ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬವವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ಲಿಂಗಭೇಧವಿಲ್ಲ. ಲಂಚ-ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು, ಒಟ್ಟಿನ ಮೇಲೆ ಈ ನೆಲ ನೆಮ್ಮದಿಯ ನೆಲೆವನೆಯಾಗಬೇಕು. ಇದು ಬಸವಮಾರ್ಗ, ಶರಣಮಾರ್ಗದ ಕನಸು.

೮೫೦ ವರ್ಷಗಳ ಹಿಂದೆ ಇದನ್ನು ನನಸು ಮಾಡಿದ್ದ ಬಸವಣ್ಣ ಇಂದು ಇಲ್ಲ. ಬಸವಣ್ಣ ಹೋದ ಮೆಲೆ ಇಲ್ಲಿ ಎಲ್ಲ ಬಗೆಯ ಅಸಮಾನತೆ ತಲೆ ಎತ್ತಿವೆ. ಜಾತಿ ವ್ಯತ್ಯಾಸ ಕುಣಿಯುತ್ತಿದೆ. ಮತ ಮೌಢ್ಯ ಮೇರೆ ಮೀರಿದೆ. ಬಡವ-ಬಲ್ಲಿದರ ಅಂತರ ನಿರಂತರ ನಡೆದಿದೆ. “ಸಾಕ್ಷರ” ಎಂಬುದು ತಿರುವು-ಮುರುವು ಆಗಿ”ರಾಕ್ಷಸ” ಆಗಿದೆ. ಧರ್ಮದೊಂದಿಗೆ ದಯೆ ಬೆರೆಯುತ್ತಿಲ್ಲ. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಮಿತಿ ಎಂಬುದಿಲ್ಲ. ಲಂಚ-ವಂಚನೆ-ಭ್ರಷ್ಟಾಚಾರಕ್ಕೆ ಇಲ್ಲಿ ಅಗ್ರಪಟ್ಟ್ಟ! ಸಮಬಾಳು ಸಮಪಾಲುಗಳು ಸಾವಿರ ಮೈಲು ದೂರ!

ಲೇಸೆನಿಸಿಕೊಂಡು ಐದು ದಿನ ಬದುಕಿದರೇನು?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೆ?
ಕೂಡಲಸಂಗಮದೇವ.

ಬದುಕಿಗೆ ಬೆಲೆ ಕೊಟ್ಟ ವಚನಕಾರರು ಬದುಕನ್ನು ಸ್ವೀಕರಿಸುವ ಕ್ರಮ, ಮಾರ್ಗದರ್ಶನ ಮಾಡಿದರು. ಅವು ಇಂದಿಗೂ ಪ್ರಸ್ತುತ ಪ್ರೇರಣೆಯಾಗಿವೆ. ಆಧುನಿಕ ತಾಂತ್ರಿಕ ಉತ್ಕರ್ಷದಲ್ಲಿರುವ ಈ ಹೊತ್ತಿಗೂ ವಚನ ಅನ್ನುವುದು ಒಂದು ಪ್ರಜ್ಞೆಯಾಗಿಯೇ ಕಾಡುವ ಮಹತ್ವ ಪಡೆದಿದೆ. “ಸತ್ಯಕ್ಕೆ ಸಾವಿಲ್ಲ; ಸುಳ್ಳಿಗೆ ಸುಖವಿಲ್ಲ” ಎಂಬ ನಾಣ್ನುಡಿಯಂತೆ ಸತ್ಯಕ್ಕೆ ಮುಖಾಮುಖಿಯಾಗುವ ಬದುಕಿನ ಬಹುದೊಡ್ಡ ಎಚ್ಚರವನ್ನು ವಚನ ಸಾಹಿತ್ಯ ನಮಗೆ ಕಲಿಸಿದೆ. ಬಸವಣ್ಣನವರ ಈ ವಚನವು ಜೀವನದ ಉದ್ದೇಶವನ್ನು ಸಾರುವಂತಿದೆ. ೧೨ನೇ ಶತಮಾನ ಸಾಮಾಜಿಕ,ರಾಜಕೀಯ,ಧಾರ್ಮಿಕ,ಸಾಂಸ್ಕೃತಿಕ ಇತಿಹಾಸದಲ್ಲಿ ಸ್ಮರಣೀಯವಾದದು. ಬಸವಣ್ಣ ಅಪರೂಪದ ವ್ಯಕ್ತಿ. ಕಲ್ಯಾಣವನ್ನು-ಬಸವಕಲ್ಯಾಣ, ಬಾಗೇವಾಡಿಯನ್ನು-ಬಸವನ ಬಾಗೇವಾಡಿಯನ್ನಾಗಿಸಿದ ಪಾರದರ್ಶಕ ವ್ಯಕ್ತಿತ್ವ ಅವರದು.

ಶರಣರು ಮಾನವೀಯ ಸಂಬಂಧಗಳಿಗೆ ಬೆಲೆ ಕೊಟ್ಟರು. ಇಂತಹ ಶರಣರ ಜೀವನ ದರ್ಶನ ಮಾಡಿಕೊಂಡು ಒಂದೇ ಒಂದು ದಿನ ಲೇಸೆನಿಸಿಕೊಂಡು ಬದುಕುವುದು ಉಚಿತ ಎಂಬುದನ್ನು ತಿಳಿಸಿದ್ದಾರೆ. ಇಲ್ಲಿ ಐದುದಿನ, ನಾಲ್ಕುದಿನ, ಮೂರುದಿನ, ಎರಡುದಿನ ಕೊನೆಗೆ ಒಂದು ದಿನ ಎನ್ನುವ ಸಂಖ್ಯಾ ಸೂಚಕ ಪದಗಳು ಕೇವಲ ಐದುದಿನ, ನಾಲ್ಕುದಿನ, ಮೂರುದಿನ, ಎರಡುದಿನ ಅಥವಾ ಒಂದುದಿನ ಮಾತ್ರ ಸೂಚಿಸುವುದಿಲ್ಲ. ನಮ್ಮ ಬದುಕಿನ ಅನಿಶ್ಚಿತ ಆಯುಷ್ಯವನ್ನು ಸೂಚಿಸುತ್ತದೆ. ಆಯುಷ್ಯ ತೀರುವ ಮುನ್ನ ಜೀವನದ ಸಾರ್ಥಕತೆ ಪಡೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದಾರೆ.

“ಕೆರೆ ಹಳ್ಳ ಬಾವಿಗಳು ಮೈತೆಗೆದರೆ ಗುಳ್ಳೆ ಗೊರಚೆ ಚಿಪ್ಪುಗಳ ಕಾಣಬಹುದು, ವಾರಿದಿ ಮೈತೆಗೆದರೆ ಮುತ್ತು ರತ್ನಂಗಳ ಕಾಣಬಹುದು, ನಮ್ಮ ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೇ ಕಾಣಬಹುದು” ಎಂಬಂತಿರುವ ಬಸವಣ್ಣ ಹಾಗೂ ಶರಣರು ನಮ್ಮೊಳಗೆ ಆವಿರ್ಭವಿಸಬೆಕು. ಕಲ್ಯಾಣ ರಾಜ್ಯವನ್ನು ನಾವೆ ಕಟ್ಟಬೇಕಲ್ಲದೆ ಇನ್ನಾರೂ ಕಟ್ಟಲಾರರು. ಬಸವಣ್ಣನ ಕಲ್ಯಾಣ ರಾಜ್ಯ ಪ್ರತಿಷ್ಠಾಪನೆಗೆ ನಾವು-ನೀವೆಲ್ಲ ಪುನಃ ಸನ್ನದ್ಧರಾಗಿ ನಿಲ್ಲಬೇಕು. “ಮತ್ತೆ ಹುಟ್ಟಿ ಬಾ ಬಸವಣ್ಣ” ಅಂತ ಗೋಗರೆದರೆ ಬಸವಣ್ಣ, ಯಾವುದೋ ಲೋಕದಿಂದ ಕೆಳಕ್ಕೆ ಉದುರಿ ಬೀಳುವುದಿಲ್ಲ.

emedialine

Recent Posts

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

2 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

8 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

19 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

20 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

20 hours ago

ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ; ಮತ್ತಿಮಡು

ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420