ರೊಪೋಸೋದಲ್ಲಿ ಡ್ಯಾನಿಶ್ ಸೇಠ್ ಕ್ರಿಕೆಟೇನ್ಮೆಂಟ್ ಸರಣಿ

ಬೆಂಗಳೂರು: ಗ್ಲಾನ್ಸ್ ತನ್ನ ಮೊದಲ ಇಂಟಲೆಕ್ಚುವಲ್ ಪ್ರಾಪರ್ಟಿ (IP) ಸರಣಿಯಾದ “ಡ್ಯಾನಿಷ್ ಕಿ ಗೂಗ್ಲಿ’’ಯನ್ನು ರೊಪೋಸೋದಲ್ಲಿ ಬಿಡುಗಡೆ ಮಾಡಿದೆ. ಈ ಐಪಿ ಸರಣಿಯಲ್ಲಿ ಸ್ಟಾಂಡ್-ಅಪ್ ಹಾಸ್ಯಗಾರ, ಟಿವಿ ನಿರೂಪಕ, ರೇಡಿಯೋ ಜಾಕಿ, ನಟ ಮತ್ತು ಲೇಖಕ ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ಇರುತ್ತಾರೆ.

ಕ್ರಿಕೆಟ್ ಮತ್ತು ಮನೋರಂಜನೆಯನ್ನು ಒಟ್ಟಿಗೆ ತರುವ ನಿಟ್ಟಿನಲ್ಲಿ ಕ್ರಿಕೆಟ್ ಆಟಗಾರರು, ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಅವರ ಸಾಧನೆ, ತಂಡಗಳ ಮಾಲೀಕರು, ಚಿಯರ್ ಲೀಡರ್ಗಳು, ಪ್ರೇಕ್ಷಕರ ಕೊರತೆ ಸೇರಿದಂತೆ ಹಲವು ರೀತಿಯಲ್ಲಿ ಮತ್ತು ಆಯಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಈ ಸರಣಿಯು ಎಕ್ಸ್ಕ್ಲೂಸಿವ್ ಆಗಿ Roposo@danishsait and Glance Lockfeed, ನಲ್ಲಿ ಬಿಡುಗಡೆಯಾಗಲಿದೆ. 2020 ರ ಸೆಪ್ಟೆಂಬರ್ 19 ರಂದು ಐಪಿಎಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರೆಯುತ್ತಿದ್ದಂತೆಯೇ ಈ ಸರಣಿ ಆರಂಭಗೊಳ್ಳಲಿದೆ.

ರೊಪೋಸೋ ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಆಗಿದ್ದು, ತಿಂಗಳಿಗೆ 100 ದಶಲಕ್ಷ ಡೌನ್ಲೋಡ್ಗಳು ಮತ್ತು 55 ದಶಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಈ ಕ್ರಿಕೆಟ್ ಸೀಸನ್ನಲ್ಲಿ ಇನ್ನೂ ಹೆಚ್ಚಿನ ಬಳಕೆದಾರರನ್ನು ಹೊಂದುವ ನಿರೀಕ್ಷೆ ಇದೆ. ಈ ಸರಣಿಯು ಪ್ರತಿದಿನ 100 ದಶಲಕ್ಷಕ್ಕೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ Glance Lockfeed ನಲ್ಲಿಯೂ ಲಭ್ಯವಾಗಲಿದೆ.

ರೊಪೋಸ್ ಮತ್ತು ಗ್ಲಾನ್ಸ್ನಲ್ಲಿ ತಮ್ಮ ಹೊಸ ಸರಣಿ ಆರಂಭವಾಗುತ್ತಿರುವ ಬಗ್ಗೆ ಮಾತನಾಡಿದ ಡ್ಯಾನಿಶ್, “ಭಾರತದ ನಂಬರ್ ಒನ್ ಸಾಮಾಜಿಕ ವಿಡಿಯೋ ಆಪ್ ಮತ್ತು ಭಾರತದ 3 ನೇ ಅತಿ ದೊಡ್ಡ ಕಂಟೆಂಟ್ ಪ್ಲಾಟ್ಪಾರ್ಮ್ ಆಗಿರುವ ಗ್ಲಾನ್ಸ್ ಜತೆ ಸೇರುತ್ತಿರುವುದಕ್ಕೆ ನನಗೆ ಸಂತಸವೆನಿಸುತ್ತಿದೆ. ರೊಪೋಸೋ ಮತ್ತು ಗ್ಲಾನ್ಸ್ ಈ ಕ್ರಿಕೆಟ್ ಋತುವಿನ ವೇಳೆ 200 ದಶಲಕ್ಷ ಬಳಕೆದಾರರನ್ನು ತಲುಪಲು ಮತ್ತು ಅವರಿಗೆ ಮನೋರಂಜನೆಯನ್ನು ನೀಡಲು ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಭಾರಿಯಾಗಿದ್ದೇನೆ’’ ಎಂದರು.

ಗ್ಲಾನ್ಸ್ನ ಸಿಎಂಒ ಬಿಕಾಶ್ ಚೌಧರಿ ಅವರು ಮಾತನಾಡಿ, “ಈ ಬಾರಿಯ ಕ್ರಿಕೆಟ್ ಟೂರ್ನಿಯ ವೇಳೆ ಅತ್ಯದ್ಭುತವಾದ ವಿವರಣೆಗಳನ್ನು ನಮ್ಮ ಬಳಕೆದಾರರಿಗೆ ತಲುಪಿಸುವುದರತ್ತ ಗಮನ ಹರಿಸಿದ್ದೇವೆ. ಎಲ್ಲಾ ಬಗೆಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡಿದ್ದೇವೆ ಮತ್ತು ಅತ್ಯದ್ಭುತವಾದ ವೀಕ್ಷಕ ವಿವರಣೆಗಳನ್ನು ಹೊಂದಿದ್ದೇವೆ. ಇದಕ್ಕೆ ರೊಪೋಸೋ ಜತೆ ಮಾಡಿಕೊಂಡಿರುವ ಪಾಲುದಾರಿಕೆ ಬೆಂಬಲವಾಗಿ ನಿಲ್ಲುತ್ತಿದೆ’’ ಎಂದು ತಿಳಿಸಿದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

1 hour ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

1 hour ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

1 hour ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

1 hour ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420