ಚಿತ್ತಾಪುರ: ತಾಲೂಕಿನ ಕದ್ದರ್ಗಿ ಮತ್ತು ಜೀವಣಗಿ ಗ್ರಾಮಗಳು ನೂತನ ಶಹಾಬಾದ್ ತಾಲೂಕಿಗೆ ಸೇರ್ಪಡೆ ಮಾಡಿರುವುದಕ್ಕೆ ವಿರೋಧವಿದೆ, ಕೂಡಲೇ ಕೈಬಿಡುವಂತೆ ಆಗ್ರಹಿಸಿ ಎರಡು ಗ್ರಾಮಗಳ ಗ್ರಾಮಸ್ಥರು ಕಂದಾಯ ಸಚಿವರಿಗೆ ಬರೆದ ಮನವಿ ಪತ್ರ ಮಂಗಳವಾರ ತಹಸಿಲ್ದಾರ್ ಅವರಿಗೆ ಸಲ್ಲಿಸಿದರು.
ಗ್ರಾಮದ ಮುಖಂಡರಾದ ಜಗದೇವ ಎಸ್ ಕುಂಬಾರ ಮಾತನಾಡಿ ನೂತನ ಶಹಾಬಾದ್ ತಾಲೂಕಿಗೆ ಚಿತ್ತಾಪುರನ 7 ಗ್ರಾಮಗಳು ಸೇರ್ಪಡೆ ಮಾಡಿದೆ. ಆದರೆ ಚಿತ್ತಾಪುರಗೆ ಸಮೀಪ ಇರುವ ಕದ್ದರ್ಗಿ ಮತ್ತು ಜೀವಣಗಿ ಗ್ರಾಮಗಳ ಸೇರ್ಪಡೆ ಕೈಬಿಟ್ಟು ಚಿತ್ತಾಪುರ ತಾಲೂಕಿನಲ್ಲಿಯೆ ಮುಂದುವರಿಸಬೇಕು. ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರವಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೀವಣಗಿ ಗ್ರಾಮದ ಮುಖಂಡ ಆಂಜನೇಯ ಮಸಬೋ ಮಾತನಾಡಿ ಎರಡು ಗ್ರಾಮಗಳ ಗ್ರಾಮಸ್ಥರ ಎಲ್ಲಾ ವ್ಯಾಪಾರ-ವಹಿವಾಟು ಮತ್ತು ಮಕ್ಕಳ ವಿದ್ಯಾಭ್ಯಾಸ ಕೂಡ ಚಿತ್ತಾಪುರದಲ್ಲಿ ಇರುತ್ತದೆ, ಮತ್ತು ಚಿತ್ತಾಪುರಗೆ ಹೋಗಲು ಕೇವಲ 7 ಕಿ.ಮೀ ಅಷ್ಟೇ ಆದರೆ ಶಹಾಬಾದಗೆ ಹೋಗಲು 13 ಕಿ.ಮೀ. ದೂರವಾಗುತ್ತದೆ. ಹಾಗೂ ಮಳೆಗಾಲದಲ್ಲಿ ಕಾಗಿಣಾ ನದಿ ತುಂಬಿ ಹರಿವುದರಿಂದ ಶಹಾಬಾದಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು ಆದ್ದರಿಂದ ಚಿತ್ತಾಪುರ ತಾಲೂಕಿನಲ್ಲಿಯೆ ಕದ್ದರ್ಗಿ,ಜೀವಣಗಿ ಗ್ರಾಮಗಳು ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಎರಡು ಗ್ರಾಮಗಳ ಗ್ರಾಮಸ್ಥರು ಮೂಲ ತಾಲೂಕಿನಲ್ಲಿ ಉಳಿಯಲು ಒಮ್ಮತದ ಅಭಿಪ್ರಾಯ ಹೊಂದಿದ್ದಾರೆ ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದಲ್ಲಿ ಗ್ರಾಮಗಳ ಹಾಗೂ ವಿವಿಧ ಸಂಘಟನೆಗಳೊಂದಿಗೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆಯಲ್ಲಿ ಕದ್ದರ್ಗಿ ಗ್ರಾಮಸ್ಥರಾದ ಬಸವರಾಜ್ ಗುಡ್ಡಾಪುರ್, ಹಣಮಂತ ದೇಸಾಯಿ, ರಾಘವೇಂದ್ರ ಗುತ್ತೇದಾರ್, ನಾಗೇಂದ್ರ. ಜೀವಣಗಿ ಗ್ರಾಮಸ್ಥರಾದ ಸಾಬಣ್ಣ ಕೂಬಾಕ್, ಜಗಣಗೌಡ ಮಾಲಿ ಪಾಟೀಲ್, ಮಲ್ಲಿನಾಥ್ ದಳಪತಿ, ಬಸಯ್ಯಸ್ವಾಮಿ, ಸೇರಿದಂತೆ ಇತರರಿದ್ದರು.
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…
ಈ ಜೂನ್ - ಜುಲೈ ತಿಂಗಳು ಬಂದಿತೆಂದರೆ ಸಾಕು ನಮ್ಮ ಇಡೀ ಕುಟುಂಬದ ಬಂಧು ಬಾಂಧವರಿಗೆ ಒಂದೆಡೆ ದುಃಖ, ತಳವಳ,…
ಸುರಪುರ; ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿ ಜಾನಪದ ಸಾಹಿತ್ಯ, ಕಲೆಗೆ ಇದ್ದು, ಜಾನಪದ ಸಾರ್ವಕಾಲಿಕ ಸತ್ಯವಾಗಿದೆ ಎಂದು ಲಕ್ಷ್ಮೀಪುರ…
ಸುರಪುರ: ತಿಮ್ಮಾಪುರದ ಮುಖ್ಯ ರಸ್ತೆಯಲ್ಲಿ ನಿರ್ಮಾಣವಾದ ನೂತನ ಮರಗಮ್ಮ ದೇವಿಯ ದೇವಸ್ಥಾನ ಲೋಕಾರ್ಪಣೆ , ಮರಗಮ್ಮ ದೇವಿಯ ರಜತ ಮೂರ್ತಿಯ…
ಕಲಬುರಗಿ: ನಗರದ ಪ್ರತಿಷ್ಠಿತ ಸುಬೇದಾರ ಕೇರ್ ಹಾಸ್ಪಿಟಲ್ ವತಿಯಿಂದ ಕಾಳಗಿ ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಜುಲೈ 8 ರಂದು…