ಆಳಂದ: ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಹಾನಿಯಾಗಿರುವ ಪ್ರದೇಶಗಳಿಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
ತಾಲೂಕಿನಲ್ಲಿ ನಿರಂತರವಾಗಿ ಭೀಕರ ಮಳೆ ಸುರಿಯುತ್ತಿದೆ ಇದರಿಂದ ಅನೇಕ ಕಡೆ ರಸ್ತೆ, ಸೇತುವೆಗಳು ಹಾಳಾಗಿವೆ ಜೊತೆಗೆ ಬೆಳೆಗಳು ಹಾಳಾಗಿವೆ ಹಾಗೂ ಅನೇಕ ಮನೆಗಳಲ್ಲಿ ನೀರು ನುಗ್ಗಿ ಮನೆಗಳು ಬಿಳುವ ಸ್ಥಿತಿಯಲ್ಲಿವೆ ಅಧಿಕಾರಿಗಳು ಶೀಘ್ರ ಪರಿಶೀಲಿಸಿ ಜನಗಳಿಗೆ ಅನೂಕೂಲ ಮಾಡಿಕೊಡಬೇಕೆಂದು ಸೂಚಿಸಿದರು.
ತಾಲೂಕಿನ ಅಧಿಕಾರಿಗಳೊಂದಿಗೆ ನಿಯೋಗ ತೆಗೆದುಕೊಂಡು ತಾಲೂಕಿನ ಜಿಡಗಾ, ದರ್ಗಾಶಿರೂರ, ಮೋಘಾ(ಕೆ), ಅಲ್ಲಾಪುರ, ಕೆರೂರ, ಮಾದನ ಹಿಪ್ಪರ್ಗಾ, ಝಳಕಿ(ಬಿ), ಹಡಲಗಿ, ಚಲಗೇರಿ, ನಿಂಬಾಳ ಸೇರಿದಂತೆ ಅನೇಕ ಕಡೆ ಸಾಕ್ಷಾತ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.
ಮಳೆಯಿಂದ ಕೆರೂರ ಗ್ರಾಮದ ಸಂಪರ್ಕ ರಸ್ತೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ರಸ್ತೆಗೆ ನಿರ್ಮಿಸಿದ ಸೇತುವೆಗಳು ಮಳೆಗೆ ಕೊಚ್ಚಿ ಹೋಗಿವೆ ಜನರ ಸಂಚಾರಕ್ಕಾಗಿ ಶೀಘ್ರದಲ್ಲಿಯೇ ಸೇತುವೆ ದುರಸ್ತಿ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಜಿಡಗಾ ಗ್ರಾಮದ ಒಂದು ಸೇತುವೆ, ಮೋಘಾ(ಕೆ) ರಸ್ತೆ, ಕೆರೂರ ಸೇತುವೆ, ಮಾದನಹಿಪ್ಪರ್ಗಾ ಗ್ರಾಮದ ಸಂಪರ್ಕ ಸೇತುವೆ, ಚಲಗೇರಿ ಗ್ರಾಮ ಸಂಪರ್ಕಿಸುವ ಖಾಸಾ ಹಳ್ಳದ ಸೇತುವೆ, ನಿಂಬಾಳ ಗ್ರಾಮದ ಕೆರೆ ಹಾಗೂ ನಿಂಬಾಳದ ರೈತರೊಬ್ಬರು ಹೊಲದಲ್ಲಿ ಬೆಳೆದಿದ್ದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಹಾಳಾಗಿದ್ದು ಅದರ ಕುರಿತು ಅಧಿಕಾರಿಗಳು ಶೀಘ್ರ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ನಿಯೋಗದಲ್ಲಿ ತಹಸೀಲ್ದಾರ ದಯಾನಂದ ಪಾಟೀಲ, ಲೋಕೋಪಯೋಗಿ ಇಲಾಖೆ ಈರಣ್ಣ ಕುಣಗೇರಿ, ಪಂಚಾಯತ ರಾಜ ಇಲಾಖೆಯ ಮಲ್ಲಿಕಾರ್ಜುನ ಕಾರಭಾರಿ, ತೋಟಗಾರಿಕಾ ಇಲಾಖೆಯ ಸುರೇಂದ್ರನಾಥ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸ್ವಾಮಿ, ಸಣ್ಣ ನೀರಾವರಿ ಇಲಾಖೆಯ ಜಾಧವ, ಪೊಲೀಸ್ ಇಲಾಖೆಯ ಇಂದುಮತಿ, ತಿರುಮಲೇಶ, ಜೆಸ್ಕಾಂ ಅಧಿಕಾರಿಗಳು ಇದ್ದರು.
ಸಮೀಕ್ಷೆಯ ಸಂದರ್ಭದಲ್ಲಿ ಮಾದನ ಹಿಪ್ಪರ್ಗಿಯ ಅಭಿನವ ಶಿವಲಿಂಗ ಸ್ವಾಮೀಜಿ, ಜಿ.ಪಂ ಸದಸ್ಯ ಗುರುಶಾಂತ ಪಾಟೀಲ ನಿಂಬಾಳ, ತಾ.ಪಂ ಸದಸ್ಯರಾದ ಸಾತಪ್ಪ ಕೋಳಶೆಟ್ಟಿ, ಬಸವರಾಜ ಸಾಣಕ, ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೋರಳ್ಳಿ, ಪ್ರ. ಕಾರ್ಯದರ್ಶಿಗಳಾದ ಶರಣು ಕುಮಸಿ, ಪ್ರಕಾಶ ಮಾನೆ, ಮುಖಂಡರಾದ ಲಿಂಗರಾಜ ಪಾಟೀಲ ಝಳಕಿ(ಬಿ), ಸಿದ್ದಾರಾಮ ತೋಳನೂರ, ಲಿಂಗರಾಜ ಉಡಗಿ, ಬಸವರಾಜ ಶಾಸ್ತ್ರಿ, ಕಾಶಿನಾಥ ಪಾಟೀಲ, ರಮೇಶ ಮೂಲಗೆ, ರಮೇಶ ಪಾಟೀಲ ಚಲಗೇರಾ, ಕಲ್ಯಾಣಿ ಭಾಗೆಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…