ಜೇವರ್ಗಿ: ಕಾಂಗ್ರೆಸ್ ಪ್ರಭಾವಿ ಮುಖಂಡನ ಪತ್ನಿಯಿಂದ 1 ಕೋಟಿ 10 ಲಕ್ಷ ಅವ್ಯವಹಾರ?

  • ಡಾ. ಅಶೋಕ ದೊಡ್ಮನಿ ಹಂಗರಗಾ(ಕೆ)

ಕಲಬುರಗಿ, ಜೇವರ್ಗಿ: ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡ ಬಾಪುಗೌಡ ಪಾಟೀಲ ಜವಳಗಾ ಹಂಗರಗಾ (ಬಿ) ಅವರ ಪತ್ನಿ ಬಸಮ್ಮ ಬಾಪುಗೌಡ ಪಾಟೀಲ ಮತ್ತು ಪಿಡಿಓ ನಾಗಪ್ಪ ಹಯ್ಯಾಳ ಸೇರಿ ಯಲಗೋಡ ಗ್ರಾಮ ಪಂಚಾಯತಿಯ ವಿವಿಧ ಖಾತೆಗಳಿಂದ ೧ ಕೋಟಿ ೧೦ ಲಕ್ಷಕ್ಕೂ ಅಧಿಕ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಪಿಡಿಓ ನಾಗಪ್ಪ ಹೈಯ್ಯಾಳ ವಿರುದ್ಧ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ೪೨೦ ಕೇಸ್ ದಾಖಲಾಗಿದೆ.

ಅಧ್ಯಕ್ಷೆಯಾದ ಬಸಮ್ಮ ಬಾಪುಗೌಡ ಜವಳಗಾ ಅವರು ಅಧ್ಯಕ್ಷೆ ಇದ್ದರೂ ಸಹ ಬಹುತೇಕ ಚಕ್ ಮೇಲೆ ಅವರ ಪತಿ ಬಾಪುಗೌಡ ಅವರ ಸಹಿ ಇದೆ ಎಂಬುದು ತಿಳಿದುಬಂದಿದೆ. ಪಿಡಿಓ ಮತ್ತು ಗ್ರಾ.ಪಂ.ದಲ್ಲಿ ಹಣವನ್ನು ದುರುಪಯೋಗಪಡಿಸಿಕೊಂಡ ಬಗ್ಗೆ ಸಿಇಓ ಅವರಿಗೆ ಗ್ರಾಮಸ್ಥರು ಅನೇಕ ಬಾರಿ ಮನವಿ ನೀಡಿ ತನಿಖೆಗೆ ಒತ್ತಾಯಿಸಿದ್ದರು. ಪ್ರಾಥಮಿಕ ತನಖೆಯಲ್ಲಿ ಹಣದ ಅವ್ಯವಹಾರ ಕಂಡು ಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಸಿಇಓ ಡಾ.ಪಿ.ರಾಜಾ ಫೆ. ೨೬ರಂದು ಕೇಸ್ ದಾಖಲಿಸುವಂತೆ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಆದೇಶಿಸಿದ್ದರು. ಇದರನ್ವಯ ಯಡ್ರಾಮಿ ಠಾಣೆಯಲ್ಲಿ ಪಿಡಿಓ ವಿರುದ್ಧ ಐಪಿಸಿ ಸೆಕ್ಶನ್ ೪೨೦ ಮತ್ತು ೪೦೯ರ ಪ್ರಕಾರ ಕೇಸ್ ದಾಖಲಾಗಿದೆ.

ತಾಲೂಕಿನ ಯಲಗೋಡ, ಹಾಗೂ ಸಾತಖೇಡ ಎರಡು ಗ್ರಾಮ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಮಯದಲ್ಲಿ ಪಿಡಿಒ ಮತ್ತು ಅಧ್ಯಕ್ಷರು ಸೇರಿ ಹಣದ ದುರುಪಯೋಗಪಡಿಸಿಕೊಂಡಿದ್ದಾರೆ. ಯಲಗೋಡ ಗ್ರಾಮದಲ್ಲಿ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಎರಡು ಅಂಗನವಾಡಿ ಕಟ್ಟಡದ ಅನುದಾನ ೩೬ಕ್ಷ ಹಾಗೂ ಸಾತಖೇಡ ಗ್ರಾಮದಲ್ಲಿ ಕೇಂದ್ರ ಸರಕಾರದ ಯೋಜನೆ ಅಡಿಯಲ್ಲಿ ಅಂಗನವಾಡಿ ಕಟ್ಟಡ ಅನುದಾನ ೧೮ಲಕ್ಷ ೧೪ನೇ ಹಣಕಾಸು ಯೋಜನೆಯಡಿಯಲ್ಲಿ ೨೨ಲಕ್ಷ ಸೇರಿದಂತೆ, ಕರವಸೂಲಿಯ ಹಣಸೇರಿದಂತೆ ಪಂಚಾಯಿತಿಗೆ ಜಮಾಗೊಂಡ ಎಲ್ಲ ಖಾತೆಗಳ ಹಣವನ್ನು ಸಹ ತಮ್ಮ ಪತ್ನಿಯ ಬಳ್ಳಾರಿ ಜಿಲ್ಲೆಯ ಬ್ಯಾಂಕ್‌ದಲ್ಲಿ ಡ್ರಾ ಮಾಡಿಕೊಳ್ಳಲಾಗಿದೆ. ಹೀಗೆ ಹಲವಾರು ಯೋಜನೆಗಳಲ್ಲಿ ೧ ಕೋಟಿ ೧೦ಲಕ್ಷ, ರೂಪಾಯಿಗೂ ಅಧಿಕ ಹಣವನ್ನು ಪಿಡಿಒ ಹೆಸರು ಮತ್ತು ತನ ತನ್ನ ಪತ್ನಿಯ ಹೆಸರಿನ ಮೇಲೆ ಅವ್ಯವಹಾರ ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.

ಯಲಗೋಡ, ಹಾಗೂ ಸಾತಖೇಡ ಎರಡು ಗ್ರಾಮ ಪಂಚಾಯತಿಗಳ ಬ್ಯಾಂಕ್ ಖಾತೆಗಳ ಹಣಕಾಸಿನ ವ್ಯವಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸಂಬಂಧಿಸಿದ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗಿದ್ದು ಇದರ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಮಾಹಿತಿ ನೀಡುವಂತೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರದಲ್ಲಿ ತಿಳಿಸಿಲಾಗಿದೆ.

ಪಂಚಾಯತ್ ಅಭಿವೃದ್ದಿ ಅಧಿಕಾರಿ ನಾಗಪ್ಪ ಹೈಯ್ಯಾಳ ಹಣಕಾಸಿನ ಅವ್ಯವಹಾರ ಮಾಡಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ನೌಕರರ ವಿರುದ್ದದ ಆರೋಪಗಳ ಕುರಿತು ಇಲಾಖಾ ವಿಚಾರಣೆ ಬಾಕಿ ಇಟ್ಟು ನೌಕರರನ್ನು ಈಗಾಗಲೆ ಅಮಾನತ್ತಿನಲ್ಲಿಡಲಾಗಿದೆ. ಯಲಗೋಡ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರವನ್ನು ದಾಖಲೆ ಸಮೇತ ಸಿಇಓ ಅವರಿಗೆ ನೀಡಿದ್ದೇವೆ. ಕೇಸ್ ದಾಖಲು ಮಾಡಿದರೆ ಸಾಲದು ಸರಕಾರದ ಹಣ ವಾಪಸ್ ಕಟ್ಟಿಸಿಕೊಳ್ಳಬೇಕು.

ಸರಕಾರಕ್ಕೆ ಆರ್ಥಿಕ ವಂಚನೆ ಮಾಡಿದ ಪಿಡಿಓ ಮತ್ತು ಅಧ್ಯಕ್ಷರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಒತ್ತಾಯಿಸಿದ್ದಾರೆ. ಸಹಿ ಮಾಡಿದ್ದು ನಿಜವಿದೆ. ಬಳ್ಳಾರಿ ಬ್ಯಾಂಕದಲ್ಲಿ ಪಿಡಿಓ ಹಣ ಡ್ರಾ ಮಾಡಿಕೊಂಡಿದ್ದು ಸಹ ಸತ್ಯವಿದೆ ಆದರೆ ಚಕ್ ಗೆ ಸಹಿ ಮಾಡುವಾಗ ಪಿಡಿಓ ನಮಗೆ ಹಣವನ್ನು ಸರಕಾರಕ್ಕೆ ಮರಳಿಸುತ್ತೇನೆ ಎಂದು ಹೇಳಿದ್ದಾರೆ-ಬಾಪುಗೌಡ ಜವಳಗಾ ಅಧ್ಯಕ್ಷೆಯ ಪತಿ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

7 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

9 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

10 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

10 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

10 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

10 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420