ಸುರಪುರ: ದೇಶದಲ್ಲಿ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿರುವ ಸಂದರ್ಭದಲ್ಲಿ ತಾಲೂಕಿನಾದ್ಯಂತ ಮುಸ್ಲೀಂ ಜನತೆ ಸರಳವಾಗಿ ಬಕ್ರೀದ್ ಹಬ್ಬ ಆಚರಿಸಿದರು.ಕೋವಿಡ್-೧೯ ರ ನಿಯಮದಂತೆ ನಗರದ ಅನೇಕ ಮಜೀದ್ಗಳಲ್ಲಿ ಶನಿವಾರ ಬೆಳಿಗ್ಗೆ ೭ ಗಂಟೆ ಸುಮಾರಿಗೆ ಸೇರಿದ ಮುಸ್ಲೀಂ ಬಾಂಧವರು ಸರಳವಾಗಿ ಪ್ರಾರ್ಥನೆ ಸಲ್ಲಿಸಿದರು.
ಪ್ರತಿ ಮಜೀದ್ಗೆ ಆಗಮಿಸುವವರಿಗೆ ಮೊದಲು ಫೀವರ್ ಚೆಕ್ ನಡೆಸಿ ನಂತರ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರದಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸಿದರು.ಪ್ರತಿ ಮಜೀದ್ನಲ್ಲಿ ಸುಮಾರು ಐವತ್ತು ಜನರು ಸೇರಿದ್ದು ಕಂಡು ಬಂತು.ಎಲ್ಲರಿಗೂ ಮೌಲ್ವಿಯವರು ಕುರಾನ್ ಭೋಧಿಸಿ ನಂತರ ಕೊರೊನಾ ಕುರಿತಾದ ಜಾಗೃತಿ ಹಾಗು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಕುರಿತು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾವೂದ್ ಪಠಾಣ್,ಪ್ರತಿ ವರ್ಷ ಬಕ್ರೀದ್ ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು ಆದರೆ ಈವರ್ಷ ಇಡೀ ದೇಶಕ್ಕೆ ಕೊರೊನಾ ವೈರಸ್ ತನ್ನ ಹಾವಳಿ ಮುಂದುವರೆಸಿರುವುದರಿಂದ ಸರಕಾರ ನಿಯಮ ರೂಪಿಸಿದಂತೆ ಮಜೀದ್ಗಳಲ್ಲಿಯೆ ಸರಳವಾಗಿ ಪ್ರಾರ್ಥನೆ ಮೂಲಕ ಹಬ್ಬ ಆಚರಿಸುತ್ತಿದ್ದೆವೆ.
ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ದೇಶದಲ್ಲಿ ಅಟ್ಟಹಾಸ ಮುಂದುವರೆಸಿರುವ ಕೊರೊನಾ ಹಾವಳಿ ನಿರ್ಮೂಲನೆಯಾಗಲಿ ಹಾಗು ದೇಶದ ಜನತೆ ಸುಖ ಸಂತೋಷದಿಂದ ಬದುಕುವಂತಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಜಲಾಲ್ ಮೊಹಲ್ಲಾದಲ್ಲಿನ ಮದೀನಾ ಮಸ್ಜೀದ್ನಲ್ಲಿ ಮೊಹ್ಮದ್ ಆಫೀಜ್ ಮೆಹಬೂಬ್ ಪ್ರಾರ್ಥನೆ ನಡೆಸಿಕೊಟ್ಟರು,ಸಯ್ಯದ್ ಬಂದೆ ಅಲಿ,ಅಬ್ದುಲ್ ಮತೀನ್ ಸಾಬ್,ಶಕೀಲ್ ಸೌದಾಗರ್,ಅಬ್ದುಲ್ ಖಾದರ್ ಸೌದಾಗರ್,ಅಪ್ರೋಜ್ ಸೌದಾಗರ್,ಲಾಲೂ ಪಠಾಣ್,ಅಬ್ದುಲ್ ವಾಜೀದ್,ಅಬ್ದುಲ್ ಅಜೀಜ್ ಬೇಕ್ರಿ,ಮೊಹ್ಮದ್ ಸಾದಿಕ್ ಸೌದಾಗರ್,ಮಸೂದ್ ಸೌದಾಗರ್,ಮೆಹಬೂಬ ಮುಸ್ತಾಕ್ ಸಾಬ್,ಮಹ್ಮದ್ ಜಿಲಾನಿ ಸಾಬ್ ಹಾಗು ಮೊಜಂಪುರ್ ಮಜೀದ್ನಲ್ಲಿ ನಡೆದ ಪ್ರಾರ್ಥನೆಯಲ್ಲಿ ಖಾಜಾ ಸಮೀಉರ್ಹಮಾನ್ ಅನ್ಸಾರಿ,ಎಸ್ಎಮ್ ಬುಖಾರಿ,ಮಹ್ಮದ್ ಸಲೀಂ ಸಾಬ್,ಅಬೀದ್ ಅಲಿ ಡಿಎಮ್ ಸಾಬ್,ಅಬೀದ್ ಹುಸೇನ್ ಪಗಡಿ,ಅಮ್ಜಾದ್ ಖಾನ್,ಮಹ್ಮದ್ ಇಕ್ಬಾಲ್ ಸಾಬ್ ಸೇರಿದಂತೆ ಅನೇಕರಿದ್ದರು.
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…