ಬಿಸಿ ಬಿಸಿ ಸುದ್ದಿ

ಭಾರತದ ಸ್ವಾತಂತ್ರ್ಯಕ್ಕಾಗಿ ಗಲ್ಲಿಗೇರಿದ ಕವಿ ಅಶ್ಫಾಖ್ ಉಲ್ಲಾಖಾನ್ ಜನುಮದಿನವಿಂದು

(ಜೆ ಕಲೀಂ ಭಾಷಾ ಅವರ ಪುಸ್ತಕದ ಭೀಮಾಶಂಕರ್ ಪಾಣೆಗಾಂವು ಕೆಲವು ಸಾಲುಗಳು)

ವಿಭಜನಪೂರ್ವ ಭಾರತವು ಬ್ರಿಟಿಷರ ವಿರುದ್ಧ ಹೋರಾಡುವಾಗ ಅದರಲ್ಲಿ ಹಿಂದೂಗಳೂ ಮುಸಲ್ಮಾನರೂ ಒಟ್ಟಾಗಿಯೇ ಹೋರಾಡಿದ್ದರು ಎಂಬುದನ್ನು ಈಚಿನ ದಿನಗಳಲ್ಲಿ ಮರೆಗೆ ತಳ್ಳಲಾಗುತ್ತಿದೆ. ಹಾಗಾಗಿ ದೇಶಕ್ಕಾಗಿ ಗಲ್ಲುಗಂಬಕ್ಕೇರಿದ ಅಶ್ಫಾಖ್ ಉಲ್ಲಾಖಾನ್ ಬಗ್ಗೆ ಹೆಚ್ಚಿನವರಿಗೆ ತಿಳಿಯುತ್ತಿಲ್ಲ.

ಅಶ್ಫಾಖ್ ಉಲ್ಲಾಖಾನ್ 22 ಅಕ್ಟೋಬರ್ 1900ರಲ್ಲಿ ಉತ್ತರ ಪ್ರದೇಶದ ಶಾಹಜಹಾಂಪುರದಲ್ಲಿ ಜನಿಸಿದ. ಆತ ಹಸ್ರತ್ ವಾರ್ಸಿ ಎಂಬ ಹೆಸರಿನಿಂದ ಕವಿತೆಗಳನ್ನು ಬರೆಯುತ್ತಿದ್ದ. ದೇಶಭಕ್ತಿಯೇ ಅವನ ಕಾವ್ಯದ ಸ್ಫೂರ್ತಿ. ಕಾಕೋರಿ ಚಳುವಳಿಯಲ್ಲಿ ಪಾಲ್ಗೊಂಡ ಅಶ್ಫಖ್‍ಗೆ 1927ರ ಅಕ್ಟೋಬರ್ ತಿಂಗಳಿನಲ್ಲಿ ಗಲ್ಲು ಶಿಕ್ಷೆ ಪ್ರಕಟವಾಗಿ, 19 ಡಿಸೆಂಬರ್ 1927ರಂದು ಗಲ್ಲಿಗೇರಿದಾಗ ಆತನಿಗೆ ಕೇವಲ 27 ವರ್ಷ. ‘ಪ್ರೀತಿ ಯಾವ ಮನುಷ್ಯನ ಹೃದಯದಲ್ಲಿರುತ್ತೋ, ಆತನೇ ದೇಶಕ್ಕಾಗಿ, ದೇಶವಾಸಿಗಳಿಗಾಗಿ, ಎಲ್ಲರಿಗಾಗಿ ಎಲ್ಲರ ಹಿತಕ್ಕಾಗಿ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ. ಮಾನವ ಪ್ರೇಮವೇ ದೇಶ ಪ್ರೇಮವಾಗಬೇಕು’ ಎಂದು ಅವನು ಜೈಲಿನಿಂದ ಬರೆದ ಪತ್ರವೊಂದರಲ್ಲಿ ಹೇಳಿದ್ದಾನೆ.

ಗಲ್ಲು ಶಿಕ್ಷೆ ಪ್ರಕಟವಾದ ಆನಂತರ ಅಶ್ಪಾಕ್ ತನ್ನ ತಾಯಿಗೆ ಬರೆದ ಪತ್ರದ ಕೆಲವು ಸಾಲುಗಳು-
‘ತಮಗೆ ತಮ್ಮ ಮಗ ‘ವೀರಮರಣ’ ಹೊಂದುತ್ತಿದ್ದಾನೆಂದು ತಾವು ಹೆಮ್ಮೆ ಪಡಬೇಕು. ಅಕಸ್ಮಾತ್ ತಮಗೆ ಸಾವನ್ನು ಎದುರಿಸುವ ಸಮಯ ಬಂದರೆ ತಾವೂ ಸಹ ಓರ್ವ ವೀರ ಮಾತೆ ಎಂದು ಸಾಬೀತು ಪಡಿಸಬೇಕಾಗುತ್ತದೆ. ತಮ್ಮ ನರ-ನಾಡಿಗಳಲ್ಲಿ ಪವಿತ್ರವಾದ ಆಫಘನ್ ರಕ್ತ ಹರಿಯುತ್ತಿಲ್ಲವೇ? ತಾವು ನನ್ನ ಮಾತೆಯಲ್ಲವೇ? ತಾವು ಧೈರ್ಯಶಾಲಿ ಪಠಾಣ್ ವಂಶಸ್ಥರಲ್ಲವೇ? ತಾವು ನನ್ನ ಮಾತೆಯಾಗಿದ್ದು ನನ್ನಲ್ಲಿ ತಮ್ಮ ಮೊಲೆ ಹಾಲಿನ ಪ್ರಭಾವವಿದೆ.

ತಾವು ನಮ್ಮ ಬಲಿದಾನಗಳಿಂದ ಬೇಸರಿಸುವ ಅಗತ್ಯವಿಲ್ಲ, ಏಕೆಂದರೆ ಇದು ನಮ್ಮ ದೇಶಕ್ಕಾಗಿ ನಾವು ಮಾಡಿದ ಕರ್ತವ್ಯವಾಗಿದೆ. ಭಾರತೀಯ ಸಹೋದರರಲ್ಲಿ ನಾವು ಪ್ರೀತಿ, ವಿಶ್ವಾಸವಿಡುವವರು. ನಿಮಗೆ ಉತ್ಸಾಹ ತುಂಬುವವರು. ದೇಶ ಬಾಂಧವರೆ ನಾನು ಆ ಪವಿತ್ರ ಅಲ್ಲಾಹನ ಪ್ರಮಾಣ ಮಾಡಿ ಹೇಳುವೆ. ನಾವು ದೇಶಕ್ಕಾಗಿ ಬಲಿದಾನ ನೀಡಿದೆವು. ಹಿಂದೂಸ್ಥಾನದ ಬಹು ಜನರು ಶೋಷಿತರಾಗುತ್ತಿದ್ದಾರೆ. ಇಲ್ಲಿನ ಬಡವರು, ಶೋಷಿತರು ಅನೇಕ ಪ್ರಾಂತ್ಯಗಳಲ್ಲಿ ಅಪಮಾನಿತರಾಗಿದ್ದಾರೆ. ಇವರಿಗೆಲ್ಲೂ ನೆರವೂ ಇಲ್ಲ, ಆಶ್ರಯವೂ ಇಲ್ಲವಾಗಿದೆ. ಮುಖ್ಯ ವಿಷಯವೇನೆಂದರೆ ನಮ್ಮ ದೇಶವೂ ನಮ್ಮದಲ್ಲವೇನೋ ಎನಿಸಿದೆ’

ಹಿಂದೂ ಮುಸ್ಲಿಂ ಸಂಬಂಧಗಳು ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಅಶ್ಫಾಖ್ ಉಲ್ಲಾಖಾನ್ ಅಂಥವರ ಬಲಿದಾನದ ಬಗ್ಗೆ ಓದುವುದು, ತಿಳಿದುಕೊಳ್ಳುವುದು ಬಹಳ ಅಗತ್ಯ.

emedialine

Recent Posts

ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರ ತೆಗೆದುಕೊಳ್ಳಿ; ಮಲ್ಲಿಕಾರ್ಜುನ ಸತ್ಯಂಪೇಟೆ

ಸುರಪುರ: ಕೃಷ್ಣಾ ಕಾಲುವೆಗಳಿಗೆಗೆ ನೀರು ಹರಿಸಲು ನಿರ್ಣಯ ಕೈಗೊಳ್ಳಲು ನಡೆಸುವ ನೀರಾವರಿ ಸಲಹಾ ಸಮಿತಿಗೆ ರೈತ ಹೋರಾಟಗಾರರನ್ನು ಸೇರಿಸಿಕೊಳ್ಳಬೇಕು ಎಂದು…

3 mins ago

ಅಖಿಲ ಭಾರತ ವೀ.ಲಿಂ ಮಹಾಸಭಾ ನೂತನ ಅಧ್ಯಕ್ಷ ನಿದೇರ್ಶಕರ ನೇಮಕ

ಸುರಪುರ: ತಾಲೂಕ ವೀರಶೈವ ಲಿಂಗಾಯಕ ಸಮಿತಿಯಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೂಡ ಎರಡು ತಾಲೂಕಿನ ವೀರಶೈವ ಲಿಂಗಾಯತ…

7 mins ago

ಡೆಂಘೀ ವಿರೋಧಿ ಮಾಸಾಚರಣೆ | ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದರೆ ಯಾವ ಕಾಯಿಲೆ ಬರದು

ಸುರಪುರ: ಎಲ್ಲರು ತಮ್ಮ ಮನೆಯೊಳಗೆ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ,ಅದರಂತೆ ಮನೆಯ ಹೊರಗೂ ಸ್ವಚ್ಛತೆಗೆ ಆದ್ಯತೆ ನೀಡಿದಲ್ಲಿ ಡೆಂಘೀ ಸೇರಿದಂತೆ ಯಾವುದೇ…

10 mins ago

ಶಾಸಕ ಅಲ್ಲಮಫ್ರಬು ಪಾಟೀಲರಿಂದ ಕಂಪ್ಯೂಟರ್ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ನಗರದ ಬಸವ ಸಿರಿ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಭಾನುವಾರ ಮುಂಜಾನೆ. 11 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷ ಮತ್ತು…

16 mins ago

ತೊಗರಿ ಮತ್ತು ಹತ್ತಿ ಬೆಳೆಗಳ ಸಸ್ಯ ಸಂರಕ್ಷಣಾ ತರಬೇತಿ 18ಕ್ಕೆ

ಕಲಬುರಗಿ; ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಉದ್ದು, ಹೆಸರು ಮತ್ತು ಸೋಯಾಬಿನ್ ಬೆಳೆಯಲಾಗಿದ್ದು, ಇದರಲ್ಲಿ ಕಂಡು ಬರುವ ಹುಳು,…

33 mins ago

ಡೆಂಗ್ಯೂ ,ಝಿಕಾ, ಚಿಕನ್ ಗುನ್ಯಾ ತಡೆಗಟ್ಟಲು ಸರಕಾರಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

  ಕಲಬುರಗಿ : "ಜಿಲ್ಲೆಯಲ್ಲಿ ಡೆಂಗಿ ಜ್ವರ ಹಾವಳಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಝಿಕಾ ವೈರಾಣು ಸೋಂಕು, ಚಿಕನ್ ಗುನ್ಯಾ…

1 hour ago