ವಾಡಿ ಜಲ ಶುದ್ಧೀಕರಣ ಘಟಕದಿಂದ ಕಲುಷಿತ ನೀರು!

ವಾಡಿ: ತುಕ್ಕು ಹಿಡಿದ ಮೋಟಾರು ಯಂತ್ರಗಳು. ವರ್ಷದ ಹಿಂದೆ ನಿಷ್ಕ್ರೀಯಗೊಂಡ ಮೂರು ಪಿಎಸಿ ಪೌಡರ್ ಮಿಶ್ರಣ ಘಟಕ, ನಾಲ್ಕು ವರ್ಷಗಳ ಹಿಂದೆಯೇ ಕೆಟ್ಟು ಕೆರಹಿಡಿದುಹೋದ ಕ್ಲೋರಿನೇಷನ್ ಯಂತ್ರಗಳು. ಆಲಂ ಮತ್ತು ಬ್ಲೀಚಿಂಗ್ ಪೌಡರ್ ನೇರವಾಗಿ ನೀರಿಗೆ ಎಸೆದು ಸಂಪ್ರದಾಯ ಪೂರೈಸುವ ಸಿಬ್ಬಂದಿಗಳು. ಆಲಂ ಕೋಣೆಯಲ್ಲಿ ನಾಯಿಗಳ ಮಲ ಮೂತ್ರ. ಬಳಕೆಯಾಗದೆ ಐದು ವರ್ಷಗಳಿಂದ ಬೀದಿಗೆ ಬಿದ್ದ ಎರಡು ಕ್ಲೋರಿನೇಷನ್ ಸೆಲ್‌ಗಳು. ರಿಪೇರಿ ಭಾಗ್ಯ ಕಳೆದುಕೊಂಡ ನೀರು ಸರಬರಾಜು ಮೋಟಾರ್ ಯಂತ್ರ. ಜಲ ಶುದ್ಧೀಕರಣ ಘಟಕದಲ್ಲಿ ಸಿಗಲಿಲ್ಲ ಕುಡಿಯಲು ಶುದ್ಧ ನೀರು!.

ಹೀಗೆ ಸಂಪೂರ್ಣ ನಿಷ್ಕ್ರೀಯಗೊಂಡು ನಿಂತಿದ್ದ ವಾಡಿ ನಗರದ ಪುರಸಭೆಗೆ ಸೇರಿದ ಕುಂದನೂರು ಭೀಮಾನದಿ ದಡದಲ್ಲಿರುವ ಜಲ ಶುದ್ಧೀಕರಣ ಘಟಕ್ಕಕ್ಕೆ ರವಿವಾರ ದಿಢೀರ್ ಭೇಟಿ ನೀಡಿದ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ನೇತೃತ್ವದ ನಾಯಕರ ತಂಡ, ಅಧಿಕಾರಿಗಳ ದೀರ್ಘ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿತು. ಶುದ್ಧ ನೀರಿನ ಹೆಸರಿನಲ್ಲಿ ಸಾರ್ವಜನಿಕರ ಹಣ ಹೇಗೆ ಲೂಟಿಯಾಗುತ್ತಿದೆ ಎಂಬುದನ್ನು ಕಣ್ಣಾರೆ ಕಂಡು ದಂಗಾದರು. ಪ್ರತಿ ವರ್ಷ ಜಲ ಶುದ್ಧೀಕರಣ ಘಟಕಕ್ಕೆ ರೂ.೭೦ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಲಾಗುತ್ತಿದ್ದರೂ ಜನತೆಗೆ ಕಲುಷಿತ ನೀರನ್ನೇ ಪೂರೈಕೆ ಮಾಡುತ್ತಿರುವ ಪುರಸಭೆ ಅಧಿಕಾರಿಗಳ ಕ್ರಮದ ವಿರುದ್ಧ ಸಿಡಿಮಿಡಿಗೊಂಡರು.

ಕಲುಷಿತ ಜಲ ಶುದ್ಧೀಕರಣಕ್ಕೆ ಬೇಕಾದ ಎಲ್ಲಾ ಯಂತ್ರೋಪಕರಣಗಳು ರಿಪೇರಿ ಮಾಡಿಸಲಾಗಷ್ಟು ಹಾಳಾಗಿವೆ. ಯಂತ್ರದ ಮೂಲಕ ನೀರಿಗೆ ಮಿಶ್ರಣ ಮಾಡಬೇಕಾದ ಆಲಂ ಅನ್ನು ಅವೈಜ್ಞಾನಿಕವಾಗಿ ನೀರಿಗೆ ಹಾಕಲಾಗುತ್ತಿದೆ. ಮೂರು ಪದರಿನ ಮರಳಿನಲ್ಲಿ ನೀರು ಸಾಗಿ ಬರಬೇಕಾದ ಘಟಕದ ರೀತಿ ಸರಿಯಾಗಿಲ್ಲ. ನದಿಯಿಂದ ಘಟಕದಲ್ಲಿ ಸಂಗ್ರಹಗೊಳ್ಳುವ ನೀರನ್ನೇ ನೇರವಾಗಿ ಬಡಾವಣೆಗಳಿಗೆ ತಲುಪಿಸಲಾಗುತ್ತಿದೆ. ಜನರು ಮಾತ್ರ ಅಶುದ್ಧ ನೀರನ್ನೇ ಕುಡಿದು ನಾನಾ ರೀತಿಯ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಘಟಕದ ದುಸ್ಥಿತಿ ನೋಡಿದರೆ ಜಲ ಶುದ್ಧೀಕರಣದ ಹೆಸರಿನಲ್ಲಿ ಪ್ರತಿ ವರ್ಷ ಕೋಟಿಗಟ್ಟಲೇ ಹಣ ದುರ್ಬಳಕೆಯಾಗುತ್ತಿದೆ. ಈ ಕುರಿತು ತನಿಖೆಯಾಗಬೇಕು. ನಗರದ ವಿವಿಧ ಬಡಾವಣೆಗಳಲ್ಲಿರುವ ನೀರಿನ ಟ್ಯಾಂಕ್‌ಗಳ ಸ್ವಚ್ಚತೆ ಮರೆತಿರುವ ಅಧಿಕಾರಿಗಳು, ಜನರ ಹೊಟ್ಟೆಗೆ ರಾಡಿ ನೀರು ಹಾಕುತ್ತಿದ್ದಾರೆ. ಕೂಡಲೇ ವಾಡಿ ಜಲ ಶುದ್ಧೀಕರಣ ಘಟಕಕ್ಕೆ ನೂತನ ಯಂತ್ರೋಪಕರಣ ಅಳವಡಿಕೆಯಾಗಬೇಕು.

ವಾರದಲ್ಲಿ ವಾಡಿ ಜನತೆಗೆ ಶುದ್ಧ ನೀರು ಪೂರೈಕೆಯಾಗದಿದ್ದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಎಚ್ಚರಿಕೆ ನೀಡಿದರು. ಪಕ್ಷದ ಸದಸ್ಯರಾದ ವೆಂಕಟೇಶ ದೇವದುರ್ಗಾ, ಮಲ್ಲಿನಾಥ ಹುಂಡೇಕಲ್, ಅರುಣಕುಮಾರ ಹಿರೇಬಾನರ್ ಈ ಸಂದರ್ಭದಲ್ಲಿ ಇದ್ದರು.

emedialine

Recent Posts

ಸಮಾಜದ ಅಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಕೊಡುಗೆ ಅಪಾರ

ಸುರಪುರ: ನಾಡಿನ ಅಭಿವೃದ್ಧಿಗಾಗಿ ಹಿಂದಿನ ಕಾಲದಿಂದಲೂ ಸಂಘ ಸಂಸ್ಥಗಳು ಸಮಾಜಮುಖಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಬಂದಿವೆ ಸಮಾಜದ ಅಭಿವೃದ್ಧಿಗೆ ಸಂಘ…

13 hours ago

ದಲಿತ ಸಂಘರ್ಷ ಸಮಿತಿ ಮೂಲಕ ನೊಂದವರಿಗೆ ನ್ಯಾಯ ಕೊಡಿಸೋಣ

ಸುರಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಗೆ ಈಗ 50 ವರ್ಷಗಳಾಗಿದ್ದು ನಮ್ಮ ನಾಯಕರಾದ ಮಾವಳ್ಳಿ ಶಂಕರ ಅವರಿಗೆ ನಾವೆಲ್ಲರು…

13 hours ago

ಬಿಜೆಪಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್‌ ಧರ್ಮಸಿಂಗ್‌ ಟಾಂಗ್‌

ಆರೋಪ ಇರೋರೆಲ್ಲಾ ರಾಜೀನಾಮೆ ಕೊಟ್ರೆ ಕೇಂದ್ರದ ಅರ್ಧ ಕ್ಯಾಬಿನೆಟ್‌ ಖಾಲಿ ಆಗ್ತದೆ ಎಂದು ಲೇವಡಿ ಹಿಂದೆ ಗೋದ್ರಾ ಪ್ರಕರಣದಲ್ಲಿ ಎಫ್‌ಐಆರ್‌…

13 hours ago

ಲಲಿತಾ ಜಮಾದಾರ್‌ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಕಲಬುರಗಿ: ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೊಡ ಮಾಡುವ ಅತ್ಯುತ್ತುಮ ಶಿಕ್ಷಕಿ ವಾರ್ಷಿಕ ಪ್ರಶಸ್ತಿಗೆ ದೇವಾಂಗ ಶಿಕ್ಷಣ…

14 hours ago

ಪೌರಕಾರ್ಮಿಕರ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಪಾಲಿಕೆ ನೌಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡ ಭಾರತ ಕಮ್ಯುನಿಷ್ಟ ಪಕ್ಷ…

14 hours ago

ನಿರ್ಗತಿಕರಿಗೆ ಬಟ್ಟೆ, ಆಟದ ಸಾಮಾನು ವಿತರಣೆ

ಕಲಬುರಗಿ: ಇನ್ನರ್‍ವ್ಹಿಲ್ ಕ್ಲಬ್ ಆಫ್ ಗುಲಬರ್ಗಾ ಸನ್‍ಸಿಟಿ ವತಿಯಿಂದ ನಗರದ ರಾಮತೀರ್ಥ ಮಂದಿರ ಹತ್ತಿರ ನಿರ್ಗತಿಕ ಹಾಗೂ ಕಡುಬಡುವ ಜನರಿಗೆ…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420