ಬಿಸಿ ಬಿಸಿ ಸುದ್ದಿ

ಮೌಲ್ಯ ಕಳೆದುಕೊಳ್ಳುತ್ತಿರುವ ಮಾಧ್ಯಮ ರಂಗ

ಪತ್ರಿಕಾ ರಂಗವನ್ನು ಭಾರತದ ಸಂವಿಧಾನದ ನಾಲ್ಕನೇ ಆಧಾರ ಸ್ತಂಭವಾಗಿ ಪರಿಗಣಿಸಲಾಗುತ್ತದೆ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಬಳಿಕ ಪ್ರಜಾಪ್ರಭುತ್ವ ಭಾರತದಲ್ಲಿ ಪತ್ರಿಕಾ ಕ್ಷೇತ್ರವು ಅತಿ ಹೆಚ್ಚಿನ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು.

ಒಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂಪೂರ್ಣವಾಗಿ ಯಶಸ್ವಿಯಾಗಬೇಕಾದರೆ ಮಾಧ್ಯಮ ರಂಗದ ನಿಷ್ಪಕ್ಷಪಾತ ಕಾರ್ಯ ನಿರ್ವಹಿಸುವಿಕೆ, ನಿರ್ಧಿಷ್ಟವಾದ ರಾಜಕೀಯ ಪಕ್ಷಗಳ ಭಟ್ಟಂಗಿತನದಿಂದ  ದೂರ ಇರುವಿಕೆ, ಪೂರ್ವಾಗ್ರಹ ಮನಸ್ಥಿತಿ ಹೊಂದದೆ, ಪರಿಪೂರ್ಣ ಸತ್ಯ ಸಂಗತಿಗಳ ಸುದ್ದಿ ಗಳನ್ನು ಜನತೆಗೆ ತಲುಪಿಸುವುದು ಬಹು ಮುಖ್ಯ ಉದ್ದೇಶವಾಗಿರಬೇಕಾಗುತ್ತದೆ.

ಆಳುವ ರಾಜಕೀಯ ಪಕ್ಷಗಳಾಗಲಿ ಅಥವಾ ವ್ಯಕ್ತಿಗಳಾಗಲಿ ಜನಪರ ಹಾಗೂ ಸಂವಿಧಾನ ಬದ್ಧ ಆಡಳಿತ ನೀಡುವಾಗ ಪ್ರಶಂಸೆಯ ಮೂಲಕ ಬೆನ್ನು ತಟ್ಟಬೇಕು, ಹಾಗೆಯೇ ಜನ ವಿರೋಧಿ ಕೆಲಸಕ್ಕೆ ಕೈ ಹಾಕಿದಾಗ ಅಥವಾ ಸಂವಿಧಾನ ವಿರೋಧಿ ಕೃತ್ಯಕ್ಕೆ ಕೈಹಾಕಿದಾಗ ಸೂಕ್ತ ಟೀಕೆ ಟಿಪ್ಪಣಿಯ ಮೂಲಕ ಸರಿ ದಾರಿಗೆ ತರುವ ಜವಾಬ್ದಾರಿಯುತ ಸಲಹೆ ನೀಡುವ ಕರ್ತವ್ಯ ಮಾಧ್ಯಮ ರಂಗದ್ದಾಗಿರಬೇಕು.

ಈ ಹಿಂದೆ ಮಾಧ್ಯಮ ರಂಗದಿಂದ ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿಯ ವರದಿ ಪ್ರಕಟವಾದರೆ ಅದೇ ದೊಡ್ಡ ರಾಜಕೀಯ Propaganda ವಾಗುತ್ತಿತ್ತು. ಅಂತಹ ಮಹತ್ವ ಹೊಂದಿದ್ದ ಪತ್ರಿಕಾ ರಂಗ ಇಂದು ಯಾವ ಮಟ್ಟಕ್ಕೆ ಮುಟ್ಟಿದೆ ಎಂದು ಹೇಳಲೂ ನಾಚಿಕೆ ಪಡುವಂತಾಗಿದೆ.

ಈ ಹಿಂದೆ ಪ್ರತಿಯೊಂದು ಪತ್ರಿಕೆಗಳಾಗಲಿ ಅಥವಾ ದೃಶ್ಯ ಮಾಧ್ಯಮಗಳಾಗಲಿ ತಮ್ಮದೇ ಆದ ಕನಿಷ್ಠ ಇತಿಮಿತಿಯ ಸೈದ್ಧಾಂತಿಕ ಗಟ್ಟಿತನವನ್ನು ಹೊಂದಿದ್ದ ಕಾಲವೂ ನಾವು ನೋಡಿದ್ದೇವೆ. ರಾಜಕೀಯ ಪಕ್ಷಗಳ ನಾಯಕರಾಗಲಿ ಅಥವಾ ಸಾರ್ವಜನಿಕ ಜೀವನದಲ್ಲಿರುವವರು ತಮ್ಮ ಹೆಸರು ಕೆಲವೊಂದು ಪತ್ರಿಕೆಯಲ್ಲಿ ಅಚ್ಚಾಗಿದ್ದರೆ ಅದೆಷ್ಟೋ ಖುಷಿ ಪಡುವ ಕಾಲವಿತ್ತು.

ಅಂತಹ ಘನತೆ ಗೌರವ ಹೊಂದಿದ್ದ ಪತ್ರಿಕಾರಂಗವನ್ನು ಇಂದು ಸಾರ್ವಜನಿಕರು ಬೀದಿ ಬೀದಿಯಲ್ಲಿ ನಿಂತು ಕ್ಯಾಕರಿಸಿ ಉಗಿಯುವದನ್ನು ಕಾಣುತ್ತಿದ್ದೇವೆ. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವಾಗಿದ್ದ ಪತ್ರಿಕಾರಂಗ ಮುಂದೊಂದು ದಿನ ಇದೇ ಪ್ರಜಾಪ್ರಭುತ್ವದ ನಾಶಕ್ಕಾಗಿ ಟೊಂಕ ಕಟ್ಟಿ ನಿಲ್ಲುತ್ತದೆ ಎಂದು ಯಾರೂ ಸಹ ಭಾವಿಸಿರಲಿಲ್ಲ. ಸ್ವಾತಂತ್ರ್ಯ ಪೂರ್ವದಿಂದ ಹಿಡಿದು ಸ್ವತಂತ್ರ್ಯ ಭಾರತದ ಕೇವಲ  ಹತ್ತು ವರ್ಷಗಳ ಹಿಂದಿನ ತನಕ ಸೈದ್ಧಾಂತಿಕ

ತಳಹದಿಯ ಮೇಲೆ ತನ್ನ ಕಾರ್ಯ ನಿರ್ವಹಿಸುತ್ತಿದ್ದ ಮಾಧ್ಯಮ ರಂಗ ಏಕಾಏಕಿ  ಕಾರ್ಪೋರೇಟ್ ವಲಯಕ್ಕೆ ತನ್ನನ್ನು ತಾನು ಬಿಕರಿಯಾಗುವ ಮೂಲಕ  “Ethics of Journalism” ನ್ನು ಹತ್ಯೆಗೀಡು ಮಾಡಿರುವುದನ್ನು ಕಾಣಬಹುದಾಗಿದೆ.

ಮಾಧ್ಯಮ ರಂಗ ಕಾರ್ಪೋರೇಟ್ ವಲಯದ ವ್ಯಾಪಾರಿ ಹಿಡಿತಕ್ಕೆ ಬಲಿಯಾಗಿಯೋ ಅಥವಾ ನಿರಂಕುಶವಾದಿಗಳ ಪ್ರಬಲ ಹಿಡಿತಕ್ಕೆ ಸಿಕ್ಕು ಪ್ರಜಾಪ್ರಭುತ್ವದ ನಾಶಕ್ಕೆ ಪಣ ತೊಟ್ಟವರಂತೆ ವರ್ತಿಸುವದನ್ನು ಕಂಡಾಗ, ಈ ದೇಶದಲ್ಲಿ ಮಾಧ್ಯಮ ರಂಗ ಇರಬೇಕಾ? ಅಥವಾ ಬೇಡ ಎಂಬ ತೀರ್ಮಾನ ಕೈಗೊಳ್ಳುವ ಸಮಯ ದೇಶದ ಜನತೆಯ ಮುಂದಿದೆ.

ಮಾಧ್ಯಮ ರಂಗಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂಬ ಕಾರಣವನ್ನು ದುರುಪಯೋಗ ಮಾಡಿಕೊಂಡಿರುವ ಕೆಲವರು, ಯಾವುದೇ ರೀತಿಯ ಸಾಮಾಜಿಕ ಜವಾಬ್ದಾರಿಯನ್ನು ಗಾಳಿಗೆ ತೂರಿ, ಬಳಸುವ ಭಾಷೆಯ ಹಿಡಿತವಿಲ್ಲದೆ, ನಿರ್ಧಿಷ್ಟವಾದ ರಾಜಕೀಯ ಪಕ್ಷಗಳ ಮುಖಂಡರ ವೈಯಕ್ತಿಕ ತೇಜೋವಧೆ ಮಾಡುವ ಅಥವಾ ನಿರ್ಧಿಷ್ಟವಾದ ರಾಜಕೀಯ ಪಕ್ಷದ ಮುಖಂಡರ ಪರ ಪುಂಗಿ ಊದುವ ನಿಟ್ಟಿನಲ್ಲಿ ತಮ್ಮ ಬಾಯಿಗೆ ಬಂದಂತೆ ಬೊಗಳುವುದೇ “Journalism” ಎಂದು ಭಾವಿಸಿದಂತಿದೆ ಇಂದಿನ ಪತ್ರಕರ್ತರ ಮನಸ್ಥಿತಿ.

ಯಾವುದೇ ದೇಶಗಳ ಪ್ರಭುತ್ವ ತನ್ನ ದೇಶದ ಪತ್ರಿಕಾರಂಗದ ಸ್ವಾತಂತ್ರ್ಯದ ಮೇಲೆ ಸಾಧಿಸುವ ಹಿಡಿತ ಅಥವ ನಿರ್ಬಂಧದ ಮೇಲೆ ಜಾಗತಿಕ ಪತ್ರಿಕಾ ಸ್ವಾತಂತ್ರ್ಯ”  ಸೂಚ್ಯಂಕವನ್ನು ಅಳೆಯಲಾಗುತ್ತದೆ. ಜಗತ್ತಿನ 180 ರಾಷ್ಟ್ರಗಳ ಪೈಕಿ ಭಾರತ ಇಂದು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 142ಕ್ಕೆ ಕುಸಿದಿದೆ. 2010 ರಲ್ಲಿ 120 ನೇ ಸ್ಥಾನದಲ್ಲಿದ್ದ ಭಾರತ  ಕೇವಲ ಹತ್ತು ವರ್ಷಗಳಲ್ಲಿ 142 ನೇ ಸ್ಥಾನಕ್ಕೆ ಕುಸಿತ ಕಂಡಿರುವ ಕಾರಣ ಯಾವ ದಡ್ಡನಾದರೂ ಅರ್ಥಮಾಡಿಕೊಳ್ಳಬಹುದಲ್ಲವೆ?.

ಇದರಿಂದ ಸ್ಪಷ್ಟವಾಗಿ ಅರ್ಥವಾಗುವ ಸತ್ಯವೇನಂದರೆ, 1.  ಭಾರತದಲ್ಲಿ ಪತ್ರಿಕಾರಂಗ ಪತ್ರಿಕೋದ್ಯಮವಾಗಿ ಮಾರ್ಪಟ್ಟಿದೆ.

  • ಪ್ರಜಾಪ್ರಭುತ್ವದಲ್ಲಿ ತನಗಿದ್ದ ಸ್ವಾತಂತ್ರ್ಯ ಮತ್ತು ಮೌಲ್ಯವನ್ನು ಫ್ಯಾಸಿಸ್ಟ್ ಮನೋಧರ್ಮ ಹೊಂದಿರುವ ನಿರ್ಧಿಷ್ಟವಾದ ರಾಜಕೀಯ ಪಕ್ಷಕ್ಕೆ ಮಾರಿಕೊಂಡಿದೆ.
  • ತನ್ನ ಸಾಮಾಜಿಕ ಜವಾಬ್ದಾರಿ,  ಗೌರವ, ಸ್ವಾತಂತ್ರ್ಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯ ಮಾರಿಕೊಳ್ಳುವ ಮೂಲಕ ಸರ್ವಾಧಿಕಾರಿ ಪ್ರಭುತ್ವದ ದಾಸನಾಗಿ ಭಜನೆಯ ನಶೆಯಲ್ಲಿ ಬೆತ್ತಲಾಗಿದೆ.
  • ಒಬ್ಬ ನಿರ್ಧಿಷ್ಟವಾದ ವ್ಯಕ್ತಿಯ ಭಜನೆಯ ನಶೆಯಲ್ಲಿರುವಾಗ ಸತ್ಯ ತನ್ನ ಮಹತ್ವವನ್ನು ಕಳೆದುಕೊಂಡು ಸುಳ್ಳು ಅತ್ಯಂತ ಭದ್ರವಾಗಿ ತನ್ನ ಸ್ಥಾನ ಗಟ್ಟಿಗೊಳಿಸಿಕೊಳ್ಳುತ್ತದೆ.
  • ಸತ್ಯವನ್ನು ಸುಳ್ಳನ್ನಾಗಿ, ಸುಳ್ಳನ್ನು ಸತ್ಯವನ್ನಾಗಿ ಸಾಬೀತು ಮಾಡುವ ಆತ್ಮವಂಚಕ ಪ್ರಯತ್ನದಲ್ಲಿ ಮಾಧ್ಯಮಗಳು ಯಶಸ್ವಿಯಾಗುತ್ತವೆ.
  • ಜನರ ಮೆದುಳಿನ ಮೇಲೆ ಗೋಬೆಲ್ ಸಿದ್ಧಾಂತವೇನಾದರೂ ಸವಾರಿ ಮಾಡಿದರೆ ದೇಶದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುತ್ತದೆ ಎಂಬುದಕ್ಕೆ ಭಾರತದ ಮಾಧ್ಯಮ ರಂಗವೇ ಸಾಕ್ಷಿಯಾಗಿದೆ.

ಇಷ್ಟೆಲ್ಲ ಹೇಳುವ ಕಾರಣ ಇಷ್ಟೆ, ಇತ್ತಿಚಿನ ದಿನಗಳಲ್ಲಿ ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಬಳಸುವ ಭಾಷೆ ಹಾಗೂ ವರ್ತನೆಯನ್ನು ಗಮನಿಸಿದಾಗ, ಇವರೆಲ್ಲ ಮನುಷ್ಯರೋ ಅಥವಾ ಮನುಷ್ಯ ರೂಪದ ಕಾಡು ಮೃಗಗಳೋ ಎಂಬಂತೆ ಭಾಸವಾಗುತ್ತಿದೆ.

ಕೇಲವು ಪತ್ರಕರ್ತರನ್ನು ನೋಡಿದರೆ ಇವರನ್ನು ಪತ್ರಕರ್ತನೆನ್ನಬೇಕೋ?, ಪತ್ರಕರ್ತನಾದ ಮಾತ್ರಕ್ಕೆ ಒಬ್ಬರನ್ನು ವೈಭವೀಕರಿಸುವ ಅಥವಾ ವೈಯಕ್ತಿಕ ಚಾರಿತ್ರ್ಯ ತೇಜೋವಧೆ ಮಾಡುವ ಭರದಲ್ಲಿ ಬಳಸುವ ಭಾಷೆಯನ್ನು ಮಾನವ ಭಾಷೆ ಎಂದು ಪರಿಗಣಿಸಬೇಕೋ?, ಈತನನ್ನು ಜಾಣನೆಂದು ಪರಿಭಾವಿಸಬೇಕೋ?, ಹುಚ್ಚನೆಂದು ತಿಳಿದುಕೊಳ್ಳಬೇಕೋ?, ಅರೆ ಹುಚ್ಚನೆಂದು ತಿಳಿದುಕೊಳ್ಳಬೇಕೋ?, ಶತಮೂರ್ಖನೆಂದು ಭಾವಿಸಬೇಕೋ? ಎಂಬುದೇ ಅರ್ಥವಾಗುತ್ತಿಲ್ಲ.

ಈ ವಿಷಯವಾಗಿ ನಾಡಿನ ಜನತೆಗೆ ಮಾರಕವಾಗುವ ಸುಳ್ಳು ಸುದ್ಧಿಗಳನ್ನು ಹರಡಿ, ಸಮಾಜದ ಸ್ವಾಸ್ಥ್ಯ ಕೆಡಿಸುವ ಇವರಿಗೆ  ನಾಡಿನ ಜನತೆ ಸಂಘಟಿತವಾಗಿ ಬುದ್ದಿ ಹೇಳುವ ಅಗತ್ಯತೆ ಇದೆ ಎಂದು ನನಗನಿಸುತ್ತದೆ.

ಅಮಾಯಕ ಜನರ ಮೆದುಳಿನಲ್ಲಿ ಧಾರ್ಮಿಕ ವಿಷ ಬೀಜ ಬಿತ್ತುವ ಇಂತಹ ಮನಸ್ಥಿತಿಗಳಿಗೆ ನಿಜವಾಗಿಯೂ ಚಿಕಿತ್ಸೆಯ ಅಗತ್ಯವಿದೆ. ಇಂತಹ ಅಪಾಯಕಾರಿ ಮನಸ್ಥಿತಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸುವ ಮೂಲಕ ಮಾಧ್ಯಮದ ಗೌರವ, ಘನತೆ, ಸ್ವಾತಂತ್ರ್ಯ, ಸೈದ್ಧಾಂತಿಕ ಮೌಲ್ಯವನ್ನು ಮರುಸ್ಥಾಪಿಸಬೇಕಿದೆ.

ಈ ನಿಟ್ಟಿನಲ್ಲಿ ಮಾಧ್ಯಮ ರಂಗದ ಬೌದ್ಧಿಕ ದಿವಾಳಿತನದ ಬಗ್ಗೆ ಸಮಗ್ರ ಚಿಂತನೆ ನಡೆಸುವ ಅಗತ್ಯ ನಮ್ಮ ನಾಡಿನ ಪ್ರಜ್ಞಾವಂತರ ಮುಂದಿದೆ. ಇಂತಹವರನ್ನು ಸರಿಯಾದ ಚಿಕಿತ್ಸೆಯ ಮೂಲಕ ಗುಣಪಡಿಸುವ ಆಶಾವಾದ ನನಗೆ ಇದೆ ಎಂದು ಹೇಳಬೇಕಾದರೆ, ಅದಕ್ಕೆ ಕಾರಣ, ಇಂತಹವರ ನಡುವೆಯೂ ನಮ್ಮ ಕೆಲವರು ನೈಜ ಪತ್ರಕರ್ತರೂ ಇರುವುದರಿಂದ ಇಷ್ಟೆಲ್ಲ ಹೇಳಬೇಕಾಯಿತು.

ಈ ವಿಷಯವಾಗಿ ಸಮಗ್ರವಾಗಿ ಆರೋಗ್ಯಪೂರ್ಣ ಚರ್ಚೆಯಾಗಲೆಂಬ ಕಾರಣದಿಂದ ಬರೆಯಬೇಕಾಯಿತು.

-: ಟಿ.ಶಶಿಧರ

 

emedialine

Recent Posts

ಜಪಾನ್ ವಿ. ವಿಯಲ್ಲಿ ಪ್ರಬಂಧ ಮಂಡನೆ ಮಾಡಿದ ಡಾ. ಪಾಸೋಡಿ

ಕಲಬುರಗಿ : ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ನಿರ್ದೇಶಕ ಡಾ. ಎಂ ಎಸ್ ಪಾಸೋಡಿ ಅವರು ಜಪಾನ್…

26 mins ago

ಕಲಬುರಗಿ: ಡೆಂಗ್ಯೂ, ಮಲೇರಿಯಾ ರೋಗಗಳನ್ನು ನಿಯಂತ್ರಿಸಲು ಬಾಲರಾಜ್ ಗುತ್ತೇದಾರ ಆಗ್ರಹ

ಕಲಬುರಗಿ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಿ ಚರಂಡಿ ನೀರನ್ನು ಸ್ವಚ್ಛಗೊಳಿಸಿ, ಸೊಳ್ಳೆಗಳು ಬಾರದಂತೆ ಫಾಗಿಂಗ್ ಮಾಡಿಸಬೇಕು…

34 mins ago

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

3 hours ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

3 hours ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

3 hours ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

4 hours ago