ನಿನ್ನನ್ನು ಮರೆಯಲ್ಲಮ್ಮಾ: ಇ-ಮೀಡಿಯಾ ಕವಿತೆ ಲೈನ್

ನಿನ್ನನ್ನು ಮರೆಯಲ್ಲಮ್ಮಾ

ನವಮಾಸ ಉದರದಿ ನಾನಿದ್ದಾಗ
ನೀ ಪಟ್ಟ ಕಷ್ಟ
ಜಗ ನೋಡು ಆತುರ ನನಗಿದ್ದಾಗ
ನೀನಗಾದ ಕಷ್ಟ
ನೀ ಮರತೆಯಮ್ಮಾ.. ನೀ ಮರತೆಯಮ್ಮಾ.
ಎದೆ ಅಮೃತ ಕುಡಿಸಿ
ಎಳೆ ಸ್ನಾನವ ಮಾಡಿಸಿ
ಮಡಿಲಲ್ಲಿ ಆಡಿಸಿ
ಜೋಗುಳ ಗಾನದಿ ಮಲಗಿಸುವಾಗ
ನಾನತ್ತಾಗ ನೀನತ್ತಿದ್ದು
ನೀ ಮರತೆಯಮ್ಮಾ.. ನೀ ಮರೆತೆಯಮ್ಮಾ
ಬೀಳುತ್ತ ಏಳುತ್ತ ನಡೆಯುವಾಗ
ಕೈ ಹಿಡಿದು ನಡೆಸಿದೆ ನೀನಮ್ಮಾ
ತೊದಲುತ್ತಾ ಮೊದಲುತ್ತಾ ನುಡಿಯುವಾಗ
ಮಮತೆಯ ನುಡಿ ನೀ ಹೇಳಿದೆಮ್ಮಾ
ಚೆಂದದಿ ನಡೆದು ಅಂದದಿ ನುಡಿಯುತ್ತಾ
ನಾನಕ್ಕಾಗ ನೀ ನಕ್ಕಿದ್ದು
ನೀ ಮರೆತೆಯಮ್ಮಾ… ನೀ ಮರತೆಯಮ್ಮಾ

ಗುರವಾಗಿ ನನ್ನ ತಿದ್ದಿ ತೀಡಿ
ಬದುಕಿನ ಜಯದ ಗುಟ್ಟನ್ನು ಹೇಳಿ
ವಾತ್ಸಲ್ಯದಿ ಪ್ರೀತಿ ಪ್ರೇಮವ ಕಲಿಸಿ
ಧೈರ್ಯದಿ ನಾ ಮುನ್ನುಗ್ಗುವಾಗ
ನನ್ನ ಜಯದಿ ನಿನ್ನ ಜಯ ಕಾಣಿದ್ದು
ನೀ ಮರೆತೆಯಮ್ಮಾ.. ನೀ ಮರತೆಯಮ್ಮಾ
ಕಷ್ಟಿರಲಿ ಸುಖವಿರಲಿ
ಎಷ್ಟೆ ಎತ್ತರಕೆ ನಾ ಬೆಳೆಯಲಿ
ನೀ ಕಲಿಸಿದ ಪಾಠ
ನೀ ಬಡಿಸಿದ ಊಟ
ನೀ ಮರೆತರು..
ನಾ ಮರೆಯಲಮ್ಮಾ ..
ನಿನ್ನನ್ನು ನಾ ಮರೆಯಲಮ್ಮಾ ..

ಮಲಿಕಜಾನ ಶೇಖ
ಅಕ್ಕಲಕೋಟ, ಸೊಲ್ಲಾಪುರ
emedialine

View Comments

  • ತುಂಬಾ ಉತ್ತಮ ಹಾಗೂ ಉತ್ಸಾಹ ನೀಡುವಂಥ ಕವನ ಗುರುಗಳೇ...
    ತಾಯಿ ಗುರುವಾಗಿ, ಪ್ರೀತಿ ವಾತ್ಸಲ್ಯದ ಖಣಿಯಾಗಿ ಜೀವನದ ಪ್ರತಿಯೊಂದು ಯಶಸ್ಸಿನ ಕ್ಷಣದಲ್ಲಿ ನಮಗೆ ಆಶಿರ್ವಾದ ನೀಡಿ ಅವಳು ಮರೆತರೂ ನಾವು ಮರೆಯಲ್ಲ ಎಂಬ ಗೌರವಪೂರ್ವಕ ಕವನ ಇದು... ಧನ್ಯವಾದಗಳು ಹಾಗೂ ಗೌರವಪೂರ್ವಕವಾಗಿ ನಿಮ್ಮ ತಾಯಿಯವರ ಪಾದಗಳಲ್ಲಿ ನನ್ನ ಪ್ರಣಾಮಗಳು

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

2 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

4 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

4 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

4 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

4 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420