ಬೆಂಗಳೂರು: 2017 ರಲ್ಲಿ ನಡೆದ ಪ್ರಥಮ ದರ್ಜೆ, ದ್ವಿತೀಯ ದರ್ಜೆ ಸಹಾಯಕರ ಪರೀಕ್ಷೆಯಲ್ಲಿ 1812 ಮಂದಿ ಉತ್ತೀರ್ಣರಾಗಿದ್ದು, ಇದರಲ್ಲಿ ಕೆಲವರಿಗೆ ನೇಮಕಾತಿ ನೀಡಿ, ಮಿಕ್ಕವರಿಗೆ ಸರ್ಕಾರ ಮೋಸ ಮಾಡಿದೆ. ಈ ಕೂಡಲೇ ಮಿಕ್ಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಬಿಡಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು.
ನೊಂದ ಅಭ್ಯರ್ಥಿಗಳು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ನಡೆಸುತ್ತಿರುವ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಅಭ್ಯರ್ಥಿಗಳ ಪರಿಸ್ಥಿತಿ, ಹಣಕಾಸು ಇಲಾಖೆ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡದಂತೆ ಇತರೇ ಇಲಾಖೆಗಳಿಗೆ ಆದೇಶ ನೀಡಿದ್ದರೂ ಸಹ ಕೆಲವು ಇಲಾಖೆಗಳು ಅಭ್ಯರ್ಥಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಂಡಿವೆ ಇದರ ಹಿಂದಿರುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಮುಖ್ಯ ವಕ್ತಾರ ಶರತ್ ಖಾದ್ರಿ ಮಾತನಾಡಿ, ನೊಂದ ಅಭ್ಯರ್ಥಿಗಳ ಪರವಾಗಿ ಆಮ್ ಆದ್ಮಿ ಪಕ್ಷ ಸದಾ ಇರುತ್ತದೆ, ಪಿಯು ಉಪನ್ಯಾಸಕರಿಗೂ ನೇಮಕಾತಿ ಪತ್ರ ನೀಡುವಂತೆ ಆಗ್ರಹಿಸಿ ಎಎಪಿ ಜತೆಯಲ್ಲಿ ನಿಂತಿತ್ತು, ಈಗ ನಿಮ್ಮ ಜತೆಯೂ ಕಡೆ ತನಕ ಇರುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರೇ ಮೊದಲು ಈ 1800 ಮಂದಿಗೆ ಕೆಲಸ ಕೊಡಿ ವ್ಯಂಗ್ಯವಾಡಿದರು.
ಕಲಬುರಗಿ: ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಸಂಸ್ಥೆಯ ರಾಜ್ಯ ಕರಾಟೇ ಸ್ಪೋರ್ಟ್ಸ್ ಕಮಿಷನ್ ಚೇರ್ಮನ್ ರಾಗಿ ಹೆವೆನ್ ಫೈಟರ್ ಸಂಸ್ಥೆಯ…
ಕಲಬುರಗಿ: ನಿನ್ನೆ ನಗರದ ಸಪ್ತಗಿರಿ ಹೊಟೇಲ್ ನಲ್ಲಿ ನಡೆದ ಸಿಲೆಂಡರ್ ಸ್ಪೋಟದಲ್ಲಿ ಸಾವನ್ನಪ್ಪಿದ ಮಲ್ಲಿಕಾರ್ಜುನ ಅವರ ಮನೆಗೆ ಜಿಲ್ಲಾ ಉಸ್ತುವಾರಿ…
ಹಟ್ಟಿ: ಯಲಗಟ್ಟಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಾಲೆಗೆ ನಿರಂತರ ಗೈರಾಗುತ್ತಿರುವ ಮುಖ್ಯಗುರು ನಾಗನಗೌಡ ರನ್ನು ಸೇವೆಯಿಂದ ಅಮಾಮಾತಿಗೆ ಆಗ್ರಹಿಸಿ ಭಾರತ…
ಕಲಬುರಗಿ: ಎಲ್ ಅಂಡ್ ಟಿ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ ನಿನ್ನೆ ಬೆಂಗಳೂರಿನಲ್ಲಿ ಸಿಎಸ್…
ಕಲಬುರಗಿ : ರಾಜ್ಯದಲ್ಲಿ ಅಬಕಾರಿ ವಲಯದಲ್ಲಿರುವ ಕುಂದು ಕೊರತೆಗಳಿಗೆ ಜುಲೈ ತಿಂಗಳಿನಿಂದ ವ್ಯಾಪಕ ತಿದ್ದುಪಡಿ ಮಾಡಿ ಅಬಕಾರಿ ವ್ಯಾಪಾರಿ ಸ್ನೇಹಿ…
ಶಹಾಬಾದ: ನಗರಸಭೆಯ ವಾರ್ಡ ನಂ.17ರಲ್ಲಿ ಸೇಂಟ್ ಥಾಮಸ್ ಶಾಲೆಯ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಅಗೆಯಲಾಗಿದ್ದು, ಇನ್ನೂ ಹದಿನೈದು…