ನಿಸ್ವಾರ್ಥ ಮನೋಭಾವದಿಂದ ಸಮಾಜ ಸೇವೆ ಮಾಡಿ: ಸಂಗಮೇಶ ಸರಡಗಿ

ಕಲಬುರಗಿ: ನಡೆಯೊದಾರಿಯಲ್ಲಿ ನಿಯತ್ತು ಇದ್ದರೆ ತಡೆಯೊ ತಾಕತ್ತು ಯಾರಿಗೂ ಇರುವುದಿಲ್ಲ.ಶುದ್ದ ಭಾವದಿಂದ ಕಾರ್ಯಮಾಡಿದರೆ ತನಗರಿವಿಲ್ಲದಂತೆ ಮನುಷ್ಯ ಬೆಳೆದು ನಿಲ್ಲುತ್ತಾನೆ ಎಂದು ಕೆ.ಎಚ್.ಬಿ ಗ್ರೀನ್ ಪಾರ್ಕನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವ ಸಲಹೆಗಾರ ಸಂಗಮೇಶ ಸರಡಗಿ ಹೇಳಿದರು.

ನಗರದ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಉಮಾಕಾಂತ ಟಿ ಅವರು ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳಿಗೆಸನ್ಮಾನ ಸಮಾರಂಭದಲ್ಲಿ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡವರು ಜಾತಿ ಮತ ಬೇಧವನ್ನುಬದಿಗಿರಿಸಿ,ನಿಸ್ವಾರ್ಥ ಮನೋಭಾವದಿಂದ ಕೆಲಸ ನಿರ್ವಹಿಸಿ ಪ್ರಾಮಾಣಿಕ ಕಾರ್ಯಮಾಡುತ್ತಾ ಸಾಗಿದರೆ ಸುಂದರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ನೂತನ ಅದ್ಯಕ್ಷ ಸಂಜೀವಕುಮಾರ ಶೆಟ್ಟಿ ಮಾತನಾಡಿ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನುಒದಗಿಸುವ ನಿಟ್ಟಿನಲ್ಲಿ ನಮ್ಮ ಕ್ರಿಯಾಶೀಲ ಸಂಘ ಕೆಲಸ‌ ಮಾಡುತ್ತದೆ. ತಮ್ಮೆಲ್ಲರ ಸಹಕಾರದಿಂದ ನಾವೆಲ್ಲರೂ ಸೇರಿ ಹೆಸರಿಗೆ ತಕ್ಕ ಹಾಗೆಹಸಿರೆ ಉಸಿರಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಕಾನೂನು ಸಲಹೆಗಾರರು ಹಣಮಂತ್ರಾಯಎಸ್. ಅಟ್ಟೂರ ನ್ಯಾಯವಾದಿಗಳು ಮಾತನಾಡಿದರು, ಕಾರ್ಯಕ್ರಮದಲ್ಲಿ ಗೌರವಾದ್ಯಕ್ಷ ನಾಗೆಂದ್ರಪ್ಪ ಆರ್. ದಂಡೋತಿಕರ, ಉಪಾದ್ಯಕ್ಷ ಬಾಲಕೃಷ್ಣ ಕೆ.ಕುಲಕರ್ಣಿ, ಕಾರ್ಯದರ್ಶಿ ರಾಜೇಶ ಕೆ. ನಾಗಬುಜಂಗೆ, ಸಹ-ಕಾರ್ಯದರ್ಶಿ ಶ್ರೀನಿವಾಸ ಎಮ್.ಬುಜ್ಜಿ, ಸಂಘಟನಾ ಕಾರ್ಯದರ್ಶಿ ಚಂದ್ರಕಾಂತ ಪಿ.ತಳವಾರ, ಮಂಜುನಾಥ ಎಸ್.ಬೆಳಮಗಿ, ರೇವಣಸಿದ್ದಪ್ಪಎಸ್.ರುದ್ರವಾಡಿ,ಶರಣಬಸಪ್ಪ ದೇಶಟ್ಟಿ , ಸಹ-ಸಂಘಟನಾಕಾರ್ಯದರ್ಶಿ ಸಂತೋಷ ಎ. ಹೂಗಾರ, ಖಜಾಂಚಿ ದಿಗಂಬರರಾವ.ವಿ.ಕುಲಕರ್ಣಿ, ಗೌರವ ಸಲಹೆಗಾರ ಕೆ.ಎಮ್.ಲೋಕಯ್ಯ , ಸಂಗಮೇಶ ಸರಡಗಿ, ರಮೇಶಕೋರಿಶೆಟ್ಟಿ,ಶಿವರಾಯಗೌಡ ಮುದ್ದಡಗಾ, ಮಾಧ್ಯಮಪ್ರತಿನಿದಿ ಬಸವರಾಜ ಹೆಳವರ ಯಾಳಗಿ ಹಾಗೂ ಎಲ್ಲಾ 26 ಬ್ಲಾಕನ ಪ್ರತಿನಿಧಿಗಳು ಹಾಗೂ ನಿತೇಶ ಟಿ, ನವೀನ ಟಿ, ವಿಶ್ವ ಯಕಾಪೂರ, ಬಸವರಾಜ ರಟಕಲ, ಪುಂಡಲೀಕಜಮಾದಾರ, ಸುಭಾಷ ಪಾಟೀಲ, ಚಂದ್ರಕಾಂತಕಟಕೆ, ವಿನಯ ಪಾಟೀಲ ಇನ್ನಿತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿಕಾಶಿನಾಥ ಗಾಯಕವಾಡ ಸ್ವಾಗತಿಸಿದರು, ವಿರೇಶ ಬೋಳಶೆಟ್ಟಿ ನರೊಣಕಾರ್ಯಕ್ರಮ ನಿರೂಪಿಸಿದರು, ರಮೇಶ ಕೋರಿಶೆಟ್ಟ ವಂದಿಸಿದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420