ಲಿಂಗಾಯತ ಧಾರ್ಮಿಕ ಮಾನ್ಯತೆ ಹೋರಾಟ ನಿಲ್ಲದು: ಬಾಲ್ಕಿ ಶ್ರೀ

ಆಳಂದ: ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಯಾವ ಕಾಲಕ್ಕೂ ನಿಲ್ಲದು. ಇದು ನಿಂತರವಾಗಿ ಮುನ್ನೆಡೆದು ಮುಂದೊಂದು ದಿನ ಯಶಸ್ವಿ ಕಾಣಲಿದೆ ಎಂದು ಬಾಲ್ಕಿ ಸಂಸ್ಥಾನ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಇಂದಿಲ್ಲಿ ಭವಿಷ್ಯ ನುಡಿದರು.

ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಉದ್ಘಾಟನೆ ಹಾಗೂ ಬಸವಾದಿ ಶರಣರ ವೈಚಾರಿಕ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

                         ಲಿಂಗಾಯತ ಧಾರ್ಮಿಕ ಮಾನ್ಯತೆ ಕೇಂದ್ರಕ್ಕೆ ಒತ್ತಾಯ                     
ಹೆಚ್ಚಿನ ಸಂಖ್ಯೆಯಲ್ಲಿ ಮಹಾಸಭೆ ಸದಸ್ಯತ್ವ ಹೊಂದಿ, ಹೋರಾಟಕ್ಕೆ ಎಲ್ಲ ಒಳಪಂಗಡಗಳು ಒಂದಾಗಿ ಹೋರಾಡಲು ಫಣ ಲಿಂಗಾಯತ ಧರ್ಮ ಸಂವಿಧಾನಿಕ ಮಾನ್ಯತೆ ಹೋರಾಟ ಗಟ್ಟಿಗೊಳ್ಳಲು ಎಲ್ಲರು ಪಕ್ಷ ಭೇದ ಮರೆತು ತನು, ಮನ, ಧನಗಳಿಂದ ಸಹಕರಿಸುವ ಮೂಲಕ ಶೋಷಿತ ಲಿಂಗಾಯತ ಧರ್ಮಕ್ಕೆ ನ್ಯಾಯ ಒದಗಿಸಲು ಜನ ಜಾಗೃತಿ ಮತ್ತು ಹೋರಾಟ ನಿಂತರತೆಗೆ ಶ್ರಮಿಸಲು ಒಗ್ಗಟ್ಟಿನ ಮಂತ್ರ ಪಠಣ.

ಲಿಂಗಾಯತರು ಯಾರೆಂಬುದು ಅರಿವಿಲ್ಲದ ಹೊತ್ತಿನಲ್ಲಿ ಫ.ಗು. ಹಳಕಟ್ಟಿ ಅವರು ವಚನಗಳ ಹೊರ ತಂದು ಬಸವಣ್ಣನವರು ಧರ್ಮ ಗುರು ಲಿಂಗಾಯತ ಶರಣರ ಪರಿಚಯ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಅಸ್ತಿತ್ವದ ಅರಿವಾಗಿದೆ. ಇನ್ನಾದರು ಲಿಂಗಾಯತ ಧರ್ಮದ ತತ್ವಗಳನ್ನು ಬೆಳೆಸಲು ಗಟ್ಟಿಯಾಗಿ ನಿಲ್ಲಬೇಕು ಎಂದರು. ಲಿಂಗಾಯತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಉಸ್ತುರಿ, ಧುತ್ತರಗಾಂವ ಮಠದ ಜಗದ್ಗುರು ತೋಂಟದಾರ್ಯ ಅನುಭವ ಮಂಟಪದ ಶ್ರೀ ವಿಶ್ವನಾಥ ಕೋರಣೇಶ್ವರ ಮಹಾಸ್ವಾಮಿಗಳು ಮಾತನಾಡಿ, ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ಯಾರ ವಿರುದ್ಧ ಅಥವಾ ಪರವಾಗಿಲ್ಲ. ಈಗಾಗಲೇ ಒಡೆದು ಹೋದ ಧರ್ಮವನ್ನ ಒಂದುಗೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದು ನಮ್ಮ ಧರ್ಮಿಯರು ಒಳ ಪಂಗಡದ ಶೋಷಿತ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಧರ್ಮದ ಸಂವಿಧಾನಿಕ ಮಾನ್ಯತೆಯ ಹೋರಾಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯತ ಮಹಾಸಭೆಯ ಸದಸ್ಯತ್ವನ್ನು ಪಡೆದು ಬಲ ತಂದುಕೊಳ್ಳಬೇಕು. ಕೇಂದ್ರ ಸರ್ಕಾರ ಧಾರ್ಮಿಕ ಮಾನ್ಯತೆ ಕೂಗಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಲಬುರಗಿಯ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ ಅವರು ಮಾತನಾಡಿ, ಶರಣರು ನೀಡಿದ ಮಾನವೀತೆ ಧರ್ಮವನ್ನು ಪಾಲಿಸಿ ದಿನಕ್ಕೊಂದು ವಚನ ಪಠಿಸಿ ನುಡಿದಂತೆ ನಡೆದು ಇಷ್ಟಲಿಂಗ, ವಿಭೂತಿ ಧರಿಸಿಕೊಳ್ಳಬೇಕು. ಉಪರಾಷ್ಟ್ರಪತಿ ಪಿ.ಡಿ.ಜತ್ತಿ ಅವರು ಒಳಗೊಂಡು ಅನೇಕ ಮಹನೀಯೆರು ಈ ಧರ್ಮಕ್ಕಾಗಿ ದುಡಿದು ಮಡಿದಿದ್ದಾರೆ. ಅವರ ಕಂಡ ಕನಸು ನನಸಾಗಿಸಲು ಅನ್ಯ ಧರ್ಮೀಯರು ಬಹುಬೇಗ ಒಗ್ಗಟ್ಟಾದಂತೆ ಲಿಂಗಾಯತ ಚಳವಳಿ ಕೂಡ ಮುನ್ನೆಡೆಸಲು ಸಂಘಟಿತರಾಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಪ್ರಭುಲಿಂಗ ಎಸ್. ಮಹಾಗಾಂವಕರ, ಶಹಾಪೂರದ ವಿಶ್ವರಾಧ್ಯ ಸತ್ಯೆಂಪೇಟ್, ಕುಪೇಂದ್ರ ಪಾಟೀಲ, ವೀರಶೈವ ಲಿಂಗಾಯತ ಮಹಾಸಭೆಯ ತಾಲೂಕು ಅಧ್ಯಕ್ಷ ಡಾ| ಎಸ್. ಆರ್. ಬೇಡಗೆ ಅವರು ಮಾತನಾಡಿದರು.

ಆರ್.ಜಿ. ಶಟಗಾರ, ಶ್ರೀಮಂತರಾವ್ ಪಾಟೀಲ, ಬಾಬುರಾವ್ ಅರುಣೋದಯ, ನ್ಯಾಯವಾದಿ ಬಾಬಾಸಾಹೇಬ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.  ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ ಲೋಹಾರ ಸ್ವಾಗತಿಸಿದರು. ಶರಣ ರಾಜೇಂದ್ರ ಗುಂಡೆ ನಿರೂಪಿಸಿದರು. ಸಂಜಯ ಪಾಟೀಲ ವಂದಿಸಿದರು.
ಕಲಾವಿದ ಶಿವಶರಣಪ್ಪ ಪೂಜಾರಿ, ತಬಲಾ ಸುರೇಶ ಆಳಂದ ವಚನ ಗಾಯನ ನಡೆಸಿಕೊಟ್ಟರು.

emedialine

Recent Posts

ನಾನು ಆಕಾಂಕ್ಷಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ; ಕೋರವಿ

ಕಾಳಗಿ: ಈ ಹಿಂದೆ ಕೇಳಿ ಬಂದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಬದಲಾವಣೆ ಮಾಡಲು ಪಕ್ಷ ಕೈಗೊಂಡ…

41 mins ago

ಸದ್ಗುಣ ಮೈಗೂಡಿಸಿ ಪ್ರಗತಿಪರ ಬದುಕು ಕಟ್ಟೋಣ : ಬಸವರಾಜ್ ಪಾಟೀಲ್ ಸೇಡಂ

ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…

2 hours ago

ನಾಡಹಬ್ಬ ಆಚರಣೆ ಅಂಗವಾಗಿ ನಾಡ ದೇವತೆ ಸ್ತಬ್ಧ ಚಿತ್ರಗಳ ಮೆರವಣಿಗೆ

ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…

16 hours ago

ವೀರಪ್ಪ ನಿಷ್ಠಿ ಕಾಲೇಜ್ ಮಹಾತ್ಮ ಗಾಂಧಿಜಿ ಲಾಲ್ ಬಹದ್ದೂರ ಶಾಸ್ತ್ರಿ ಜಯಂತಿ

ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…

16 hours ago

ಲೈಂಗಿಕ ದೌರ್ಜನ್ಯ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ 8ಕ್ಕೆ ಸುರಪುರ ಬಂದ್

ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…

16 hours ago

ಗರ್ಭಿಣಿ ಮಹಿಳೆಯರಿಗೆ ಹಣ್ಣು ಹಂಪಲು ವಿತರಣೆ

ಕಲಬುರಗಿ:  ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420