ಸುರಪುರ: ಕೊರೊನಾ ಎಂಬ ಮಹಾಮಾರಿಯನ್ನು ಹೋಗಲಾಡಿಸಲು ಸರಕಾರ ಉತ್ತಮವಾದ ಕ್ರಮವನ್ನು ಕೈಗೊಂಡಿದೆ.ರಾಜ್ಯಾದ್ಯಂತ ಲಾಕ್ಡೌನ್ಗೆ ಕರೆ ನೀಡಿದ್ದು,ಅದರ ಅಂಗವಾಗಿ ನಮ್ಮ ಸುರಪುರದಲ್ಲಿಯೂ ಎಲ್ಲರು ಲಾಕ್ಡೌನ್ ಆಚರಿಸುತ್ತಿದ್ದೆವೆ.ಆದರೆ ಅಂದೆ ದುಡಿದು ಬದುಕುವ ಬಡ ಕಾರ್ಮಿಕರ ಬಗ್ಗೆ ನಾವೆಲ್ಲರು ಕಾಳಜಿ ಹೊಂದುವ ಅವಶ್ಯವಿದೆ ಎಂದು ಜಾಮೀಯಾ ಅಹಲೆ ಹದೀಸ್ ಖುರೇಶಿ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಸಾಬ್ ಮಾತನಾಡಿದರು.
ನಗರದ ಖುರೇಶಿ ಮೊಹಲ್ಲಾದಲ್ಲಿ ಎಲ್ಲಾ ಸಮುದಾಯಗಳ ಬಡ ಕಾರ್ಮಿಕರಿಗೆ ಸುರಪುರ ಲಾಕ್ಡೌನ್ ಎಫೆಕ್ಟ್ನಿಂದಾಗಿ ದೈನಂದಿನ ಬದುಕಿಗೆ ಕಷ್ಟವಾಗದಿರಲೆಂದು ಸುಮಾರು ೮೦ಕ್ಕೂ ಹೆಚ್ಚು ಕುಟುಂಬಗಳಿಗೆ ಅಕ್ಕಿ ಬೇಳೆ ಎಣ್ಣೆ ಸೇರಿದಂತೆ ವಿವಿಧ ಸಾಮಾಗ್ರಿಗಳ ವಿತರಿಸಿ ಮಾತನಾಡಿ,ಕೊರೊನಾ ಸೊಂಕು ನಿವಾರಣೆಗೆ ನಾವೆಲ್ಲರು ಸರಕಾರಕ್ಕೆ ಸಹಕಾರ ನಿಡೋಣ.ಬಡ ಜನತೆಗೆ ನಮ್ಮಿಂದಾಗುವ ಸಹಾಯ ಮಾಡುವ ಮೂಲಕ ಲಾಕ್ಡೌನ್ಗೆ ಸಹಕರಿಸೋಣ ಎಂದರು.
ಈ ಸಂದರ್ಭದಲ್ಲಿ ಅಬ್ದುಲ್ ಗಫರ್,ಮಹ್ಮದ ಜಹೀರ್,ಮಹ್ಮದ ಶಕೀರ್,ಅಬ್ದುಲ್ ಸುಭಾನ್,ಮಹ್ಮದ ಲಿಯಾಖತ್,ಮಹ್ಮದ್ ಶಬ್ಬಿರ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…