ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕೋಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಬಹುಜನ ನಾಯಕ ಹಾಗೂ ಮಾಜಿ ಸರಕಾರಿ ಮುಖ್ಯ ಸಚೇತಕರಾದ ದಿ. ವಿಠ್ಠಲ್ ಹೇರೂರವರ ಅಪಜಲಪೂರ ತಾಲೂಕಿನ ದೇವಲಗಾಣಗಾಪೂರದ ಶಕ್ತಿ ಕೇಂದ್ರದಲ್ಲಿರುವ ಭವ್ಯ ಪಂಚಲೋಹದ ಮೂರ್ತಿ ಅನಾವರಣಾ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಅನಾವರಣಾ ಮತ್ತು ವಿಠ್ಠಲ್ ಹೇರೂರ ಅವರು ಹುಟ್ಟುಹಾಕಿದ ಹೇರೂರ ಶಿಕ್ಷಣ ಸಂಸ್ಥೆಯ ೨೫ನೇ ರಜತಮಹೋತ್ಸವ ಕಾರ್ಯಕ್ರಮದ ಕುರಿತು ಮಂಗಳವಾರ ಪೂರ್ವ ಭಾವಿಸಭೆಯಲ್ಲಿ ದಿ. ವಿಠ್ಠಲ್ ಹೇರೂರವರ ಜನ್ಮದಿನದ ನಿಮಿತ್ತ ಏಪ್ರಿಲ್.೧೦.ರಂದು ಜಿಲ್ಲಾ ಕೋಲಿ ಸಮಾಜದ ಸಾಮೂಹಿಕ ಮುಖಂಡತ್ವದಲ್ಲಿ ಹೇರೂರವರ ಭವ್ಯ ಪಂಚಲೋಹದ ಮೂರ್ತಿ ಅನಾವರಣಾ ಮಾಡಲಾಗುವದೆಂದು ಈ ಸಭೆಯಲ್ಲಿ ಸೇರಿರುವ ಸಮಾಜದ ಮುಂಖಡರ ಸಮ್ಮುಖದಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ದಿ. ವಿಠ್ಠಲ ಹೇರೂರ ಜೀ ರವರ ಚಿಕ್ಕಪ್ಪನವರು ಹಾಗೂ ಟಿ.ಕೆ. ಹೇರೂರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭಗಂತಪ್ಪ ಹೇರೂರ ರವರು ಅಧ್ಯಕ್ಷತೆ ವಹಿಸಿದರು. ಈ ಸಂದರ್ಬದಲ್ಲಿ ಸಮಾಜದ ಗೌರವಾನ್ವಿತ ಹಿರಿಯ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಸಮಾಜದ ಹಿರಿಯ ಮುಖಂಡರುಗಳಾದ ರಾಜಗೊಪಾಲ ರೆಡ್ಡಿ, ಶರಣಪ್ಪ ಮಾನೆಗಾರ, ಸಾಯಬಣ್ಣ ನೀಲಪ್ಪಗೋಳ, ಬಸವರಾಜಸಪ್ಪನಗೋಳ, ತಿಪ್ಪಣ್ಣರೆಡ್ಡಿ, ಉಮೇಶ ಮುದ್ನಾಳ, ಶಂಕುಮ್ಯಾಕೇರಿ, ಶಿವಕುಮಾರನಾಟಿಕಾರ, ಬಸವರಾಜಬೂದಿಹಾಳ, ರಮೇಶ ನಾಟಿಕಾರ, ಅವ್ವಣಗೌಡ ಪಾಟಿಲ್, ಸಂತೋಷ ತಳವಾರ, ಸಂತೋಷ ಬೆಣ್ಣೂರ, ಗುಂಡು ಐನಾಪುರ, ಶರಣು ಗೌಡಗಾಂವ, ಚಂದ್ರು ನಡಗಟ್ಟಿ, ಶಿವಕುಮರ ಸುಣಗಾರ, ಶರಣು ಮಂದರವಾಡ, ಡಾ. ಸರದಾರ ರಾಯಪ್ಪ, ಶರಣು ಕೋಳಿ, ನ್ಯಾಯವಾದಿ ಚಂದ್ರಶೇಖರ ಜಮಾದಾರ, ಮಡಿವಾಳಪ್ಪ ಇಟಗಾ, ಔದೂತ್ ಇಟಗಾ, ಸಿದ್ದು ಜಮಾದಾರ, ನಿಂಗಣ್ಣ ದೇವಣಗಾಂವ, ಪಿತಾಂಬರ ಕೋಳಿ, ಬಸವಾರಜ ಮಾಸ್ಟರ್ ಹೇರೂರ, ಮಹಾಂತೇಶ ತಳವಾರ, ಶಿವಕುಮಾರ ಫಿರೋಜಾಬಾದ, ವಿಜಯವಡಿಗೇರಿ, ಗುರುನಾಥ ಹಾವನೂರ, ರಾಜಶೇಖರತಲಾರಿ ಸೇರಿದಂತೆ ದಿ. ವಿಠ್ಠಲ ಹೇರೂರ ರವರ ಕುಟುಂಬದ ಸದಸ್ಯರಾದ ಲಕ್ಷ್ಮಣ ಹೇರೂರ, ಗುರುನಾಥ ಹೇರೂರ, ಬಸವರಾಜ ಹೇರೂರ, ಸೇರಿದಂತೆ ಸಮಾಜದ ನೂರಾರು ಮುಖಂಡರು ಇದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲಂ 371ಜೆ ಯಂತೆ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಣೆ ಮಾಡಲು ಸರಕಾರದ…
ಕಲಬುರಗಿ: ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ವಲಯದ ವಿಭಾಗ ಮಟ್ಟದ 2ನೇ ದಾಸ ಸಾಹಿತ್ಯ ಸಮ್ಮೇಳನ…
ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…
ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…