“ಶರಣ ಚರಿತೆ”-ವಿಶೇಷ ಉಪನ್ಯಾಸ ಮಾಲೆ-2
ವಚನ ಚಳವಳಿಯ ನೇತಾರ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಆಗ ಸಾವಿರಾರು, ಲಕ್ಷಾಂತರ ಜನರು ಕಲ್ಯಾಣಕ್ಕೆ ಬಂದರು. ಬಸವಕಲ್ಯಾಣ ಊರಿನ ಜೊತೆಗೆ ಶರಣರದು ಅವಿನಾಭಾವ ಸಂಬಂಧ ಇತ್ತು. ಈ ಊರಿನ ಹತ್ತಿಪ್ಪತ್ತು ಕಿ.ಮೀ. ವ್ಯಾಪ್ತಿಯೊಳಗೆ ಬೆಟ್ಟಬಲಕುಂದ ಗುಡ್ಡ, ತ್ರಿಪುರಾಂತ ಕೆರೆ, ಬಂದವರ ಓಣಿ, ನಾರಾಯಣಪುರ, ಶಿವಪುರ, ಗಂಜಿಕೆರೆ, ಅನುಭವ ಮಂಟಪ, ಜೇಡರ ದಾಸಿಮಯ್ಯ, ಶಂಕರ ದಾಸಿಮಯ್ಯನ ಮಠ, ಅಂಬಿಗರ ಚೌಡಯ್ಯನ ಮಠ, ಗೋಸಾಯಿ ಓಣಿ ಮುಂತಾದೆಡೆ ಶರಣರ ನೆಲೆಗಳನ್ನು ಕಾಣಬಹುದು.
ಈ ಬಸವೇಶ್ವರ ದೇವಸ್ಥಾನದ ಮುಂದೆ ಪರುಷ ಕಟ್ಟೆ ಇದೆ. ಬಸವಣ್ಣನವರು ತಮ್ಮ ದಿನದ ಕೆಲ ಹೊತ್ತು ಇಲ್ಲಿಯೇ ಕಳೆಯುತ್ತಿದ್ದರಂತೆ. ಸಾರ್ವಜನಿಕರ ಕುಂದು ಕೊರೆತೆಗಳನ್ನು ಕೂಡ ಇಲ್ಲಿಯೇ ವಿಚಾರಿಸುತ್ತಿದ್ದರು. ಪುರಾಣದ ಕಥೆಗಳಲ್ಲಿ ಬರುವ ಪರುಷ ಬಟ್ಟಲು ಇದೀಗ ಅದೇ ಕಟ್ಟೆಯಲ್ಲಿಯೇ ಹಾಕಿ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಈಗಿನ ಪೀರ ಪಾಷಾ ಬಂಗಲೆಯಲ್ಲಿ ಈ ಹಿಂದೆ ಅನುಭವ ಮಂಟಪ ನಡೆಯುತ್ತಿತ್ತು ಎಂಬುದನ್ನು ಅನೇಕ ವಿದ್ವಾಂಸರು ಹೇಳಿದ್ದಾರೆ. ಈ ಸಮಾಚಾರದ ಜಾಡು ಹಿಡಿದು ಒಳ ನಡೆದರೆ ಇದರೊಳಗೆ ನಂದಿ ಮಂಟಪ ಇರುವುದು (ಈಗ ಮುಚ್ಚಲಾಗಿದೆ). ಹಾಳಾಗಿರುವ ಶಾಸನದ ಕಲ್ಲು ಇರುವುದನ್ನು ಗುರುತಿಸಬಹುದು. ಬಸವಕಲ್ಯಾಣದಲ್ಲಿ ಇಷ್ಟೊಂದು ವಿಶಾಲವಾದ ಸ್ಥಳ ಬೇರೆ ಎಲ್ಲೂ ಇಲ್ಲ. ಹಿಂದು-ಮುಸ್ಲಿಂರ ಭಾವೈಕ್ಯಕ್ಕೆ ಧಕ್ಕೆ ಬರುತ್ತದೆ ಎಂದು ಯಾರೂ ಅದರ ತಂಟೆಗೆ ಹೋಗುತ್ತಿಲ್ಲ.
ಬಸವಕಲ್ಯಾಣದ ಗೋಸಾಯಿ ಗಲ್ಲಿಗಳಲ್ಲಿ ದೊಡ್ಡ ದೊಡ್ಡ ಆಕಾರದ ಮನೆಗಳಿವೆ. ಅಲ್ಲೊಂದು ಮಹಾಂತ ಮಠ ಇದೆ. ಎಲ್ಲೆಲ್ಲಿ ಶರಣರ ಸ್ಮಾರಕಗಳಿವೆಯೋ ಅಲ್ಲೆಲ್ಲ ಗೋಸಾಯಿ ಮನೆತನದವರಿದ್ದರು. ವಚನ ಚಳವಳಿಯಲ್ಲಿ ಗೋಸಾಯಿಗಳು ಶರಣರ ಅನುಯಾಯಿಗಳಾಗಿದ್ದರು. ವಚನ ಚಳವಳಿಯಲ್ಲಿ ಗೋಸಾಯಿಯವರ ಪಾತ್ರ ಬಹಳ ಪ್ರಮುಖವಾಗಿದೆ. ಬಸವಣ್ಣನವರ ವಚನಗಳಲ್ಲಿ ಬರುವ ಮಹಾದೇವನ ಭಕ್ತರು ಈ ಗೋಸಾಯಿಗಳು. ಈ ಮಹಾದೇವನ ಗುಡಿಗಳೆಲ್ಲ ಗೋಸಾಯಿಗಳ ಸ್ಮಶಾನಗಳಲ್ಲಿವೆ ಎಂಬುದನ್ನು ನಾವು ಗಮನಿಸಬೇಕು. ಚೆನ್ನಬಸವಣ್ಣನವರು ಹೇಳುವಂತೆ ಆಗ ಮನೆಗಳೆಲ್ಲವೂ ಮಠಗಳಾಗಿದ್ದವು. ಚಿಟಗುಪ್ಪದಲ್ಲಿ 360 ಗೋಸಾಯಿ ಮನೆಗಳಿದ್ದವು ಎಂದು ಹೇಳಲಾಗುತ್ತಿದೆ. ಅವರು ಪ್ರಸಾದ ವಿತರಿಸುವ ಕಾರ್ಯ ನೋಡಿದರೆ ಇವರ ಮೇಲೆ ಬಸವಣ್ಣನವರ ದಾಸೋಹ ಸಿದ್ಧಾಂತ ಬಹಳ ಪ್ರಭಾವ ಬೀರಿರುವುದನ್ನು ಗುರುತಿಸಬಹುದಾಗಿದೆ.
ಇವರು ಶಿವನ ಭಕ್ತರು. ಆದರೆ ದುರಂತವೇನೆಂದರೆ ಈ ಹಿಂದೆ ಯಾರೋ ದಿಲ್ಲಿಯಿಂದ ಒಬ್ಬ ಸಾಧು ಬಂದು ಇವರೆಲ್ಲರನ್ನು ದತ್ತ ಸಂಪ್ರದಾಯಕ್ಕೆ ಸೆಳೆದಿರುವುದನ್ನು ಕ್ಷೇತ್ರ ಕಾರ್ಯದಿಂದ ಗುರುತಿಸಬಹುದಾಗಿದೆ. ಹಳ್ಳಿಖೇಡದ ಕಿನ್ನರಿ ಬೊಮ್ಮಯ್ಯನ ಸ್ಮಾರಕದಲ್ಲೇ ಗೋಸಾಯಿ ಮಠ ಕೂಡ ಇದೆ. ಹೀಗಾಗಿ ಶರಣರ ಸ್ಮಾರಕಗಳು ಬರೀ ಪೂಜೆ-ಪುನಸ್ಕಾರ ಮಾಡುವ ಸ್ಥಳಗಳಲ್ಲ. ಚರಿತ್ರೆಯನ್ನು ವಿವರಿಸುವ ತಾಣಗಳು. ಈ ನೆಲೆಗಳು ಹೇಳುವ ಐತಿಹಾಸಿಕ ಸತ್ಯವನ್ನು ನಾವು ಗಮನಿಸಬೇಕು.
ಸ್ಥಳ: ಅನುಭವ ಮಂಟಪ, ಜಯನಗರ, ಕಲಬುರಗಿ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…
ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…
ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…
ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…
ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…
ಕಲಬುರಗಿ: ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸಚಿವರುಗಳು ಮತ್ತು ಸ್ಥಳಿಯ ಶಾಸಕರುಗಳು…