ಅಲ್ಲಮಪ್ರಭು ಎಂತಹ ಘನ ವ್ಯಕ್ತಿತ್ವ ಹಾಗೂ ದಿವ್ಯತೆಯನ್ನು ಹೊಂದಿದ್ದರೂ ಎಂಬುದಕ್ಕೆ ಬಸವಣ್ಣನವರ ಈ ವಚನವೇ ಸಾಕ್ಷಿ. ಈ ವಚನದ ಮೂಲಕ ಬಸವಣ್ಣನವರು ಅಲ್ಲಮನ ಭವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಅಲ್ಲಮನ ಇಡೀ ವ್ಯಕ್ತಿತ್ವವೇ ಈ ವಚನದಲ್ಲಿ ಅಡಗಿದೆ.
ಕರದಲ್ಲಿಯ ಲಿಂಗದಲ್ಲಿಯೇ ನೋಟಪ್ರಾಣವಿರಿಸಿದ ಅನಿಮಿಷಯ್ಯ ಎಂಬ ತಪಸ್ವಿಯು ತನ್ನ ಯೋಗಶಕ್ತಿಯ ಮೂಲಕ ಬಸವಣ್ಣನವರ ಕರಸ್ಥಲದಲ್ಲಿನ ಲಿಂಗವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ಅಂತಹ ಮಹಾನ್ ಯೋಗಿಯ ಕರಸ್ಥಲದ ಲಿಂಗವನ್ನು ಪ್ರಾಪ್ತಿ ಮಾಡಿಕೊಂಡ ಅಲ್ಲಮರ ಕರಸ್ಥಲವೇ ಪರಸ್ಥಲವಾಯಿತ್ತು. ಅಂದರೆ ಅದು ಬಯಲಾಯಿತು ಎಂದರ್ಥ.
ಕೈಯಲ್ಲಿರುವ ಇಷ್ಟಲಿಂಗವೆಂಬ ಕುರುಹು ಅಳಿದು ಮತ್ತೆ ಆ ಕುರುಹು ನೆಲೆಗೊಳಿಸಿಕೊಳ್ಳುವುದು ಸಣ್ಣ ಮಾತೇನಲ್ಲ. ಇಂಥ ದಿವ್ಯ ಅನುಭೂತಿ ಮಾಡಿಕೊಂಡ ಅಲ್ಲಮನಿಗೆ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ ಈ ಎಲ್ಲ ವಿಚಾರಗಳನ್ನು ಹೇಳುವ ಅಗತ್ಯವಿಲ್ಲ ಎಂಬುದು ಬಸವಣ್ಣನವರ ಅಭಿಪ್ರಾಯ. ದೇವರ ಬಗ್ಗೆ ಇಂತಹ ತತ್ವದರ್ಶನ ಮಾಡಿಸಿದ ಅಲ್ಲಮ ಬಹುದೊಡ್ಡ ಮೇಧಾವಿ ಎಂಬುದು ಇದರಿಂದ ವಿಧಿತವಾಗುತ್ತದೆ.
ದೇವರು ಅಮೂರ್ತ ಕಲ್ಪನೆ, ಆತನಿಗೆ ಆಕಾರವಿಲ್ಲ. ಆತ ನಿರಾಕಾರ ಸ್ವರೂಪಿ. ಆದರೆ ಅಲ್ಲಮಪ್ರಭು ಅದಕ್ಕೆ ಆಕಾರ ತರುತ್ತಾನೆ. ನಿರಾಕಾರದೊಳಗೆ ಪ್ರವೇಶಿಸಿ ನಿರಾಕಾರವನ್ನು ಆಕಾರಕ್ಕೆ ತಂದು ಬಿತ್ತಿ, ಬೆಳೆದು ನಾನು ಬಯಲಾದೆ ಎನ್ನುತ್ತಾನೆ.
ಮಹಾ ಚೈತನ್ಯವಾಗಿರುವ ಲಿಂಗಾಂಗ ಸಾಮರಸ್ಯ ಸಾಧಿಸಲು ಇಷ್ಟಲಿಂಗವೆಂಬ ಕುರುಹು ಅಹತ್ಯ. ಇಷ್ಟಲಿಂಗ ಬೇರೆ ಅಲ್ಲ. ಬಯಲು ಬೇರೆ ಅಲ್ಲ. ನಿರಾಕಾರವಾದ ದೇವರನ್ನು ಆಕಾರದ ಮೂಲಕ ತಂದು ಮತ್ತೆ ಮತ್ತೆ ನಿರಾಕಾರವಾಗಿ ಸಾಗುವುದೇ (ಬಯಲಿನೆಡೆಗೆ) ಶರಣತತ್ವ ಸಿದ್ಧಾಂತ. ಅಂತಹ ಶರಣ ಸಿದ್ಧಾಂತವನ್ನೇ ಅಲ್ಲಮರು ಈ ವಚನದಲ್ಲಿ ವಿವರಿಸುತ್ತರೆ.
ಚೈತನ್ಯದ ಆಚೆ ಇರುವುದು ಅವಿನಾಶಿ. ಹೀಗಾಗಿ ಅದಕ್ಕೆ ಅಳಿವಿಲ್ಲ. ಅಂಥ ಅಳಿವಿಲ್ಲದ ಸ್ಥಿತಿ ತಲುಪುವುದು ಎಂದರೆ ಬಯಲಾಗುವುದು ಎಂದರ್ಥ. ಈ ಬ್ರಹ್ಮಾಂಡ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಭ್ರಹ್ಮಾಂಡದಲ್ಲಿ ಕಾಣುವ ಬೆಳಕಿನಾಟ ಇರುವುದೇ ಕತ್ತಲು. ಕಪ್ಪು ವಿಸ್ತಾರವಾಗಿ ಹರಡಿದೆ ಎಂದು ವಿಜ್ಞಾನಿಗಳು ಕಂಡುಕೊಂಡ ಸತ್ಯ. ಆದರೆ ಅಲ್ಲಮ ಇಂತಹ ಅಂತಿಮ ಸತ್ಯದ ಬಗ್ಗೆ ಅಂದೆಯೇ ಮಾತನಾಡಿದ್ದಾರೆ.
ಯಾವುದರಿಂದ ಏನಾಗಬಲ್ಲದು ಎಂಬ ಪ್ರಜ್ಞೆ ಎಲ್ಲರಿಗೂ ಇದೆ. ಆದರೆ ಅದನ್ನು ಬಳಸಿಕೊಳ್ಳುವ ಪರಿ ನಮಗಿನ್ನೂ ಸಾಧ್ಯವಾಗಿಲ್ಲ. ಈ ದ್ವಂದ್ವವನ್ನು ಮೀರಿ ನಿಲ್ಲುವ ಗುಣ ವಿಶೇಷತೆಗಳು ನಮ್ಮೊಳಗೆ ಇದ್ದರೂ ಅದನ್ನು ದೂರಿ ದೂರ ಸರಿಸುವವರೇ ಹೆಚ್ಚು. ಮಾಯಾ, ಮೋಹದಂಥ ಆಕರ್ಷಕ ಸಂಗತಿಗಳೇ ನಮ್ಮನ್ನು ಆಳಲು ಆರಂಭಿಸುತ್ತವೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಧೈರ್ಯ ಮಾಡಿದಾಗ ನಾವೇ ಮಾಯಾ ಕೋಲಾಹಲರಾಗುತ್ತೇವೆ. ಅಂತೆಯೇ ಶೂನ್ಯಪೀಠದ ಪೀಠಾಧ್ಯಕ್ಷರಾದ ಶೂನ್ಯಸಿಂಹಾಸನಾಧೀಶ್ವರ ಎನಿಸಿಕೊಂಡ, ಕಾಮ, ಕದಳಿ ಎಂಬ ದೇಹದೊಳಗೆ ಬಯಲಾಗುವ ಪರಿಯನ್ನು ವಿವರಿಸಿ ಈ ಲೋಕದಲ್ಲಿ ಬಯಲಾಗಿ ಹೋದರು.
ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…
ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…
ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…
ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…
ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 3 ಎಕ್ಕರೆ …
ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್…