ಸುರಪುರ: ಕೊರೊನಾ ಮಹಾಮಾರಿ ಇಂದು ನಿತ್ಯವು ಜಗತ್ತನ್ನು ನಲುಗಿಸುತ್ತಿದೆ.ಇದಕ್ಕೆ ಯಾವುದೆ ನಿಖರವಾದ ಔಷಧ ಇಲ್ಲವಾದರು ಎಲ್ಲರು ತಮ್ಮ ಮನೆಗಳಲ್ಲಿರುವ ಮೂಲಕ ಇದರ ನಿರ್ಮೂಲನೆಗೆ ಸಹಕರಿಸಬಹುದಾಗಿದೆ ಎಂದು ಆರಕ್ಷಕ ನಿರೀಕ್ಷಕ ಎಸ್.ಎಮ್.ಪಾಟೀಲ ಮಾತನಾಡಿದರು.
ನಗರದ ರಂಗಂಪೇಟೆಯಲ್ಲಿ ಉದ್ಯಮಿ ಸಯ್ಯದ್ ಮಹಿಮೂದ್ ಅಜಬ್ ವತಿಯಿಂದ ಹಮ್ಮಿಕೊಂಡಿದ್ದ ಬಡ ಜನತೆಗೆ ಆಹಾರ ಸಾಮಾಗ್ರಿಗಳು ಮತ್ತು ತರಕಾರಿ ಮತ್ತಿತರೆ ಅಗತ್ಯ ವಸ್ತುಗಳ ವಿತರಿಸಿ ಮಾತನಾಡಿ,ಇಂದು ಅನೇಕ ಸಂಘ ಸಂಸ್ಥೆಗಳು ಬಡವರು ನಿರ್ಗತಿಕರ ಮತ್ತು ಮಾನಸಿಕ ಅಸ್ವಸ್ಥರ ನೆರವಿಗೆ ನಿಂತು ನಿತ್ಯವು ಆಹಾರ ನೀರು ಮತ್ತು ದಿನಸಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.ಅದರಂತೆ ತಾವುಗಳೂ ಇಂದು ಜನತೆಗೆ ಆಹಾರ ಸಾಮಾಗ್ರಿಗಳ ವಿತರಿಸುವ ಮೂಲಕ ನೆರವಿಗೆ ನಿಂತಿರುವುದು ಉತ್ತಮವಾದ ಕಾರ್ಯವಾಗಿದೆ ಎಂದರು.
ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೂಗುರೇಶ ವಾರದ ಮಾತನಾಡಿ,ದೇಶದಲ್ಲಿನ ಎಲ್ಲಾ ಬಡ ಜನರ ಜೊತೆಗೆ ಪ್ರಜ್ಞಾವಂತ ಜನತೆ ನಿಲ್ಲುವ ಮೂಲಕ ಮಾನವೀಯತೆ ತೋರಬೇಕಿದೆ.ಬಡವರು ನಿರ್ಗತಿಕರಿಗೆ ಆಹಾರ ಧಾನ್ಯಗಳು ಮತ್ತು ಔಷಧಿ ಮತ್ತಿತರೆ ಅವಶ್ಯಕತೆಗಳನ್ನು ನೀಗಿಸಲು ಶ್ರಮಿಸೋಣ ಎಂದರು.
ಇದೇ ಸಂದರ್ಭದಲ್ಲಿ ಸಯ್ಯದ್ ಮಹಿಮೂದ್ ಅಜಬ್ ಷೇರ್ ಅವರಿಂದ ಅನೇಕ ಬಡ ಕುಟುಂಬದ ಜನತೆಗೆ ಆಹಾರ ಸಾಮಾಗ್ರಿಗಳಾದ ಅಕ್ಕಿ ಬೇಳೆ ಅಡುಗೆ ಎಣ್ಣೆ ಮತ್ತು ತರಕಾರಿ ಕಿಟ್ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಬಸವರಾಜ ವಾರದ್,ದಾನಪ್ಪ ಲಕ್ಷ್ಮೀಪುರ,ಸತೀಶ್ ನಾಯಕ,ಗುಲಾಮ್ ರಸೂಲ್,ಮಹಾಂತೇಶ ಮಡಿವಾಳ,ಮಂಜುನಾಥ ಸ್ವಾಮಿ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ…
ಬೀದರ್: ಮಾಧ್ಯಮ ಮತ್ತು ಸಾಮಾಜಿಕ ಸಂಘಟನೆ ಕ್ಷೇತ್ರದಲ್ಲಿ ದೀರ್ಘ ಸೇವೆಯನ್ನು ಗುರ್ತಿಸಿ ತಿಪಟೂರು ಕೃಷ್ಣ ಅವರಿಗೆ " ಕಾಯಕ ರತ್ನ…
ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.…
ಬೆಂಗಳೂರು: ಯುವಜನತೆ ನದಿಮೂಲಗಳು ಹಾಗೂ ಪರಿಸರ ಸಂರಕ್ಷಣೆಯ ಅಭಿಯಾನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಳ್ಳಬೇಕೆಂದು…
ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದ ಸದಸ್ಯರ ಸಭೆ ಜು.17ರಂದು ಬೆಳಗ್ಗೆ 10.30ಕ್ಕೆ ಕನ್ನಡ ಭವನದಲ್ಲಿ ನಡೆಯಲಿದ್ದು, ಸಂಘದ…
ಕಲಬುರಗಿ: 371(ಜೆ) ಕಲಂ ಸಮರ್ಪಕ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಿ ಕಚೇರಿ ಸ್ಥಾಪಿಸಬೇಕು.ಇಲ್ಲದಿದ್ದಲ್ಲಿ ಮತ್ತೊಮ್ಮೆ ಕಲ್ಯಾಣ ಕರ್ನಾಟಕದ ಎಲ್ಲಾ…