ರಾಯಚೂರು: ಹಟ್ಟಿ ತಾಲ್ಲೂಕಿನ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ಜಿಲ್ಲಾ ಸಮಿತಿಯ ವೀರಾಪೂರು ಗ್ರಾಮದಲ್ಲಿ ಎಸ್ಎಫ್ಐ ನಿಂದ ಬಸವ ಜಯಂತಿ ಆಚರಣೆ ಮಾಡಲಾಯಿತು.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರು ಮಾತನಾಡಿ, ೧೨ ನೇ ಶತಮಾನದಲ್ಲಿ ಎಲ್ಲರೂ ಗುಡಿ ಗುಂಡಾರ, ದೇವರು ಮತ್ತು ಧರ್ಮದ ಬಗ್ಗೆ ಯೋಚಿಸುತ್ತಿದ್ದಾಗ ಬಸವಣ್ಣ ಅವರು ಮನುಷ್ಯರ ಬಗ್ಗೆ ಯೋಚಿಸಿದರು. ಈ ಸಮಾಜದಲ್ಲಿ ತುಂಬಿ ತುಳುಕುತ್ತಿದ್ದ ಮೌಢ್ಯ, ಕಂದಾಚಾರ, ಅಜ್ಞಾನ, ಮೋಸ, ವಂಚನೆಗಳ ವಿರುದ್ಧ ಬಸವಣ್ಣ ಹೋರಾಟ ನಡೆಸಿದರು ಎಂದರು.
ಬಸವಣ್ಣ ಅವರನ್ನು ಲಿಂಗಾಯತ ಎಂಬ ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ. ಆದರೆ ಬಸವಣ್ಣ ಹೇಳಿದ್ದು ಲಿಂಗಾಯತ ವನ್ನು ಜಾತಿ ಮಾಡಿಕೊಳ್ಳಿ ಎಂದು ಅಲ್ಲ. ಲಿಂಗಾಯತ ಧರ್ಮದ ತತ್ವಗಳನ್ನು ಅನುಸರಿಸಲು ಕರೆ ನೀಡಿದ್ದರು. ಲಿಂಗಾಯತ ಚಳವಳಿಯನ್ನು ಬಸವಣ್ಣ ಅವರು ಅಷ್ಟೇ ಅಲ್ಲದೇ ಮಾದರ ಚನ್ನಯ್ಯ, ಹಡಪದ ಹಪ್ಪಣ್ಣ, ಸೂಳೆ ಸಂಕವ್ವ, ಸನಾದಿ ಅಪ್ಪಣ್ಣ, ಅಕ್ಕ ಮಹಾದೇವಿಯಂತಹ ಅದೇಷ್ಟೋ ದುಡಿಯುವ ವರ್ಗದಿಂದ ಈ ಚಳುವಳಿಯನ್ನು ಕಟ್ಟಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ಹೇಳಿದರು.
ಬಸವಣ್ಣ ಅವರ ನಿಜವಾದ ವಿಚಾರಗಳನ್ನು ಗಾಳಿಗೆ ತೂರಲಾಗ್ತಿದೆ. ಬದಲಾಗಿ ಅವರ ಚಿಂತನೆಗೆ ವಿರುದ್ಧವಾದ ಆಚರಣೆ ನಡೆಸಿ ಬಸವಣ್ಣ ಅವರಿಗೆ ಅವಮಾನ ಮಾಡಲಾಗುತ್ತಿದೆ. ಬಸವಣ್ಣ ಅವರ ಮೂರ್ತಿ ಕಟ್ಟಿ ಅವರಿಗೆ ದೊಡ್ಡ ಹೂವಿನ ಹಾರ ಹಾಕಿ, ಕಾಯಿ ಹೊಡೆದು ಕರ್ಪೂರ ಹಚ್ಚಿ, ಊದಿನ ಕಡ್ಡಿ ಹಚ್ಚುವುದು ಬಸವಣ್ಣ ಅವರ ಚಿಂತನೆಗೆ ವಿರುದ್ಧವಾಗಿದೆ ಎಂದರು. ಈ ವೇಳೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ಆಚಿಜನೇಯ ಹೂವಿನಬಾವಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಎಂ., ಮಾಜಿ ಎಸ್ಡಿಎಂಸಿ ಅನ್ನಪೂರ್ಣ, ಶಿಕ್ಷಕಿ ಗಿರಿಜಾ, ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ರಮೇಶ ಚಿತ್ರನಾಳ, ಬಸವರಾಜ ಚೆನ್ನಪ್ಪ, ಅನಿಲ್ ಕುಮಾರ್, ಶಶಿಕಲಾ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…