ಕಲಬುರಗಿ: ನಗರದ ರಿಂಗ್ ರಸ್ತೆಯಲ್ಲಿನ ಮಹಾತ್ಮ ಗಾಂಧಿ ತಂಗು ದಾಣದಲ್ಲಿರುವ ಸಾರಿಗೆ ಸದನ ಕಚೇರಿಯಲ್ಲಿ ಗುಲಬರ್ಗಾ ಲಾರಿ ಮಾಲಿಕರ್ ಸಂಘದ ಸಭೆ ಜರುಗಿತು.
ಸಂಘದ ಅಧ್ಯಕ್ಷ ಹಣಮಂತ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪಾಟೀಲ್ ಮಾತನಾಡಿ ಕೋವಿಡ್ ೧೯ ನಿಂದ ಆದ ಭಾರಿ ನಷ್ಟದ ಬಗೆ ಲಾರಿ ಮಾಲಿಕರು ಅನುಭವಿಸಿದ ಸಮಸ್ಯೆಗಳು ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳನ್ನು ಹೆಚ್ಚಾಗುತ್ತಿರುವುದರಿಂದ ಲಾರಿ ಮಾಲೀಕರಿಗೆ ಬಹಳಷ್ಟು ಕಷ್ಟವನ್ನು ಅನುಭವಿಸುವಂತಾಗಿದೆ.
ಕೋವಿಡ್-೧೯ನಿಂದ ಸ್ವಲ್ಪ ಹೊರಗೆ ಬಂದೆವು ಎಂದು ಉಸಿರು ಬಿಡುವಷ್ಟರಲ್ಲಿಯೇ ಸರಕಾರವು ಪೇಟ್ರೋಲ್-ಡಿಸೇಲ್ ಬೆಲೆ ಹೆಚ್ಚಿಸುತ್ತಿರುವುದರಿಂದ ಬಹಳಷ್ಠು ನಷ್ಟವನ್ನಾಗುತ್ತಿದೆ. ಆದ್ದರಿಂದ ನಗರದ ಎಲ್ಲಾ ಫೈನಾನ್ಸ್ನ ಹಾಗೂ ಬ್ಯಾಂಕ್ಗಳ ವ್ಯವಸ್ಥಾಪಕರುಗಳಿಗೆ ಸಭೆಗೆ ಆಹ್ವಾನ ನೀಡಿ ಕರೆಯಿಸಿ ನಷ್ಟದ ಬಗ್ಗೆ ತಿಳಿ ಹೇಳಿ ಮಾಸಿಕ ಕಂತುಗಳ ಬಗ್ಗೆ ಚರ್ಚಿಸಲಾಯಿತು. ಹಾಗೂ ಇದೇ ಸಂದರ್ಭದಲ್ಲಿ ಮುಂದಿನ ಮಾಸಿಕ ಕಂತುಗಳನ್ನು ಕಟ್ಟಲು ಸ್ವಲ್ಪ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಕೊಟ್ಟು ಲಾರಿ ಮಾಲೀಕರಿಗೆ ಸಹಕರಿಸಬೇಕೆಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ ಖೇಮಜಿ, ಯುನುಸ್ ಖಾನ್, ಜಂಟಿ ಕಾರ್ಯದರ್ಶಿ ಮಹ್ಮದ ಅಷ್ಪಕ್ ಲಾಲ್, ಖಜಾಂಚಿ ಶಿವಕುಮಾರ ಡೊಂಗರಗಾಂವ, ಅಸದುಲ್ಲಾ ಬೇಗ, ಬಸವರಾಜ, ಖಾಜಾ ಪಟೇಲ್, ಶೇರ್ಅಲಿ, ಗುಂಡಪ್ಪ ಜನೂರ, ಪೃಥ್ವಿರಾಜ ಗದಲೆಗಾಂವ್, ಬಾಬು ನಾಡತ್, ವಿಜಯಕುಮಾರ ಗುತ್ತೇದಾರ, ನಾಗರಾಜ ಕುಂಬಾರ, ಬಶೇರ ಪಟವಾಡಿ, ಮಹ್ಮದ ಮಂಜೂರ್ ಇಲೈಲಿ, ಶಬ್ಬೀರ ಪಟೇಲ್, ಸೈಯದ ಲಿಯಾಕತ್ ಅಲಿ, ಪ್ರಲ್ಹಾದ ಘನಾತೆ ಉಪಸ್ಥಿತರಿದ್ದರು.
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…