ಸುರಪುರ: ಇಂದು ಡ್ರಗ್ಸ್ ದಂಧೆ ಯುವ ಸಮೂಹವನ್ನು ಹಾಳು ಮಾಡುತ್ತಿದೆ.ಈ ದಂಧೆ ರಾಜ್ಯವನ್ನು ಗುರಿಯಾಗಿಸಿಕೊಂಡಿರುವುದು ಬೇಸರದ ಸಂಗತಿಯಾಗಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಖಂಡರು ಬೇಸರ ವ್ಯಕ್ತಪಡಿಸಿದರು.
ನಗರದ ತಹಸೀಲ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿ,ಡ್ರಗ್ಸ್ಗೆ ಕೇವಲ ಯುವ ಸಮೂಹ ಮಾತ್ರವಲ್ಲದೆ ವಿದ್ಯಾರ್ಥಿಗಳು ಇದರ ಚಟಕ್ಕೆ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ.ಸಿನೆಮಾ ನಟ ನಟಿಯರು ತಮ್ಮ ಆದರ್ಶವೆಂದು ಜನರು ಅವರಂತೆ ಬದುಕಲು ಇಷ್ಟಪಡುತ್ತಿರುವಾಗ,ಅದೇ ಸಿನೆಮಾ ರಂಗದ ಜನರೆ ಇಂದು ಡ್ರಗ್ಸ್ ದಂಧೆಯಲ್ಲಿ ತೊಒಡಗಿದ ಸಂಗತಿಗಳು ಹೊರಬರುತ್ತಿರುವುದು ನೋಡಿದಾಗ ಇದು ಕೇವಲ ಸಿನೆಮಾ ರಂಗ ಮಾತ್ರವಲ್ಲದೆ ಜನ ಸಾಮಾನ್ಯರನ್ನು ತಲುಪಿರುವುದು ಗೊತ್ತಾಗುತ್ತಿದೆ.ಆದ್ದರಿಂದ ಈ ದಂಧೆಗೆ ಕಡಿವಾಣ ಹಾಕಲು ಸರಕಾರ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಆರಂಭಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಡ್ರಗ್ಸ್ ದಂಧೆಯುಕೂಡ ಭಯೊತ್ಪಾದನೆ ಚಟುವಟಿಕೆಗಿಂತ ಭೀಕರವಾದುದಾಗಿದೆ,ದೇಶವನ್ನು ಹಾಳು ಮಾಡಲು ಬಾಂಬ್ ಹಾಕಬೇಕಿಲ್ಲ ಇಂತಹ ಜಾಲಗಳು ಸಾಕಾಗಿವೆ.ಆದ್ದರಿಂದ ಸರಕಾರ ಕಠಿಣ ಕಾನೂನು ಜಾರಿಗೊಳಿಸಬೇಕೆಂದರು.
ಈ ದಂಧೆಯಲ್ಲಿ ಕೇವಲ ಸಿನೆಮಾ ರಂಗದವರು ಮಾತ್ರವಲ್ಲದೆ ರಾಜಕಾರಣಿಗಳ ಮಕ್ಕಳು ಉದ್ದಿಮೆದಾರರು ಭಾಗಿಯಾಗಿರುವ ಸಾಧ್ಯತೆಯಿದೆ ಆದ್ದರಿಂದ ಈ ದಂಧೆಯ ಕಡಿವಾಣಕ್ಕೆ ಕಠಿಣ ನಿಲುವು ತಾಳುವಂತೆ ಒತ್ತಾಯಿಸಿ ನಂತರ ಗೃಹ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ ಸಿರಸ್ತೆದಾರ ಅಶೋಕ ಸುರಪುರಕರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಕಾರ್ಯದರ್ಶಿ ಪರಶುರಾಮ ಬೈಲಕುಂಟಿ ಸೋಮಶೇಖರ ದಂಡೋತಿ ಕ್ಯಾತಪ್ಪಾ ಮೇದಾ ಶ್ರೀಕಾಂತ ಮೇದಾರ ಭೀಮಣ್ಣ ಸಗರ ರಮೇಶ ಬೈಚಬಾಳ ಸೇರಿ ಅನೇಕರಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…