ವಾಡಿ: ಸಮೀಪದ ಲಾಡ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಕುರಿ ಕಳ್ಳರ ಹಾವಳಿ ಹೆಚ್ಚಾಗಿದೆ ಎನ್ನಲಾಗಿದ್ದು, ಮನೆಯ ಮುಂದಿನ ದೊಡ್ಡಿಯಲ್ಲಿ ಕೂಡಿ ಹಾಕಿದ ಕುರಿಗಳು ರಾತ್ರಿ ವೇಳೆ ಕಳ್ಳರಪಾಲಾಗುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಬುಧವಾರ (ನ.11) ತಡರಾತ್ರಿ ಗ್ರಾಮದ ಕುರಿಗಾಹಿ ಗುಲಾಮಸಾಬ ಖುರೇಶಿ ಎಂಬುವವರ ದೊಡ್ಡಿಯಿಂದ ಹತ್ತು ಕುರಿಗಳು ಕಾಣೆಯಾದ ಪ್ರಸಂಗ ಘಟಿಸಿದೆ.
ಕಲಬುರಗಿ ಮೂಲದ ಕುರಿ ಕಳ್ಳರ ಜಾಲವೇ ಈ ಕೈಚಳಕ ತೋರಿಸಿದೆ ಎಂಬ ಶಂಕೆ ಗ್ರಾಮಸ್ಥರಿಂದ ವ್ಯಕ್ತವಾಗಿದೆ. ದೊಡ್ಡಿಯಲ್ಲಿ ಕಟ್ಟಲಾಗಿದ್ದ ಒಟ್ಟು ಹನ್ನೊಂದು ಕುರಿಗಳಲ್ಲಿ ನಡೆಯಲು ಬಾರದ ಒಂದು ಕುರಿಯನ್ನು ಬಿಟ್ಟು ಉಳಿದ ಹತ್ತು ಕುರಿಗಳು ಕಾಣೆಯಾಗಿದ್ದನ್ನು ಕಂಡ ಕುರಿಗಾಹಿ ಗುಲಾಮಸಾಬ ಖುರೇಶಿ, ಸಂಬಂದಿಕರ ಜತೆಗೂಡಿ ಗುರುವಾರ ನಡೆದ ವಿವಿಧ ಗ್ರಾಮಗಳ ವಾರದ ಸಂತೆಗೆ ಭೇಟಿನೀಡಿ ಹುಡುಕಾಟ ನಡೆಸಿದ್ದಾರೆ.
ಸಣ್ಣೂರ ಗ್ರಾಮದ ಸಂತೆಯಲ್ಲಿ ಮಾರಾಟಕ್ಕೆ ತಂದಿದ್ದ ಸಾವಿರಾರು ಕುರಿಗಳಲ್ಲಿ ತನ್ನ ಕುರಿ ಇರುವುದನ್ನು ಪತ್ತೆಹಚ್ಚಿದ ಗುಲಾಮಸಾಬ ಖುರೇಶಿ, ವ್ಯಾಪಾರಿಯ ರೂಪದಲ್ಲಿದ್ದ ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಲೇ ಏಳು ಕುರಿಗಳನ್ನು ಮಾರಾಟ ಮಾಡಿ ಮೂರು ಕುರಿಗಳ ವ್ಯಾಪಾರಕ್ಕೆ ನಿಂತಿದ್ದ ಆರೋಪಿ ರಾಚಯ್ಯಸ್ವಾಮಿ ಕಡಬೂರ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಗ್ರಾಮದಲ್ಲಿ ಪದೇಪದೆ ಕುರಿಗಳು ಕಳ್ಳತನವಾಗುತ್ತಿದ್ದವು. ಯಾರು ಕದಿಯುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಈಗ ಓರ್ವ ಆರೋಪಿ ಕೈಗೆ ಸಿಕ್ಕಿದ್ದಾನೆ. ಇದರ ಹಿಂದೆ ಇನ್ನೂ ಎಷ್ಟು ಜನರಿದ್ದಾರೆ ಎಂಬುದನ್ನು ಪೊಲೀಸರು ತನಿಖೆ ಮಾಡುವ ಮೂಲಕ ಕುರಿಗಳ್ಳರ ಜಾಲವನ್ನು ಬೇಧಿಸಬೇಕು. ಅವರನ್ನು ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ ಒತ್ತಾಯಿಸಿದ್ದಾರೆ.
ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…