ಸುರಪುರ: ಹೊರ ರಾಜ್ಯದಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ತೆರಳಿದ ತಾಲೂಕಿನ ಜನತೆಯನ್ನು ಮರಳಿ ತಾಲೂಕಿಗೆ ಕರೆತರಲು ಸರ್ಕಾರ ನಿರ್ಧರಿಸಿದ್ದು ಕಾರಣ ಅವರು ನಮ್ಮ ತಾಲೂಕಿಗೆ ಬರುವ ಮುಂಚೆಯ ಅವರ ಆರೋಗ್ಯ ದೃಷ್ಠಿ ಮತ್ತು ತಾಲೂಕನ್ನು ಹಸಿರು ವಲಯದಲ್ಲಿ ಇರಿಸಲು ಎಲ್ಲಾ ರೀತಿಯಿಂದಾಗಿ ಸನ್ನದ್ಧರಾಗಬೇಕು ಎಂದು ತಹಶಿಲ್ದಾರ ನಿಂಗಣ್ಣ ಬಿರಾದರ್ ತಿಳಿಸಿದರು.
ತಹಶಿಲ್ದಾರ ಚೇರಿ ಸಭಾಂಗಣದಲ್ಲಿ ನಡೆದ ಕರೊನಾ ಟಾಸ್ಕ ಫೊರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈಗಾಗಲೆ ಸರ್ಕಾರವು ನೀಡಿರುವ ಮಾರ್ಗಸೂಚಿಯಂತೆ ಎಲ್ಲ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಅದರಂತೆ ಈಗ ಹೊರರಾಜ್ಯದಲ್ಲಿ ನಮ್ಮ ತಾಲೂಕಿನವರು ಎಷ್ಟು ಜನರಿದ್ದಾರೆ ಎನ್ನುವುದು ನಿಖರ ಮಾಹಿತಿ ಇಲ್ಲ ಆದರೂಕೂಡಾ ನಮ್ಮ ಜನರ ರಕ್ಷಣೆಗೆ ಬೇಕಾಗುವ ಕ್ವಾರಂಟೈನ್ ವಾರ್ಡ ಮತ್ತು ಆರೋಗ್ಯ ತಪಾಸಣೆಗೆ ಬೇಕಾಗುವ ಎಲ್ಲಾ ಅಗತ್ಯ ಕ್ರಮವನ್ನು ವಹಿಸಲಾಗಿದೆ. ಹಾಗೆ ನಗರದ ಪಾಲಿಟ್ಕೆಕ್ನಿಕ್ ಕಾಲೇಜನ್ನು ಕ್ವಾರಂಟೈನ್ ಸೆಂಟರ್ ಆಗಿ ಮಾಡಲಾಗಿದೆ ಅದರಲ್ಲಿ ಸುಮಾರು 200 ರಿಂದ 300 ಜನರು ಇರಬಹುದು ಸುಜ್ಜಿತವಾದ ಕಟ್ಟಡ ಹಾಗೂ ಎಲ್ಲಾ ವ್ಯವಸ್ಥೆಯನ್ನು ಈಗಾಗಲೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪ ತಹಶಿಲ್ದಾರ ಸುಫಿಯಾ ಸುಲ್ತಾನ, ತಾಪಂ ಇಒ ಅಂಬ್ರೇಶ್, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ, ಪಿಐ ಎಸ್.ಎಮ್.ಪಾಟೀಲ್, ಪೌರಾಯುಕ್ತ ಜೀವನ ಕುಮಾರ ಸೇರಿದಂತೆ ಇತರರಿದ್ದರು.
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…