ಜನರ ಮಧ್ಯೆ ವಿಷ ಬೀಜ ಬಿತ್ತತ್ತಿರುವ ಬಿಜೆಪಿಗೆ ದೆಹಲಿಗರಿಂದ ಕಪಾಳಮೋಕ್ಷ: ಬೃಂದಾ ಕಾರಟ್

ಕಲಬುರಗಿ: ದೇಶವನ್ನು ಧರ್ಮದ ಆಧಾರದ ಮೇಲೆ ಒಡೆಯಲು ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷದ ಮುಖಂಡರಿಗೆ ದೆಹಲಿಯ ತಕ್ಕ ಉತ್ತರ ನೀಡಿದ್ದಾರೆ. ಜನರ ಮಧ್ಯೆ ವಿಷ ಬೀಜಿ ಬಿತ್ತಿತ್ತಿರುವ ಬಿಜೆಪಿಗರಿಗೆ ಅಲ್ಲಿನ ದೆಹಲಿಗರು ಜಬರ್ದಸ್ತ ಕಪಾಳಮೋಕ್ಷ ನೀಡಿದ್ದಾರೆ ಎಂದು ರಾಜಸಭಾ ಸದಸ್ಯೆ ಹಾಗೂ ಸಿಪಿಐ(ಎಂ) ಮುಖಂಡೆ ಬೃಂದಾ ಕಾರಟ್ ಅಭಿಪ್ರಾಯ ಪಟ್ಟರು.

ನಗರದ ಹೀರಾಪುರ ಹತ್ತಿರದ ಅಮರ್ ಫಂಕ್ಷನ್ ಹಾಲ್‌ದಲ್ಲಿ ಸಿಎಎ., ಎನ್‌ಸಿಆರ್.ಗೆ ವಿರೋಧ ವ್ಯಕ್ತಿ ಪಡಿಸಿ ಮಹಿಳಾ ಮಹಾಸಮಾವೇಶದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ ದೇಶದ ಜನರಿಗೆ ಉದ್ಯೋಗ ನೀಡದೆ ಜನರನ್ನು ತಪ್ಪು ದಾರಿಗೆ ತಂದು ಧರ್ಮಗಳ ಹೆಸರಲ್ಲಿ ರಾಜಕೀಯ ಮಾಡುವ ನರೇಂದ್ರ ಮೋದಿ, ಹಾಗೂ ಅಮಿತ ಶಹಾರಂತವರಿಗೆ ದೆಹಲಿಯ ಮತದಾರರು ತಕ್ಕ ಉತ್ತರ ನೀಡಿದ್ದಾರೆ.

ದೆಹಲಿ ವಿಧಾನ ಸಭಾ ಚುನಾವಣೆ ಪ್ರಚಾರಕ್ಕಾಗಿ ಬಿಜಿಪಿ ಹಾಗೂ ಆರ್.ಎಸ್.ಎಸ್.ನಎಲ್ಲಾ ದೊಡ್ಡ ದೊಡ್ಡ ನಾಯಕರು ಪ್ರತಿಗಲ್ಲಿಯಲ್ಲಿ ತಿರುಗಾಡಿ ಅವಾಚ್ಯ ಶಬ್ದಗಳನ್ನು ಬಳಸಿದರು. ಅವರ ಬಾಯಿಲ್ಲಿ ಕೇವಲ ಗೋಲಿ ಮತ್ತು ಗಾಲಿ(ಕೇವಲ ಗುಂಡು ಮತ್ತು ಬೈಗುಳ)ಗಳು ಮಾತ್ರ ಅವರಲ್ಲಿ ಇದ್ದವು. ದೆಹಲಿ ಜನರಿಗೆ ಉದ್ಯೋಗ ನೀಡುವ ಭರವಸೆ, ದೆಹಲಿಯ ಜನರಿಗೆ ಮನೆಗಳ ನಿರ್ಮಾಣದ ಭರವಸೆ, ದೆಹಲಿ ಜನರಿಗೆ ಉತ್ತಮ ವ್ಯವಸ್ಥೆಯ ಭರವಸೆ ಯಾವುದೂ ಅವರಲ್ಲಿ ಇರಲಿಲ್ಲ. ಬದಲಿಗೆ ಅಧಿಕಾರಕ್ಕೆ ಬಂದಿರುವ ಪಕ್ಷದವರು ಎಲ್ಲಿಯೂ ಅವಾಚ್ಯ ಶಬ್ದಗಳ ಭಾಷೆ ಬಳಸಲಿಲ್ಲ. ದೆಹಲಿ ಬುದ್ದಿವಂತ ಮತದಾರರು ಬಿಜೆಪಿಗರನ್ನು ಪರಾಭಾವ ಮಾಡಿದ್ದಾರೆ ಎಂದು ಕುಟುಕಿದರು.

ದೇಶದ ಜನರ ಕೈಯಲ್ಲಿ ಉದ್ಯೋಗವಿಲ್ಲ. ನರೇಗಾದಂತ ಯೋಜನೆಗಳಿಗೆ ಹಣದ ಕೊರತೆ ಇದೆ. ದೊಡ್ಡ ದೊಡ್ಡ ಬಂಡವಾಳ ಶಾಹಿಗಳಿಗೆ ಬಿಜೆಪಿಯವರು ಅನುಕೂಲ ಮಾಡಿಕೊಡುತ್ತಿದ್ದಾರೆ. ಸಂವಿಧಾನವನ್ನೆ ಬದಲಾಯಿಸುವ ಹುನ್ನಾರ ಅಂತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರು ಇಂದು ಸಂವಿಧಾನವನ್ನು ಅರಿಯಬೇಕಾಗಿದೆ. ಬಾಬಾಸಾಹೇಬ ಅಂಬೇಡ್ಕರರು ಸಂವಿಧಾನವನ್ನು ಎಲ್ಲಾ ಜಾತಿ, ಧರ್ಮಗಳು ಒಂದಾಗಿ ಇರವಂತ ಅನೇಕ ಅಂಶಗಳನ್ನು ಅಳವಸಿ ಬರೆದಿದ್ದಾರೆ. ಆದರೆ ಹಿಂದುತ್ವದ ಹೆಸರಲ್ಲಿ ದೇಶವನ್ನು ಒಡೆಯಲು ಯತ್ನಿಸಲಾಗುತ್ತಿದೆ. ಸದಾ ಪಾಕಿಸ್ತಾನದ ಹೆಸರು ಹೇಳುವ ನರೇಂದ್ರ ಮೋದಿ, ಅಮೀತ ಶಹಾ ಅವರು ನಿಜವಾಗಿ ಪಾಕಿಸ್ತಾವನ್ನು ಬಹಳವಾಗಿ ಪ್ರಿತಿಸುತ್ತಾರೆ ಎಂದು ಮಾತಿನಲ್ಲಿ ಚುಚ್ಚಿದ ಅವರು ಅಲ್ಲಿಯ ಹಿಂದು ನಾಗರಿಕರನ್ನು ಹೇಗೆ ಗುರುತಿಸುತ್ತಾರೆ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ನಾಗರಿಕ ನೋಂದಣಿ ಅಭಿಯಾನದ ಪೂರ್ವದಲ್ಲಿ ಅಸ್ಸಾಂ ರಾಜ್ಯದಲ್ಲಿ ನಡೆದ ಜನಗಣತಿಯಲ್ಲಿ ಏನಗಿದೆ. ಅಲ್ಲಿನ ೧೯ ಲಕ್ಷ ಜನರು ಇಂದು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ೧೩ ಲಕ್ಷ ಜನರ ಹಿಂದುಗಳು ಇದ್ದಾರೆ. ಬಾಂಗ್ಲಾದೇಶದಿಂದ ಮದುವೆಯಾಗಿ ಬಂದಂತ ಸಾವಿರಾರು ಹಿಂದು ಮಹಿಳೆಯರು ತಮ್ಮ ದಾಖಲೆಗಳನ್ನು ತೋರಿಸುವದಕ್ಕೆ ಆಗಲಿಲ್ಲ. ಅವರನ್ನು ಈ ದೇಶದ ನಾಗರಿಕರಲ್ಲ ಎಂದು ಹೇಳುತ್ತಾರೆ. ಮದುವೆಯಾಗಿ ಬಂದ ಮೇಲೆ ಅವರು ಎಲ್ಲಿಂದ ದಾಖಲೆ ತರಬೇಕು ಎಂದು ಪ್ರಶ್ನಿಸಿದರು.

ಮೋದಿ ಹೇಳುತ್ತಾರೆ. ಎನ್‌ಆರ್‌ಸಿ ಕುರಿತು ನಾನು ಎಲ್ಲಯೂ ಹೇಳಿಲ್ಲ, ಅದರ ಕುರಿತು ನನಗೆ ತಿಳಿದಿಲ್ಲ ಎಂದು ಅಮಿತ ಶಹಾ ಒಂದು ಕಡೆ ಹೇಳುತ್ತಾರೆ ನಾವು ಎನ್‌ಆರ್‌ಸಿ ಜಾರಿಗೆ ಮಾಡೇ ಮಾಡುತ್ತೇವೆ ಎಂದು ಇಲ್ಲಿ ಜನರನ್ನು ಮೋಸ ಮಾಡುವ ಕೆಲಸ ಯಾರಿಂದ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಸರಕಾರಿ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿಲು ಬಂದರೆ ಅವರಿಗೆ ತಮ್ಮ ಯಾವುದೇ ದಾಖಲೆ ತೊರಿಸಬೇಡಿ ಎಂದು ಕರೆ ನೀಡಿದರು. ಈಗಾಗಲೇ ಕೇರಳ ರಾಜ್ಯ ಸರಕಾರ ನಿರ್ಣಯ ತೆಗೆದುಕೊಂಡಿದ್ದು ನಾವು ಸಿಎಎಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ತೆಗೆದುಕೊಂಡಿದೆ ಎಂದರು.

ಬೀದರಲ್ಲಿ ಶಾಹೀನ್ ಶಾಲೆ ವಿದ್ಯಾರ್ಥಿನಿ ಮೋದಿ ವಿರುದ್ಧ ಹಾಡು ಹೇಳಿದರೆ ಅವಳನ್ನು ಹಾಗೂ ಶಾಲಾ ಶಿಕ್ಷಕಿಯನ್ನು ದೇಶ ದ್ರೋಹದ ಹೆಸರಲ್ಲಿ ಕೇಸು ದಾಖಲೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಮಂತ್ರಿ ಯಡಿಯೂರಪ್ಪ ಕೂಡಲೆ ಕೇಸು ಹಿಂದಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘನೆಯ ಮುಖಂಡರಾದ ಕೆ. ನೀಲಾ ಸೇರಿದಂತೆ ಅನೇಕ ಮಹಿಳಾ ಮುಖಂಡರು ಭಾಗವಹಿಸಿದ್ದರು. ಮಹಿಳಾ ಸಮಾವೇಶದಲ್ಲಿ ವಿಜಯಪುರ ಹಾಗೂ ವಿವಿಧ ಜಿಲ್ಲೆಗಳಿಂದ ಸಾವಿರಾರು ಮಹಿಳೆಯರು ಆಗಮಿಸಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

55 mins ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420