ಕಲಬುರಗಿ: ಕೊರೊನಾ ವೈರಸ್ ಬಳಸಿಕೊಂಡು, ಇಡಿ ದೇಶವನ್ನು ಲಾಕ್ ಡೌನ್ ಮಾಡಿಬಿಟ್ಟು, ಬಿಜೆಪಿ ತನ್ನ ಬೇಳೆಯನ್ನು ಎಷ್ಟು ಅಚ್ಚುಕಟ್ಟಾಗಿ ಬೇಯಿಸಿಕೊಂಡಿದೆ ಎಂದು ಬಿ.ಎಸ್.ಪಿ ಪಕ್ಷದ ಜಿಲ್ಲಾ ಮುಖಂಡರಾದ ಜೈಭೀಮ ಶಿಂಧೆ ಆರೋಪಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಜನ ಕೊರೊನಾ ಪರಿಣಾಮದಿಂದ ಮನೆಯಲ್ಲಿ ಅಡಗಿಕೊಂಡು ಮೂಲಭೂತ ಸೌಕರ್ಯ ಮೂಲಭೂತ ಸೌಲಭ್ಯಗಳಿಲ್ಲದೆ ತತ್ತರಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ದೇಶದ ಜನತೆಗೆ ಏನು ಒದಗಿಸಬೇಕೋ ಅದನ್ನು ಒದಗಿಸಿ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳದೆ, ದೇಶದ ಹಣವನ್ನು ಲೂಟಿ ಮಾಡಿ ಹೊರದೇಶಗಳಲ್ಲಿ ಠೀಕಾಣಿ ಹೂಡಿರುವ ಬ್ಯಾಂಕ್ ದರೋಡೆ ಕೋರ ಬಂಡವಾಳ ಶಾಹಿಗಳ 68 ಸಾವಿರ ಕೋಟಿ ಭಾರೀ ಮೊತ್ತದ ಸಾಲದ ಹಣವನ್ನು RBI ಸಮ್ಮುಖದಲ್ಲಿ ಮನ್ನಾ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ದಿನಗಳಲ್ಲಿ ಸಾಲಾ ಮನ್ನಾ ಮಾಡಿದರೆ ಜನ ಬೀದಿಗೆ ಬಂದು ಪ್ರತಿಭಟಿಸುತ್ತಾರೆ ಎಂದು ತಿಳಿದು ಅವರನ್ನು ಬೇಕೆಂದೇ ಜನಥಾ ಕರ್ಪ್ಯೂ, 144, ಸೀಲ್ಡೌನ್, ಹಾಟ್ ಸ್ಪಾಟ್, ರೆಟ್ ಜೋನ್, ಆರೆಂಜ್ ಜೋನ್, ಗ್ರೀನ್ ಜೋನ್ ಹೆಸರಿನಲ್ಲಿ ಲಾಕ್ಡೌನ್ ಮಾಡಿದ ಸಂದರ್ಭವನ್ನು ಸಮರ್ಪಕವಾಗಿ ಬಳಿಸಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಇಂಥ ಜನದ್ರೋಹಿ, ದೇಶ ದ್ರೋಹದ ಕೆಲಸಗಳನ್ನು ಪ್ರಪಂಚದಲ್ಲಿ ಮತ್ತಾರೂ ಮಾಡಿರಲಾರರು. 68 ಸಾವಿರ ಕೋಟಿ ಹಣವನ್ನು ಸಾಲವಾಗಿ ಪಡೆದ 50 ಜನ ಬಂಡವಾಳಿಗರಿಂದ ದೇಶಕ್ಕೆ ನಷ್ಟವೇ ಆಗಿದೆ ಹೊರತು, ಯಾವ ಲಾಭವೂ ಆಗಿಲ್ಲ, ಪ್ರಗತಿಯೂ ಆಗಿಲ್ಲ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಜನಸಾಮಾನ್ಯರಿಗೆ ಅನ್ಯಾಯವನ್ನು ಮಾಡುತ್ತಿರುವುದು ಬಹುಜನ ಸಮಾಜ ಪಕ್ಷ ತೀವ್ರವಾಗಿ ಖಂಡಿಸಿದೆ ಎಂದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…