ಸುರಪುರ: ಕೊರೊನಾ ಎಫೆಕ್ಟ್ನಿಂದಾಗಿ ಈಬಾರಿಯ ರಮ್ಜಾನ್ ಹಬ್ಬವನ್ನು ತಾಲೂಕಿನ ಮುಸ್ಲಿಂ ಬಾಂಧವರು ಸರಳವಾಗಿ ಆಚರಣೆ ನಡೆಸಿದರು.ಸರಕಾರ ಆದೇಶ ಹೊರಡಿಸಿ ಯಾವುದೆ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ ಮಾಡದಂತೆ ಸೂಚಿಸಲಾಗಿತ್ತು.ಅಲ್ಲದೆ ಗುಂಪಾಗಿ ಸೇರದಂತೆಯು ಮತ್ತು ಬೇರೊಬ್ಬರ ಮನೆಗಳಿಗೂ ಹೋಗದಂತೆ ಮುಂಜಾಗ್ರತೆ ಕೈಗೊಳ್ಳಲು ತಿಳಿಸಲಾಗಿತ್ತು.
ಅದರಂತೆ ಮುಸ್ಲಿಂ ಬಾಂಧವರು ಈದ್ಗಾಗೆ ಹೋಗದೆ ತಮ್ಮ ತಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ಹಬ್ಬ ಆಚರಿಸಿದರು.ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ ತಮ್ಮ ಬಂಧು ಬಾಂಧವರಿಗೂ ಮನೆಯಿಂದಲೆ ಶುಭ ಕೋರಿದರು.
ಈಬಾರಿಯ ಹಬ್ಬದ ಕುರಿತು ಟಿಪ್ಪು ಸುಲ್ತಾನ ಯುವಕ ಸಂಘದ ಅಧ್ಯಕ್ಷ ಹರ್ಷದ್ ದಖನಿ ಪತ್ರಿಕೆಯೊಂದಿಗೆ ಮಾತನಾಡಿ,ಈ ವರ್ಷ ಕೊರೊನಾ ವೈರಸ್ ಮಾರಿಯಾಗಿ ಜಗತ್ತಿನ ಎಲ್ಲಾ ಜನರಿಗೂ ತಿವ್ರವಾದ ತೊಂದರೆಯನ್ನುಂಟು ಮಾಡಿದೆ.ನಮ್ಮ ದೇಶದಲ್ಲಿಯೂ ಕೊರೊನ ಅಟ್ಟಹಾಸ ಮೆರೆಯುತ್ತಿದ್ದು,ಸರಕಾರ ಈಬಾರಿಯ ಹಬ್ಬವನ್ನು ಸರಳವಾಗಿ ಆಚರಿಸುವ ಸೂಚನೆ ನಿಡಿದಂತೆ ಎಲ್ಲಾ ಮುಸ್ಲಿಂ ಬಾಂಧವರುಕೂಡ ಸರಳವಾಗಿ ಆಚರಣೆ ಮಾಡುತ್ತಿದ್ದೇವೆ.ನಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸಿ ಕೊರೊನಾ ವೈರಸ್ ಬೇಗ ನಾಶವಾಗಿ ಮಾನವ ಜನಾಂಗಕ್ಕೆ ಒಳಿತನ್ನುಂಟು ಮಾಡಲೆಂದು ಅಲ್ಲಾನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ನಮ್ಮ ಸುರಪುರದಲ್ಲಿ ಪ್ರತಿ ವರ್ಷ ರಮ್ಜಾನ್ ಹಬ್ಬವನ್ನು ಸರ್ವ ಧರ್ಮದ ಸೌಹಾರ್ಧತೆಯಿಂದ ಆಚರಿಸಲಾಗುತ್ತಿತ್ತು.ಸುರಪುರ ಅರಸು ಮನೆತನದವರು ರಮ್ಜಾನ್ ಹಬ್ಬದ ದಿನ ನಮ್ಮ ಮೌಲ್ವಿಯವರು ಸಾಮೂಹಿಕ ಪ್ರಾರ್ಥನೆ ಮುಗಿಸಿಕೊಂಡು ಪಲ್ಲಕ್ಕಿಯಲ್ಲಿ ಹೊತ್ತು ತಂದನಂತರ ದರಬಾರದಲ್ಲಿ ಅವರಿಗೆ ವೀಳೆದೆಲೆ ಅಡಿಕೆ ನೀಡಿ ಸತ್ಕರಿಸುವ ಮೂಲಕ ಹಬ್ಬದ ಶುಭ ಕೋರುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.ಆದರೆ ಈಬಾರಿ ನಮ್ಮ ಮನೆಗಳಲ್ಲಿಯೆ ಪ್ರಾರ್ಥನೆ ಸಲ್ಲಿಸುವುದರಿಂದ ಈ ಸಂಪ್ರಾಯ ನೆರವೇರುತ್ತಿಲ್ಲ.
ಇದು ನಮ್ಮ ಸುರಪುರ ಅರಸರ ಸೌಹಾರ್ಧತೆಯ ಸಂಕೇತವಾಗಿತ್ತು ಎಂದು ಹಿಂದಿನ ಆಚರಣೆಯ ಮೆಲಕು ಹಾಕಿದರು.ಮಾಜಿ ಶಾಸಕರಾಗಿದ್ದ ರಾಜಾ ಕುಮಾರ ನಾಯಕರ ಕಾಲದಿಂದಲೂ ಇಂದಿನ ವರೆಗೂ ರೋಜಾ ತಿಂಗಳಿನಲ್ಲಿ ನಗರದ ಎಲ್ಲಾ ಮಸೀದಿಗಳಿಗೆ ಹೋಗಿ ಖರ್ಜೂರ ಹಂಚುತ್ತಿದ್ದರು.ಈಬಾರಿ ಇದೂ ಕೂಡ ನೆರವೇರುತ್ತಿಲ್ಲ ಎಂದು ವಿವರಿಸಿದರು.
ನಗರದ ಝಂಡದಕೇರಾ ಮತ್ತು ರಂಗಂಪೇಟೆಯಲ್ಲಿನ ಈದ್ಗಾ ಮೈದಾನಗಳ ಬಳಿಯಲ್ಲಿ ಮುಂಜಾಗ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…