ಬಿಸಿ ಬಿಸಿ ಸುದ್ದಿ

ಗೂಗಲ್ ಮೀಟ್ ನಲ್ಲಿ ಗ್ರಂಥ ಬಿಡುಗಡೆ

ಕಲಬುರಗಿ: ಕತೆಗಾರ ಚನ್ನಪ್ಪ ಕಟ್ಟಿ ಅನುವಾದಿಸಿದ ಜಾಕ್ ಲಂಡನ್ ನ‌ ‘ಸ್ಕಾರ್ಲೆಟ್ ಪ್ಲೇಗ್’  ಮೇಲ್ನೋಟಕ್ಕೆ ಪ್ಲೇಗ್ ಮಹಾಮಾರಿಯ ಕತೆಯನ್ನು ಹೇಳುವಂತೆ  ತೋರಿದರೂ ಅದರ ಮುಖ್ಯ ಫೋಕಸ್ ಇರುವುದು ಮನುಷ್ಯನ ಅಂತರಂಗದಲ್ಲಿ ಮನೆಮಾಡಿ ಕುಳಿತಿರುವ ಮಹಾಪಿಡುಗಿನ ದರ್ಶನ ಮಾಡಿಸುವುದೇ ಆಗಿದೆ.

ಚರಿತ್ರೆಯ ಗಾಯಗಳು  ಆತ್ಮಚರಿತ್ರೆಯ  ವೃಣಗಳಾಗಿ   ವಿಶ್ವದಲ್ಲಿ ದುರ್ಗಂಧವೆಬ್ಬಿಸಿರುದನ್ನು ನೂರಿಪ್ಪತ್ತು ಪುಟಗಳ ಕಿರುವ್ಯಾಪ್ತಿಯಲ್ಲಿ ಅನಾವರಣಗೊಳಿಸಿದೆ ಎಂದು ಅಕ್ಟೋಬರ್ ಮೂವತ್ತೊಂದರಂದು ೨೦೨೦ರ ಗೂಗಲ್ ಮೀಟ್ ನಲ್ಲಿ ಗ್ರಂಥ ಬಿಡುಗಡೆ ಮಾಡುತ್ತ ವಿಮರ್ಶಕ ಸಿರಾಜ್ ಅಹೆಮದ್ ಅಭಿಪ್ರಾಯಪಟ್ಟರು. ಮೂಲ ಇಂಗ್ಲಿಷ ಭಾಷೆಯಿಂದ ಕನ್ನಡ ಜಾಯಮಾನಕ್ಕೆ ಹೊಂದಿಕೊಳ್ಳುವಂತೆ ಚನ್ನಪ್ಪ ಕಟ್ಟಿ ಈ ಕೃತಿಯನ್ನು ಅನುವಾದಿಸಿದ್ದಾರೆ ಎಂದು ಹೇಳಿದ ಸಿರಾಜ ಅಹೆಮದ್ ಸಾಯವವರ ನೋವನ್ನು ಆಲಿಸದ, ಸತ್ತವರನ್ನು ಸಮಾಧಿ ಮಾಡಲಾಗದ, ಬದುಕಿದವರನ್ನು ಸಂತೈಸಲಾಗದ ಆತ್ಮವಿನಾಶಿ ಜನಾಂಗದ ಇಲ್ಲಿನ ಕಥನವು ಗಾಂಧೀಜಿ ಪರಿಭಾವಿಸಿದ್ದ satanic civilization ಅನ್ನು ನೆನಪಿಸಿಕೊಡುತ್ತದೆ ಎಂದು ವಿಶ್ಲೇಷಿಸಿದರು.

ನಾಡಿನ ಹಿರಿಯ ಜಾನಪದ ವಿದ್ವಾಂಸರಾದ ಡಾ.ಎಂ.ಎಂ.ಪಡಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಕವಿತೆ, ಕತೆ, ವಿಮರ್ಶೆ, ವೈಚಾರಿಕ ಕೃತಿಗಳನ್ನು ರಚಿಸುತ್ತಿದ್ದ ಸ್ನೇಹಿತ ಚನ್ನಪ್ಪ ಕಟ್ಟಿ ಇಂದು ಅನುವಾದ ಕ್ಷೇತ್ರಕ್ಕೆ ಬಂದಿದ್ದಾರೆ. ಅವರ ಈ ಹೊಸ ಕ್ರಿಯಾಶೀಲ ಪ್ರಯೋಗವನ್ನು ಸ್ವಾಗತಿಸೋಣ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ಸದಸ್ಯ ಹಿರಿಯ ಕಾದಂಬರಿಕಾರ ಬಾಳಾಸಾಹೇಬ ಲೋಕಾಪುರ ಶುಭ ಹಾರೈಸುತ್ತ ಮೂಲ ಕೃತಿಯ ಹೆಸರನ್ನು ಇದ್ದಕ್ಕಿದ್ದ ಹಾಗೆ ಉಳಿಸಿಕೊಂಡ ಅನುವಾದ ಕೃತಿಗಳ ಹೆಸರುಗಳನ್ನು ಉಲ್ಲೇಖಿಸುತ್ತ ಅಂಥದೇ ಕಾರ್ಯವನ್ನು ಚನ್ನಪ್ಪ ಕಟ್ಟಿ ಮಾಡಿದ್ದಾರೆ ಎಂದು ತಿಳಿಸಿದರು.

ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಮಹಾರಾಷ್ಟ್ರದ ಅಹೆಮದ್ ನಗರದ ಕಮಲಾಕರ ಭಟ್ಟ ಅನುವಾದ ಸಂದರ್ಭದಲ್ಲಿ ಅನುವಾದಕನು ತಾನು ಅನುಕರಣೆ ಮಾಡುತ್ತಿದ್ದೇನೆಂಬ ಕೀಳರಿಮೆ ಹೊಂದಿರಬಾರದು.

ಅನುವಾದವನ್ನು ಭಿನ್ನವಾದ ಭಾಷೆಯೊಂದಿಗೆ ಹಾಗೂ ಸಂಸ್ಕೃತಿಯೊಂದಿಗೆ ನಡೆಯಿಸಿದ ಸಂವಾದವೆಂದು ಭಾವಿಸಬೇಕು ಎಂದು ಹೇಳಿದರು. ಮೂಲ ಕೃತಿಗೆ ನಿಷ್ಠವಾಗಿರುತ್ತಲೇ ಮರುಸೃಷ್ಟಿ ಮಾಡುವ ಕೆಲಸವನ್ನು ಅನುವಾದಕ ಚನ್ನಪ್ಪ ಕಟ್ಟಿ ಸಮರ್ಥವಾಗಿ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಬಾದಾಮಿಯ ವ್ಹಿ.ಟಿ.ಪೂಜಾರ, ದಾಂಡೇಲಿಯ ನಾಗರೇಖಾ ಗಾಂವಕರ, ಕಲಬುರಗಿಯ ಪರಿಮಳ ಕಮತರ ಹಾಗೂ ದಾವಣಗೇರಿಯ ಮಹಾಂತೇಶ ಪಾಟೀಲ ಅವರು ಅನುವಾದಕ  ಚನ್ನಪ್ಪ ಕಟ್ಟಿಯೊಂದಿಗೆ ಸಂವಾದ ನಡೆಸುತ್ತ ಪ್ರಸ್ತುತ ಅನುವಾದದ ಹಿಂದಿನ ಪ್ರೇರಣೆಯ ಕುರಿತು, ಅನುವಾದಕನ ಅನುಭಗಳ ಕುರಿತು ವಿವರಗಳನ್ನು ಪಡೆದರು.

ಸಾಹಿತ್ಯ ದಿಂಗಂತದ ರುಕ್ಮಿಣಿ ನಾಗಣ್ಣವರ ಅವರು ಗೂಗಲ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಾಗೇಶ ಹರಳಯ್ಯ ಸ್ವಾಗತಿಸಿದರು. ರಮಾ ದೊಡಮನಿ ವಂದನೆಗಳನ್ನು ಸಲ್ಲಿಸಿದರು.

emedialine

Recent Posts

‘ಸೌಭಾಗ್ಯ ಸಿರಿ’ ಸಾಮಾಜಿಕ ಸಿರಿಯಾಗಲಿ: ಡಾ. ಅವ್ವಾಜಿ

ಕಲಬುರಗಿ: ಅಪ್ಪ- ಅವ್ವ, ಹೆಂಡತಿ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬಹುದು. ಆದರೆ ಅಕ್ಕ ತಂಗಿಯ ಸ್ಮರಣೆಯಲ್ಲಿ ಟ್ರಸ್ಟ್ ಸ್ಥಾಪಿಸುವುದು ಬಹಳ ಅಪರೂಪ…

2 mins ago

ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹ

ಕಲಬುರಗಿ: ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕೆಂದು ಅಖಿಲ ಭಾರತ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಾ. ಸಿದ್ದನಗೌಡ…

5 mins ago

ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು ಪೂರೈಕೆ

ವಾಡಿ: ಮಾಡುತ್ತಿರುವ ಕುಡಿವ ನೀರಿನಲ್ಲಿ ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು…

8 mins ago

ಬಸವರಾಜ್ ಎಸ್ ಜಿಳ್ಳೆಗೆ ಸನ್ಮಾನ ನಾಳೆ

ಕಲಬುರಗಿ; ಬಸವರಾಜ್ ಎಸ್ ಜಿಳ್ಳೆ ಅಭಿಮಾನಿ ಬಳಗದ ವತಿಯಿಂದ ಡೆಪ್ಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಕೆ ಎಸ್ ಆರ್…

5 hours ago

ಐಆರ್‌ಎಸ್‌ಒ ಕರ್ನಾಟಕ ರಾಜ್ಯ ಕಾರ್ಯಕರ್ತರ ಸಭೆ

ರಾಯಚೂರು; ಮಾರ್ಕ್ಸ್ ಭವನದಲ್ಲಿ ಎಐಆರ್‌ಎಸ್‌ಒ ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕರ್ತರ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಕಾರ್ಯಕರ್ತರ ಸಭೆಯಲ್ಲಿ, ಕೇಂದ್ರ ಸಂಘಟನಾ…

5 hours ago

ಶೈಲಜಾ ಶರಣಗೌಡಗೆ ಪಿಎಚ್. ಡಿ. ಡಾಕ್ಟರೇಟ್ ಪದವಿ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಶೋಧನಾ ವಿಭಾಗದ ವಿದ್ಯಾರ್ಥಿನಿ, ಶೈಲಜಾ ಶರಣಗೌಡ ಇವರು ಡಾ. ಶಾರದಾ ದೇವಿ ಎಸ್.…

5 hours ago