ಸುರಪುರ: ಪಾದಯಾತ್ರೆಯಿಂದ ಮನುಷ್ಯನ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ದೊರೆಯಲಿದೆ ಅಲ್ಲದೆ ದೇವರ ಕೃಪೆಗೆ ಪಾತ್ರವಾಗಲು ಪಾದಯಾತ್ರೆಯಿಂದ ದೇವರ ದರುಶನಕ್ಕೆ ತೆರಳುವುದು ಹಿಂದು ಸಂಪ್ರದಾಯದಲ್ಲಿ ಮುಖ್ಯವಾದುದಾಗಿದೆ ಎಂದು ಲಕ್ಷ್ಮೀಪುರ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಲಕ್ಷ್ಮೀಪುರ ಗ್ರಾಮದ ಭಕ್ತರು ಸುಕ್ಷೇತ್ರ ಅಬ್ಬೆತುಮಕೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ನಮ್ಮ ಕ್ಷ್ಮೀಪುರ ಗ್ರಾಮಸ್ಥರು ಅಬ್ಬೆತುಮಕೂರಿನ ವಿಶ್ವರಾಧ್ಯರ ಭಕ್ತರಾಗಿದ್ದು ಕಳೆದ ೨೨ ವರ್ಷಗಳಿಂದ ಪ್ರತಿವರ್ಷದ ಶ್ರಾವಣದಲ್ಲಿ ಪಾದಯಾತ್ರೆ ಮಾಡುತ್ತಾರೆ.ಈಗ ೨೩ನೇ ವರ್ಷದ ಪಾದಯಾತ್ರೆ ಆರಂಭಿಸಿ ನಾಡಿಗೆ ಮಳೆ ಬೆಳೆ ಚೆನ್ನಾಗಿ ಬರಲೆಂದು ವಿಶ್ವರಾಧ್ಯರಲ್ಲಿ ಪ್ರಾರ್ಥಿಸಲು ತೆರಳುತ್ತಿರುವುದಾಗಿ ತಿಳಿಸಿದರು.
ಪಾದಯಾತ್ರೆಯ ನೇತೃತ್ವ ವಹಿಸಿದ್ದ ಆನಂದ ವಿಶ್ವಕರ್ಮ ಮಾತನಾಡಿ,ಇಂದು ಆರಂಭಗೊಳ್ಳುವ ಪಾದಯಾತ್ರೆ ಇಂದು ರಾತ್ರಿ ಯಾದಗಿರಿ ಬಳಿಯ ಖಾನಾಪುರದಲ್ಲಿ ವಸತಿ ಮಾಡಿ ನಾಳೆ ಮದ್ಹ್ಯಾನದ ವೇಳೆಗೆ ಅಬ್ಬೆತುಮಕೂರು ಶ್ರೀಮಠಕ್ಕೆ ತಲುಪಲಿದೆ ಎಂದರು ತಿಳಿಸಿದರು.ಶಿವರಾಜ ಕಲಕೇರಿ ಇದ್ದರು.
ಪಾದಯಾತ್ರೆಯಲ್ಲಿ ದಾನಪ್ಪ ಕಡಿಮನಿ ಚಂದ್ರಕಾಂತ ಮ್ಯಾಕಲ್ ಮರೆಣ್ಣ ದೇವಾಪುರ ಅರಳೆಪ್ಪ ಪೂಜಾರಿಮಲ್ಲು ಸುಗೂರು ಹಣಮಂತ ಗೌಂಡಿ ರಮೇಶ ಹಬ್ಬ ಬಸವರಾಜ ಕಡಿಮನಿ ಶಕುಂತಲಾ ನಾಯಕ ಬಸಮ್ಮ ವಾಬಾ ತಾಯಮ್ಮ ಪೂಜಾರಿ ನಿಂಗಮ್ಮ ಮ್ಯಾಕಲ್ ಗಂಗಮ್ಮ ಸುರಪುರಕರ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…