾಬಾ ಪಟೇಲ್ ಮುತ್ತಕೋಡ ಸೇರಿದಂತೆ ಇತರರು ಇದ್ದರು.

emedialine

Recent Posts

ಶಹಾಪುರ: ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ

ಶಹಾಪುರ ತಾಲೂಕಿನ ಸಗರ ಗ್ರಾಮ ಆಡಳಿತ ಅಧಿಕಾರಿ ರಮೇಶ್ ರಾಠೋಡ್ ಶಹಾಪುರ : ರೈತರು ಬೆಳೆವಿಮೆ, ಪರಿಹಾರ,ಸಾಲ ಮನ್ನಾ,ಇತರೆ ಸೇರಿದಂತೆ…

14 mins ago

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

6 hours ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

18 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

20 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

20 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

20 hours ago