ಬಿಸಿ ಬಿಸಿ ಸುದ್ದಿ

ಕುಡಿಯುವ ನೀರಿನ ಸಮಸ್ಯೆ: ಪ್ರತಿ ಐದು ವಾರ್ಡುಗಳಿಗೆ ಒಬ್ಬ ನೋಡಲ್ ಅಧಿಕಾರಿ ನಿಯೋಜನೆ

ಕಲಬುರಗಿ: ಪ್ರಸ್ತುತ ಬೇಸಿಗೆ ಕಾಲದಲ್ಲಿ ಕಲಬುರಗಿ ನಗರದಲ್ಲಿ ನೀರಿನ ಕುಡಿಯುವ ಅಭಾವ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಕುಡಿಯುವ ನೀರು ಸರಬರಾಜು ಕುರಿತು ಸಾರ್ವಜನಿಕರಿಂದ ಬರುವ ದೂರುಗಳಿಗೆ ಸಮರ್ಪಕವಾಗಿ ಸ್ಪಂದಿಸಲು ಜಲಮಂಡಳಿಯ ಅಧಿಕಾರಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಕಲಬುರಗಿ ನಗರದ ಪ್ರತಿ 5 ವಾರ್ಡಗಳಿಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ಜೂನ್ ೧೦ರವರೆಗೆ  ನಿಯೋಜಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಅವರು ಆದೇಶಿಸಿದ್ದಾರೆ.

ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಜಲಮಂಡಳಿಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಜಲಮಂಡಳಿ ಅಧಿಕಾರಿಗಳ ಹೆಸರು ಹಾಗೂ ನಿರ್ವಹಿಸುವ ವಾರ್ಡುಗಳ ವಿವರ ಹಾಗೂ ಪಾಲಿಕೆಯ ನೋಡಲ್ ಅಧಿಕಾರಿಗಳ ಹೆಸರು ಹಾಗೂ ಮೇಲ್ವಿಚಾರಣೆ ಮಾಡುವ ವಾರ್ಡುಗಳ ವಿವರ ಇಂತಿದೆ.

ವಾರ್ಡ ಸಂಖ್ಯೆ 16P 17P 24, 25, 26, 27P, 29P,30, 31, 39P, 41, 42, 43, 44P 45P, 46, 47, 48P ಗಳನ್ನು ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ದೀಲಿಪ್ ಸಿಂಗ್ (ಮೊಬೈಲ್ ಸಂಖ್ಯೆ 9448650051) ಹಾಗೂ ಉಮೇಶ ಪಂಚಾಳ (ಮೊಬೈಲ್ ಸಂಖ್ಯೆ 9480689519) ಅವರು ನಿರ್ವಹಿಸುತ್ತಿದ್ದಾರೆ. ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಪಾಲಿಕೆಯಿಂದ  ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜನೀಯರ್ ರಾಜನ್ ಮೊಬೈಲ್ ಸಂಖ್ಯೆ 900981323ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ 02, 17, 24, 25  ಮತ್ತು ೨೬ರ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ ಕಿರಿಯ ಇಂಜಿನಿಯರ್ ದತ್ತು ಮೊಬೈಲ್ ಸಂಖ್ಯೆ 7760732441 ಇವರಿಗೆ ವಾರ್ಡ್ ಸಂ. ೪೪, ೪೫, ೪೬, ೪೭ ಮತ್ತು ೪೮ ಹಾಗೂ  ಕಿರಿಯ ಇಂಜಿನಿಯರ್ ಶಾಂತಪ್ಪ ನಂದೂರ ಮೊಬೈಲ್ ಸಂಖ್ಯೆ 9449634100 ಇವರಿಗೆ ವಾರ್ಡ್ ಸಂ. 43, 51, 52, 49 ಗಳಿಗೆ ನಿಯೋಜಿಸಲಾಗಿದೆ.

ವಾರ್ಡ ಸಂಖ್ಯೆ 1, 3, 6, 7, 8, 16P, 17P, 18, 19, 20, 22, 23, 32 ಗಳನ್ನು ಜಲಮಂಡಳಿಯ ಸಹಾಯಕ ಇಂಜಿನಿಯರ್ ಕೆ.ಎಂ. ಜೋಶಿ ಅವರು (ಮೊಬೈಲ್ ಸಂಖ್ಯೆ ೯೪೮೦೬೮೯೫೧೮) ನಿರ್ವಹಿಸುತ್ತಿದ್ದಾರೆ.  ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಮಹಾನಗರ ಪಾಲಿಕೆಯಿಂದ ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜಿನಿಯರ್ ಸೈಯದ್ ಮಲೀಕ್ ಮೊಬೈಲ್ ಸಂಖ್ಯೆ 7019941495 ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ ೩, ೬, ೭, ೮ ಮತ್ತು ೩೫ರ ಜವಾಬ್ದಾರಿ ನೀಡಲಾಗಿದೆ.  ಅದೇ ರೀತಿ ಕಿರಿಯ ಇಂಜಿನಿಯರ್ ಪ್ರಭಾಕರ ಭರ್ಗೆ ಮೊಬೈಲ್ ಸಂಖ್ಯೆ 9740752816  ಇವರಿಗೆ ವಾರ್ಡ ಸಂಖ್ಯೆ 18, 19, 22, 23 ಮತ್ತು ೩೪,  ಕಿರಿಯ ಇಂಜಿನಿಯರ್ ಅಲ್ಲಾವುದ್ದೀನ ಮೊಬೈಲ್ ಸಂಖ್ಯೆ9108193486 ಇವರಿಗೆ ವಾರ್ಡ ಸಂಖ್ಯೆ 20, 21, 40, 41 ಮತ್ತು ೪೨ ಹಾಗೂ ಕಿರಿಯ ಇಂಜಿನಿಯರ್ ಖಾಜಾ ನಿಜಾಮುದ್ದೀನ ಮೊಬೈಲ್ ಸಂಖ್ಯೆ 8105327777 ಇವರಿಗೆ ವಾರ್ಡ ಸಂಖ್ಯೆ 22, 33, 36, 37 ಮತ್ತು ೩೯ ಗಳಿಗೆ ನಿಯೋಜಿಸಲಾಗಿದೆ.

ವಾರ್ಡ ಸಂಖ್ಯೆ  2, 4, 5, 9, 10, 12, 13, 14, 15, 16P, 27P, 28, 29P, 32P, 38P, 48P, 50, 53, 54 ಹಾಗೂ ೫೫ ಗಳಿಗೆ ಜಲಮಂಡಳಿಯ ಸಹಾಯಕ ಇಂಜಿನಿಯರ್ ಅಬ್ದುಲ್ ಬಾಸೀತ್ (ಮೊಬೈಲ್ ಸಂಖ್ಯೆ ೯೪೮೦೬೮೯೫೧೬) ನಿರ್ವಹಿಸುತ್ತಿದ್ದಾರೆ. ಈ ವಾರ್ಡುಗಳ ಮೇಲ್ವಿಚಾರಣೆಗಾಗಿ ಮಹಾನಗರ ಪಾಲಿಕೆಯ ನೋಡಲ್ ಅಧಿಕಾರಿಯಾಗಿ ಸಹಾಯಕ ಇಂಜಿನಿಯರ್  ಯುವರಾಜ ಮೊಬೈಲ್ ಸಂಖ್ಯೆ 8951875797ಇವರನ್ನು ನೇಮಿಸಿದ್ದು, ಇವರಿಗೆ ವಾರ್ಡ ಸಂಖ್ಯೆ 5,10,11,12,14,28ರ ಜವಾಬ್ದಾರಿ ನೀಡಲಾಗಿದೆ. ಅದೇ ರೀತಿ  ಕಿರಿಯ ಇಂಜಿನಿಯರ್  ರವಿಂದ್ರನಾಥ ಚವ್ಹಾಣ ಮೊಬೈಲ್ ಸಂಖ್ಯೆ 9448645213 ಇವರಿಗೆ ವಾರ್ಡ ಸಂ. 1, 15, 16, 26, 27, 29, ಕಿರಿಯ ಇಂಜಿನಿಯರ್ ಸುನೀಲ ಒಂಟಿ ಮೊಬೈಲ್ ಸಂಖ್ಯೆ 9449051111 ಇವರಿಗೆ ವಾರ್ಡ ಸಂಖ್ಯೆ 30, 32, 13, 04 ಮತ್ತು ೦೯) ಹಾಗೂ ಕಿರಿಯ ಇಂಜಿನಿಯರ್ ಜಹಾಂಗೀರ ಮೊಬೈಲ್ ಸಂಖ್ಯೆ 8762274441 ಇವರಿಗೆ ವಾರ್ಡ ಸಂಖ್ಯೆ 31, 50, 53, 54 ಮತ್ತು ೫೫) ಗಳಿಗೆ ನಿಯೋಜಿಸಲಾಗಿದೆ.

ಮಹಾನಗರ ಪಾಲಿಕೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹ್ಮದ್ ರಿಯಾಜ್ (ಮೊಬೈಲ್ ಸಂಖ್ಯೆ 8494856409) ಇವರು ಈ ಕಾರ್ಯದ ಮೇಲ್ವಿಚಾರಣೆ ಮಾಡಲಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ವಿ.ಪಾಟೀಲ್ ಮೊಬೈಲ್ ಸಂಖ್ಯೆ 9480813143 ಇವರು ಈ ಎಲ್ಲ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆ ಮಾಡಲಿದ್ದಾರೆ.

ಆಯಾ ವಾರ್ಡಿಗೆ ಸಂಬಂಧಪಟ್ಟಂತೆ ಸಾರ್ವಜನಿಕರು ದೂರವಾಣಿ ಮುಖಾಂತರ ಕುಡಿಯುವ ನೀರು ಪೂರೈಕೆ ಕುರಿತು ದೂರುಗಳು ಸಲ್ಲಿಸಿದ್ದಲ್ಲಿ ಅವುಗಳಿಗೆ ಮೇಲ್ಕಂಡ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಅಗತ್ಯವಾದ ಕುಡಿಯುವ ನೀರಿನ ವ್ಯವಸ್ಥೆ ಚಾಚು ತಪ್ಪದೆ ಮಾಡಬೇಕು. ನಂತರ ಇದರ ಅನುಸರಣಾ ವರದಿಯನ್ನು ಮೇಲ್ವಿಚಾರಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಪಾಲಿಕೆಯಿಂದ ಮಂಡಳಿಗೆ ನಿಯೋಜಿಸಿದ ಸಿಬ್ಭಂದಿಗಳನ್ನು ಜೂನ್ ೧೦ರ ನಂತರ ಹಿಂಪಡೆಯಲಾಗುತ್ತದೆ. ಕುಡಿಯುವ ನೀರು ಸರಬರಾಜು ಸಂಪೂರ್ಣ ಜವಾಬ್ದಾರಿ ಜಲಮಂಡಳಿಯದಾಗಿದೆ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420