ಬಿಸಿ ಬಿಸಿ ಸುದ್ದಿ

ಸುರಪುರ: ನಗರ ಬೆಚ್ಚಿ ಬೀಳಿಸಿದ್ದ ಮಹಿಳೆಯ ಕೊಲೆ ಆರೋಪಿಯ ಬಂಧನ

ಸುರಪುರ: ನಗರದ ಪೊಲೀಸ್ ಠಾಣೆ ಹತ್ತಿರದ ಪೆಟ್ರೋಲ್ ಬಂಕ್ ಹಿಂಬಾಗದ ಜಾಲಿ ಪೊದೆಯಲ್ಲಿ ಕಳೆದ ೧೩ನೇ ತಾರೀಖು ಸಂಜೆ ನಡೆದಿದ್ದ ಮಹಿಳೆಯ ಬರ್ಬರ ಕೊಲೆಯನ್ನು ಭೇದಿಸಿರುವ ಪೊಲೀಸರು ಕೊಲೆಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಡೀ ನಗರವನ್ನೆ ಬೆಚ್ಚಿ ಬೀಳಿಸಿದ್ದ ಮಹಿಳೆಯ ಕೊಲೆಯ ಪ್ರಕರಣ ಭೇದಿಸಿದ ನಗರದ ಪೊಲೀಸರು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಶಹಾಪುರ ತಾಲೂಕಿನ ಹಯ್ಯಾಳ (ಕೆ) ಗ್ರಾಮದ ಮಹಿಳೆ ಲಕ್ಷ್ಮಿ ದೇವಿಂದ್ರಪ್ಪ ಬನ್ನಿಕಟ್ಟಿ (೩೮) ಎಂಬುವವಳನ್ನು ಅದೇ ಗ್ರಾಮದ ದೇವಪ್ಪ ಭಿಮಪ್ಪ ಮೇಲಗಿರಿ (೨೮ ವರ್ಷ) ಈತನು ಲಕ್ಷೀಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು, ಕೆಲ ವರ್ಷಗಳಿಂದ ಇವರಿಬ್ಬರ ಮದ್ಯೆ ಅನೈತಿಕ ಸಂಬಂಧವಿದ್ದು ದೇವಪ್ಪನು ಈಗ ಮದುವೆಯಾಗಲು ಬೇರೆ ಕಡೆಗೆ ಹುಡುಗಿಯನ್ನು ನೋಡಿದ್ದನ್ನು ಇದನ್ನು ವಿರೋಧಿಸಿದ ಲಕ್ಷ್ಮಿಯು ಬೇರೆಯವಳೊಂದಿಗೆ ಮದುವೆಯಾಗಲು ಬಿಡುವುದಿಲ್ಲವೆಂದು ಗಲಾಟೆ ಮಾಡಿದ್ದಳು, ಇದರಿಂದ ಬೇಸರಗೊಂಡಿದ್ದ ದೇವಪ್ಪ ಲಕ್ಷ್ಮೀಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ಕಳೆದ ೧೩ನೇ ತಾರೀಖು ಸಂಜೆ ಹಯ್ಯಾಳ ದಿಂದ ಸುರಪುರಕ್ಕೆ ಕೊಲೆಯಾದ ಯುವತಿಯನ್ನು ಕರೆದುಕೊಂಡು ಬಂದು ಅಂದು ಸಂಜೆ ನಗರಸಭೆ ಬಳಿಯ ಪೆಟ್ರೋಲ್ ಬಂಕ್ ಹಿಂಬಾಗದ ಸರ್ಕಾರಿ ಜಾಲಿ ಪೊದೆಯಲ್ಲಿ ಕರೆದೊಯ್ದು ಲಕ್ಷ್ಮಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನ್ನು.

ಈ ಘಟನೆ ಇಡೀ ನಗರವನ್ನು ಬೆಚ್ಚಿ ಬೀಳಿಸಿತ್ತು.ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಲು ಯಾದಗಿರಿ ಪೊಲೀಸ್ ಅಧೀಕ್ಷಕ ರುಷಿಕೇಶ ಭಗವಾನ ಸೋನೆವಾಣೆ ಹಾಗು ಸುರಪುರ ಉಪ-ವಿಭಾದ ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿಯವರ ಮಾರ್ಗದರ್ಶನದಲ್ಲಿ ಆರಕ್ಷಕ ನಿರೀಕ್ಷಕ ಸಾಹೇಬಗೌಡ ಎಮ್.ಪಾಟೀಲ ಅವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ಶರಣಪ್ಪ ಹಾಗು ಚೇತನ್ ಮತ್ತು ಹೆಚ್‌ಸಿ ಗಳಾದ ಗಣೇಶ, ಗಜೇಂದ್ರ, ಶಿವಪ್ಪ, ಮಂಜುನಾಥ, ಮನೋಹರ ಹಾಗು ಪಿಸಿಗಳಾದ ಸುಭಾಶ,ಮಹಾಂತೇಶ ಎಪಿಸಿ ಇವರನ್ನೊಳಗೊಂಡ ತಂಡ ರಚನೆ ಸತತ ಹದಿನೈದು ದಿನಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

emedialine

Recent Posts

ಜಾನಪದ ಜೀವನ ಮೌಲ್ಯಗಳ ಪ್ರತೀಕ

ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…

5 hours ago

ಸುರಪುರ:ನೂತನ ಮರಗಮ್ಮ ದೇವಿ ರಜತ ಮೂರ್ತಿ ಪ್ರತಿಷ್ಠಾಪನೆ

ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…

5 hours ago

ಜುಲೈ 8 ರಂದು ಕಾಳಗಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…

7 hours ago

ವಾಡಿ: “ತಾಯಿ ಹೆಸರಲ್ಲಿ ಒಂದು ಸಸಿ” ಅಭಿಯಾನ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಹನುಮಾನ ಮಂದಿರದ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ"ತಾಯಿ ಹೆಸರಲ್ಲಿ…

7 hours ago

ವಾಡಿ: ಶ್ಯಾಮ್‌ ಪ್ರಸಾದ್ ಮುಖರ್ಜಿ ಜಯಂತಿ, ಬಾಬು ಜಗಜೀವನ್ ರಾಮ್ ಪುಣ್ಯಸ್ಮರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಭಾರತೀಯ ಜನಸಂಘದ ಸಂಸ್ಥಾಪಕರು, ಭಾರತದ ಅಖಂಡತೆ ಹಾಗೂ ಏಕತೆಗಳಿಗಾಗಿ ಶ್ರಮಿಸಿದ ಡಾ. ಶ್ಯಾಮ ಪ್ರಸಾದ್…

7 hours ago

ನಾಳೆ ವಾಡಿಯಲ್ಲಿ ಕವಿಗೋಷ್ಠಿ

ವಾಡಿ: ಸಂಚಲನ ಸಾಹಿತ್ಯ ಮತ್ತು ಸಾಂಸ್ಕøತಿಕ ವೇದಿಕೆ ವತಿಯಿಂದ ಜುಲೈ ಇಂದು ಬೆಳಿಗ್ಗೆ 10:00 ಗಂಟೆಗೆ ಪಟ್ಟಣದ ಡಾ. ಅಂಬೇಡ್ಕರ್…

8 hours ago