ಕಾಯಕದ ಮೂಲಕ ಲೋಕಕ್ಕೆ ಗುರುತಿಸಿ ಕೊಂಡ ಮಹಾ ಶರಣ ನುಲಿಯ ಚಂದಯ್ಯ

ಸುರಪುರ: 12ನೇ ಶತಮಾನದ ಬಸವಾದಿ ಶರಣರ ಸಮಕಾಲಿನ ಶರಣರಲ್ಲಿ ನುಲಿಯ ಚಂದಯ್ಯನವರು ಒಬ್ಬರು,ಅವರು ತಮ್ಮ ಕಾಯಕದ ಮೂಲಕವೇ ಲೋಕಕ್ಕೆ ಗುರುತಿಸಿ ಕೊಂಡ ಮಹಾ ಶರಣರಾಗಿದ್ದಾರೆ ಎಂದು ಅಖಿಲ ಕರ್ನಾಟಕ ಕುಳುವ ಮಹಾ ಸಂಘದ ತಾಲೂಕು ಅಧ್ಯಕ್ಷ ಖಂಡಪ್ಪ ಭಜಂತ್ರಿ ಮಾತನಾಡಿದರು.

ನಗರದ ಭಜಂತ್ರಿ ಓಣಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘದಿಂದ ಹಮ್ಮಿಕೊಂಡಿದ್ದ ನುಲಿಯ ಚಂದಯ್ಯನವರ ಜಯಂತಿ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ,ನುಲಿಯ ಚಂದಯ್ಯ ಶರಣರು ಒಮ್ಮೆ ಹೊಲದಿಂದ ಮೇವನ್ನು ಹೊತ್ತು ತರುವಾಗಿ ಕೊರಳಲ್ಲಿನ ಇಷ್ಟಲಿಂಗ ಹರಿದು ಕೆಳಗೆ ಬೀಳಲಾಗಿ,ಆಗ ಲಿಂಗವನ್ನು ಎತ್ತಿಕೊಳ್ಳದೆ ತಮ್ಮ ತಲೆಯ ಮೇಲಿನ ಮೇವಿನ ಹೊರೆಯನ್ನೆ ಹೊತ್ತು ಕಾಯಕಕ್ಕೆ ಮಹತ್ವ ನೀಡಿದಾಗ ನೆಲಕ್ಕೆ ಬಿದ್ದ ಲಿಂಗ ತಾನೇ ಬಂದು ಅವರ ಅಂಗದ ಮೇಲೆರಿದ ಪವಾಡ ನಡೆದ ಬಗ್ಗೆ ಇಂದಿಗೂ ಶರಣರ ಸಂದೇಶದಲ್ಲಿದೆ.ಇದರಿಂದ ನುಲಿಯ ಚಂದಯ್ಯ ಶರಣರು ಕಾಯಕದ ಮಹತ್ವವನ್ನು ಲೋಕಕ್ಕೆ ತೋರಿಸಿದವರು.ಅಂತಹ ಮಹಾನ್ ಶರಣರ ಜಯಂತಿಯನ್ನು ಎಲ್ಲರು ಆಚರಿಸಬೇಕು.ಅಂದಾಗ ಬಸವಾದಿ ಶರಣರು ಎಲ್ಲರಿಗೂ ಅರ್ಥವಾಗಲು ಸಾಧ್ಯ ಎಂದರು.

ಅವರು ಕೂಡ ಲಕ್ಷಾಂತರ ಶರಣರೊಂದಿಗೆ ಅನುಭವ ಮಂಟಪದಲ್ಲಿ ಸೇರಿ ವಚನ ರಚನೆಯ ಜೊತೆಗೆ ತಮ್ಮದೆ ಆದ ಕಾಯಕವನ್ನು ಮಾಡುತ್ತಾ ಅನುಭಾವವನ್ನು ಅರಿತವರು.ಅಂತಹ ಮಹಾನ್ ಶರಣ ನಮ್ಮವರು ಎಂಬುದೆ ಹೆಮ್ಮೆಯ ಸಂಗತಿಯಾಗಿದೆ.ನಿತ್ಯ ನಾವೆಲ್ಲರು ನುಲಿಯ ಚಂದಯ್ಯನವರನ್ನು ಸ್ಮರಿಸೋಣ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡ ಮಾನಪ್ಪ ಮಾಸ್ತರ ಭಜಂತ್ರಿ,ಪರಮಣ್ಣ ಭಜಂತ್ರಿ,ಯಲ್ಲಪ್ಪ ಭಜಂತ್ರಿ ಲಕ್ಷ್ಮೀಪುರ,ಬಸವರಾಜ ಭಜಂತ್ರಿ ಕುಂಬಾರಪೇಟೆ,ವೆಂಕಟೇಶ ಭಜಂತ್ರಿ,ತಿಪ್ಪಣ್ಣ ಭಜಂತ್ರಿ,ರವಿ ಭಜಂತ್ರಿ ಹಾಲಗೇರಾ,ಯಮನಪ್ಪ ಭಜಂತ್ರಿ ಹೆಗ್ಗನದೊಡ್ಡಿ,ಕೃಷ್ಣಾ ಭಜಂತ್ರಿ,ನಿಂಗಪ್ಪ ಭಜಂತ್ರಿ,ಚಂದ್ರಪ್ಪ ಭಜಂತ್ರಿ ಸೇರಿದಂತೆ ಅನೇಕರಿದ್ದರು.

emedialine

Recent Posts

ಸ್ಲಂ ಜನರಿಗೆ ಹಕ್ಕು ಪತ್ರ ನೀಡುವಂತೆ ರೇಣುಕಾ ಸರಡಗಿ ಸಿಎಂಗೆ ಮನವಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ. ಯಾದಗಿರಿ. ಬೀದರ್. ಕೊಪ್ಪಳ. ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸ್ಲಂ ನಿವಾಸಿಗಳ ಕುಟುಂಬ 1ಲಕ್ಷ…

2 hours ago

ಶರಣಬಸವ ವಿಶ್ವವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು, ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ವಿವಿಯ ಧ್ವಜಸ್ಥಂಭದಲ್ಲಿ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ ಧ್ವಜಾರೋಹಣ…

2 hours ago

ವಕ್ಫ್ ಬೋರ್ಡ್ ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್ ಖಾನ್

ಕಲಬುರಗಿ : ಐತಿಹಾಸಿಕ ವಿಶೇಷ ಸಂಪುಟ ಸಭೆ ಯಲ್ಲಿ ಕರ್ನಾಟಕ ವಖ್ಫ್ ಬೋರ್ಡ್ ವತಿಯಿಂದ ರಾಜ್ಯದ ಹದಿನೈದು ಜಿಲ್ಲೆಗಳಲ್ಲಿ ಮಹಿಳಾ…

4 hours ago

ಸೆ.22 ರಂದು ತುಂಗಭದ್ರೆಗೆ ಬಾಗಿನ ಅರ್ಪಣೆ: ಡಿ.ಕೆ ಶಿವಕುಮಾರ್

ಕಲಬುರಗಿ: ಬರುವ ಸೆಪ್ಟೆಂಬರ್ 22 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಲಾಗುವುದು…

4 hours ago

ಅಮೇರಿಕಾದಲ್ಲಿ ಯಾರನ್ನೂ ಭೇಟಿಯಾಗಿಲ್ಲ: ಡಿಕೆ ಶಿವುಕುಮಾರ್

ಕಲಬುರಗಿ: ಅಮೇರಿಕಾದ ಪ್ರವಾಸದಲ್ಲಿ ತಾವು ಯಾರನ್ನೂ ಭೇಟಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು. ಸಚಿವ ಸಂಪುಟದ ಸಭೆಯಲ್ಲಿ ಪಾಲ್ಗೊಳ್ಳಲು…

4 hours ago

ನಾಗಮಂಗಲ ಘಟನೆ: ತನಿಖೆ ನಂತರ ಇನ್ನಷ್ಟು ಕ್ರಮ: ಗೃಹ ಸಚಿವ ಪರಮೇಶ್ವರ

ಕಲಬುರಗಿ: ನಾಗಮಂಗಲದ ಅಹಿತರ ಘಟನೆ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ನಂತರ ಮುಂದಿನ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420