ಬಿಸಿ ಬಿಸಿ ಸುದ್ದಿ

ಕಲಬುರಗಿಯಲ್ಲಿ ಮುಂದುವರೆದ ಕಿಲ್ಲರ್ ಕೊರೊನಾ ಅಟ್ಟಹಾಸ: ಇಬ್ಬರು ಸಾವು ಸೇರಿ 20 ಜನರಿಗೆ ಪಾಜಿಟಿವ್

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಿಂದ ಮೃತರಾದ ಇಬ್ಬರು ಸೇರಿದಂತೆ ಒಟ್ಟು 20 ಜನರಿಗೆ ಶುಕ್ರವಾರ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ ಎಂದು ಡಿ.ಸಿ.ಶರತ್ ಬಿ. ತಿಳಿಸಿದ್ದಾರೆ.

ಸೋಂಕಿತರಲ್ಲಿ ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ 16 ಜನ, ತೀವ್ರ ಉಸಿರಾಟದ ತೊಂದರೆಯ ಹಿನ್ನೆಲೆಯ ಇಬ್ಬರು (ಮೃತರು) ಮತ್ತು ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದ ಇಬ್ಬರಿಗೆ ಕೊರೋನಾ ಸೋಂಕು ತಗುಲಿದೆ.

ರೋಗಿ ಸಂಖ್ಯೆ ಪಿ-5909 ಸಂಪರ್ಕದಲ್ಲಿ ಬಂದ ಕಲಬುರಗಿ ನಗರದ ಶಹಾಬಜಾರ (ಜಿಡಿಎ ಕಾಲೋನಿ) ಪ್ರದೇಶದ 31 ವರ್ಷದ ಯುವಕ (ಪಿ-6308), ರೋಗಿ ಸಂಖ್ಯೆ ಪಿ-5910 ಸಂಪರ್ಕದಲ್ಲಿ ಬಂದ ಕಮಲಾಪುರ ತಾಲೂಕಿನ ಜೀವಣಗಿ ಗ್ರಾಮದ 26 ವರ್ಷದ ಯುವತಿಗೆ (ಪಿ-6309) ಕೊರೋನಾ ಸೋಂಕು ಕಂಡು ಬಂದಿದೆ.

ಕಲಬುರಗಿ ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದ ತೀವ್ರ ಉಸಿರಾಟ ತೊಂದರೆ ಹಿನ್ನಲೆಯ 53 ವರ್ಷದ ಪುರುಷ (ಪಿ-6323 ನಿಧನ) ಮತ್ತು ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ತೀವ್ರ ಉಸಿರಾಟ ತೊಂದರೆ ಹಿನ್ನಲೆಯ 48 ವರ್ಷದ ಪುರುಷ (ಪಿ-6325 ನಿಧನ) ಇವರಿಗೆ ಶುಕ್ರವಾರ ಕೊರೋನಾ ದೃಢವಾಗಿದೆ.

ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಕಲಬುರಗಿ ತಾಲೂಕಿನ ಕಲ್ಲಹಂಗರಗಾ ಗ್ರಾಮದ 16 ವರ್ಷದ ಯುವಕ (ಪಿ-6310), 54 ವರ್ಷದ ಪುರುಷ (ಪಿ-6311) ಹಾಗೂ 36 ವರ್ಷದ ಮಹಿಳೆ (ಪಿ-6312), ಫರಹತಾಬಾದ ಗ್ರಾಮದ 60 ವರ್ಷದ ವೃದ್ಧೆ (ಪಿ-6313), 36 ವರ್ಷದ ಯುವಕ (ಪಿ-6314) ಹಾಗೂ 23 ವರ್ಷದ ಯುವತಿ (ಪಿ-6315), ಕಿಣ್ಣಿಸಡಕ್ ಗ್ರಾಮದ 42 ವರ್ಷದ ಮಹಿಳೆ (ಪಿ-6316), ಕಮಲಾಪುರ ತಾಲೂಕಿನ ಗೊಬ್ಬೂರವಾಡಿ ಗ್ರಾಮದ 34 ವರ್ಷದ ಪುರುಷ (ಪಿ-6317), 07 ವರ್ಷದ ಬಾಲಕ (ಪಿ-6318), 12 ವರ್ಷದ ಬಾಲಕಿ (ಪಿ-6319), 30 ವರ್ಷದ ಮಹಿಳೆ (ಪಿ-6320), 11 ವರ್ಷದ ಬಾಲಕಿ (ಪಿ-6321) ಹಾಗೂ 23 ವರ್ಷದ ಯುವತಿ (ಪಿ-6322), ಸೇಡಂ ತಾಲೂಕಿನ ಮೋತಕಪಲ್ಲಿ ಗ್ರಾಮದ 25 ವರ್ಷದ ಯುವತಿ (ಪಿ-6324), ಅಫಜಲಪುರ ತಾಲೂಕಿನ ಸ್ಟೇಷನ್ ಗಾಣಗಾಪುರದ 28 ವರ್ಷದ ಯುವತಿ (ಪಿ-6326) ಮತ್ತು ಕರಜಗಿ ಗ್ರಾಮದ 38 ವರ್ಷದ ಮಹಿಳೆಗೆ (ಪಿ-6327) ಕೋವಿಡ್-19 ಸೋಂಕು ತಗುಲಿದೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 816ಕ್ಕೆ ಏರಿದೆ. ಇದರಲ್ಲಿ ಇದೂವರೆಗೆ 345 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 10 ಜನ ನಿಧನ ಹೊಂದಿರುತ್ತಾರೆ. ಉಳಿದಂತೆ 461 ಸಕ್ರೀಯ ರೋಗಿಗಳಿದ್ದಾರೆ ಎಂದು ಶರತ್ ಬಿ. ವಿವರಿಸಿದರು.

emedialine

Recent Posts

ಸಮಸಮಾಜಕ್ಕೆ ಅಂಬೇಡ್ಕರ್ ಚಿಂತನೆ ಅಗತ್ಯ

ಆಳಂದ:ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಸಮಾಜ ರೂಪಗೊಳ್ಳಲು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಅಗತ್ಯವಾಗಿವೆ ಎಂದು ಆಳಂದದ ತೋಂಟದಾರ್ಯ ಅನುಭವ…

2 hours ago

ಮೆರವಣಿಗೆ ಸಾಕು, ಅನುಸರಣೆ ಬೇಕು: ಸಚಿವ ಡಾ. ಶರಣಪ್ರಕಾಶ ಪಾಟೀಲ

ಜಾಗತಿಕ ಲಿಂಗಾಯತ ಮಹಾಸಭಾದ 891ನೇ ಬಸವ ಜಯಂತಿ ಉತ್ಸವಕ್ಕೆ ಚಾಲನೆ ಕಲಬುರಗಿ: ಮೆರವಣಿಗೆ ಮತ್ತು ವೈಭವಕ್ಕೆ ಸೀಮಿತವಾಗಿರುವ ಮಹಾತ್ಮರ ಜಯಂತ್ಯುತ್ಸವಗಳು…

2 hours ago

ವಾಡಿ ಬಿಜೆಪಿ ಕಛೇರಿಯಲ್ಲಿ ಬಸವ ಜಯಂತಿ ಆಚರಣೆ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಲಾಯಿತು. ಇದೇ ವೇಳೆ…

4 hours ago

ತೆಲಂಗಾಣ – ಮಹಾರಾಷ್ಟ್ರ ಚುನಾವಣಾ ಪ್ರಚಾರಕರಾಗಿ ಸಂಸದ ಡಾ.ಉಮೇಶ್ ಜಾಧವ್ ಗೆ ಹೈಕಮಾಂಡ್ ಹೊಣೆ

ವಿಕಾರಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಚುನಾವಣಾ ಪ್ರಚಾರ ಆರಂಭ ಕಲಬುರಗಿ: ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ಅವರನ್ನು ಬಿಜೆಪಿ ಹೈಕಮಾಂಡ್…

4 hours ago

ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ: ಚರಂತೇಶ್ವರ ಶ್ರೀ

ಶಹಾಬಾದ: ಸುಖಮಯ ಜೀವನದಲ್ಲಿ ಅರಿವು ಆಚಾರವನ್ನು ಅಳವಡಿಸಿಕೊಂಡು ಮನುಷ್ಯತ್ವದಿಂದ ಬಾಳುವುದೇ ನಿಜವಾದ ಸಂಸ್ಕøತಿ ಎಂದು ತೊನಸನಹಳ್ಳಿ(ಎಸ್) ಗ್ರಾಮದ ಶ್ರೀ ಸಂಗಮೇಶ್ವರ…

5 hours ago

ಬೊಮ್ಮನಹಳ್ಳಿ ಟಿ: 111 ವರ್ಷದ ಶತಾಯುಷಿ ಹಣಮಂತಿ ತೇಕರಾಳ ನಿಧನ

ಸುರಪುರ: ತಾಲೂಕಿನ ಬೊಮ್ಮನಹಳ್ಳಿ ಟಿ. ಗ್ರಾಮದ ಶತಾಯುಷಿ ಹಣಮಂತಿ ಹಣಮಂತ ತೇಕರಾಳ ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. 111 ವರ್ಷಗಳ ಕಲಾ…

5 hours ago