ಕಲಬುರಗಿ: ನಗರದ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಅವರಣದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಸಹಾಯಕ ಅರಣ್ಯ ಸಂರಕ್ಷಕ ಅಧಿಕಾರಿಗಳಾದ ಬಾಬುರಾವ ಪಾಟೀಲ ರವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.
ಮಾತನಾಡುತ್ತಾ ಸಸಿಗಳನ್ನು ನಮ್ಮ ಇಲಾಖೆಯಿಂದ ಪೂರೈಸಿ, ನೆಟ್ಟುರಕ್ಷಣೆ ಮಾಡುತ್ತೇವೆ, ಇದು ಕೇವಲ ನಮ್ಮೊಬ್ಬರಿಂದ ಮಾತ್ರ ಯಶ್ವಸಿಯಾಗುವುದಿಲ್ಲ. ಒಂದು ವರ್ಷ ಕಾಲ ನೀವು ಸಹ ಜತನದಿಂದಕಾಪಾಡಬೇಕು. ನೀರು, ಗೊಬ್ಬರ ಆರೈಕೆಅಗತ್ಯ. ಕಲಬುರ್ಗಿ ನಗರದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದಿಂದ ೩೫ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವಯೋಜನೆ ಜಾರಿಯಲ್ಲಿದೆ ಇನ್ನೂ ಸಾವಿರಾರು ಗಿಡಗಳನ್ನು ನೆಟ್ಟು ಕಲಬುರ್ಗಿಯ ಬೇಸಿಗೆಯ ಧಗೆಯನ್ನುಕಡಿಮೆ ಮಾಡಬೇಕಾಗಿದೆ ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯ ಎಂದರು.
ಪರಿಸರ ಪ್ರೇಮಿ ಪ್ರಾಧ್ಯಾಪಕರಾದ ಡಾ.ಶಶಿಶೇಖರರೆಡ್ಡಿ ಯವರು ಮಾತನಾಡಿ ಪರಿಸರ ಸಮತೋಲನ ಕಾಪಾಡಲು ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡುವ ಅಗತ್ಯ ತುಂಬಾ ಇದೆ. ಅರಣ್ಯ ನಾಶದಿಂದ ಮನುಕುಲವೇ ನಾಶವಾಗುತ್ತದೆ, ಪ್ರಾಕೃತಿಕ ವಿಕೋಪಗಳು ಪರಿಸರಅಸಮತೋಲನದ ಪರಿಣಾಮಗಳಾಗಿವೆ. ಭೂಮಿಯ ತಾಪಮಾನ ಏರಿಕೆ, ಅತೀವೃಷ್ಟಿ, ಅನಾವೃಷ್ಟಿ, ಸುನಾಮಿ, ಸಾಂಕ್ರಮಿಕ ರೋಗಗಳು, ನೆರೆ ಪ್ರವಾಹಗಳು, ಭೂಕಂಪಗಳು ಮಾನವ ಅತಿಯಾಸೆಯಿಂದ ಪರಿಸರವನ್ನು ನಾಶಗೊಳಿಸುವದರಿಂದ ಸಂಭವಿಸುತ್ತಿವೆ. ಇನ್ನಾದರೂ ಎಚ್ಚತ್ತುಕೊಂಡುಗಿಡ, ಮರ, ಬಳ್ಳಿಗಳನ್ನು ಬೆಳೆಸಿ ಪರಿಸ್ಥಿತಿ ಕೈಮೀರಿ ಹೋಗುವ ಮುನ್ನವೆ ಸರಿ ಪಡಿಸಬೇಕು. ಇಲ್ಲದಿದ್ದರೆ ಅಮ್ಲಜನಕವನ್ನೂ ಸಹ ಖರೀದಿಸ ಬೇಕಾಗಬಹುದು. ಅದಕ್ಕೂ ಮೊದಲೇಎಚ್ಚತ್ತು ಕೋಳ್ಳೊಣ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಪ್ರೊ. ಖಂಡೇರಾವ ಮಾತನಾಡುತ್ತಾ ಇವತ್ತುತುಂಬಾ ಸಂತೋಷದಾಯಕವಾದ ದಿನ ಏಕೆಂದರೆ ನಮ್ಮ ಕಾಲೇಜು ಪ್ರಾಂಗಣ ಎರಡು ವರ್ಷಗಳಲ್ಲಿ ಸಂಪೂರ್ಣ ಹಸಿರುಮಯವಾಗಲಿದೆ. ವಿದ್ಯಾರ್ಥಿನಿಯರಿಗೆ ನೆರಳು ಮತ್ತು ತಂಪನ್ನು ನೀಡುವತಾಣವಾಗಲಿ ನಮ್ಮಕಾಲೇಜಿನ ವತಿಯಿಂದ ಇವುಗಳನ್ನು ಜತನದಿಂದ ಕಾಪಾಡುತ್ತೇವೆ ಎಂದರು. ವಲಯಅರಣ್ಯ ಅಧಿಕಾರಿಗಳಾದ ಸುನಿಲಕುಮಾರ ಅವರು ಗಿಡಗಳನ್ನು ಹೇಗೆ ಕಾಪಾಡಬೇಕು ಗೊಬ್ಬರ, ನೀರುಯಾವಾಗ ಮತ್ತು ಹೇಗೆ ನೀಡಬೇಕು. ವಿವಿಧ ಗಿಡಗಳ ಉಪಯೋಗಗಳನ್ನು ತಿಳಿಸಿದರು.
ಅರಣ್ಯರಕ್ಷಕರಾದ ಹೈದರ್ಅಲಿಯವರು ೧೦೦ ಕ್ಕೂ ಹೆಚ್ಚು ಗಿಡಗಳನ್ನು ನೆಡಿಸಿದರು. ಪ್ರಾಧ್ಯಾಪಕರಾದ ಜ್ಯೋತಿ ಬಳಗಾರ್, ಜ್ಯೋತಿರೆಡ್ಡಿ, ಮೀನಾಕ್ಷಿ, ಡಾ.ಭೀಮಣ್ಣಾ ಮತ್ತು ಗೌರಮ್ಮತಲಾ ಒಂದೊಂದು ಸಸಿ ನೆಟ್ಟು ಆ ಸಸಿಗಳನ್ನು ಕಾಪಾಡುವ ಹೊಣೆ ಹೊತ್ತುಕೊಂಡರು.
ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…
ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…
ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್ಐಆರ್…
ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…
ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…
ಕಲಬುರಗಿ: ಇನ್ನರ್ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…