ಕಲಬುರಗಿ: ನಾಡಿನ ಸಾಹಿತ್ಯ ಕ್ಷೇತ್ರದ ದೈತ್ಯ ಶಕ್ತಿ ಡಾ. ಚನ್ನಣ್ಣ ರವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಗೈದವರು. ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಡಾ ಎಚ್ ಟಿ ಪೋತೆ ಹೇಳಿದರು.
ನಗರದಲ್ಲಿರುವ ಕಲಾ ಮಂಡಳದ ಸಭಾಂಗಣದಲ್ಲಿ ಹಿರಿಯ ಬಂಡಾಯ ಸಾಹಿತಿ ಡಾ ಚನ್ನಣ್ಣ ವಾಲೀಕಾರ ಅವರ ಪ್ರಥಮ ಪುಣ್ಯ ಸ್ಮರಣೆ ಹಾಗೂ ಕವಿ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿ ಚನ್ನಣ್ಣ ಅವರಲ್ಲಿ ತಾಯ್ತನ ಹೃದಯ ವಿತ್ತು ಮಹಿಳೆ,ಶೋಷಿತರ,ದಲಿತರ ಬಗ್ಗೆ ಅತೀವ ಕಾಳಜಿ ಹೊಂದಿದ್ದರು.ಅವರ ಸಾಹಿತ್ಯ,ಚಿಂತನೆಗಳು ನಮ್ಮ ಜೊತೆ ಇವೆ ಎಂದು ಹೇಳಿದ್ದರು.
ಸಾನಿಧ್ಯ ವಹಿಸಿದ ಸಾರಂಗಧರ ಶ್ರೀ ಗಳು ಮನುಷ್ಯನಲ್ಲಿ ಪೆಟ್ಟು ಬಿದ್ದಾಗ ಬಂಡಾಯ ಆಗುತ್ತೆ ಎಂದು ನುಡಿದರು. ಕವಿ ಗೋಷ್ಠಿ ಅಧ್ಯಕ್ಷತೆ ಡಾ ಸ್ವಾಮಿರಾವ ಕುಲಕರ್ಣಿ ವಹಿಸಿದ್ದರು. ಡಾ ಎಸ್ ಎಸ್ ಗುಬ್ಬಿ,ಹಿರಿಯ ಸಾಹಿತಿ ಎ.ಕೆ ರಾಮೇಶ್ವರ,ಸಿದ್ದಮ್ಮ ವಾಲೀಕಾರ ವೇದಿಕೆಯ ಮೇಲೆ ಇದ್ದರು.
ಚನ್ನಣ್ಣ ವಾಲೀಕಾರ ಅವರ ಕುರಿತು ಸುರೇಶ ಬಡಿಗೇರ,ಪರವೀನ ಸಲ್ತಾನ,ಮಂಗಲಾ ಕಪರೆ ತುಂಬಾ ಅದ್ಭುತ ಕವನ ವಾಚನ ಮಾಡಿದರು. ಬಿ.ಆರ್ ಚಾಂಬಾಳ ಡಾ ನಾಗಪ್ಪ ಗೋಗಿ , ರೇಣುಕಾ ಡಾಂಗೆ,ಎಚ್ ಎಸ್ ಬೇನಾಳ,ಡಿ. ಎಂ.ನದಾಪ್,ಧರ್ಮಣ್ಣ ಧನ್ನಿ,ಮನೋಹರ ಮರಗುತ್ತಿ ನಾಗಪ ಬೆಳಮಗಿ,ಶ್ರೀ ಮಂತ ಅಟ್ಟೂರ ಅನೇಕರು ಕವನ ವಾಚನ ಮಾಡಿದರು. ಕೆ ಎಸ್. ಬಂಧು ಸ್ವಾಗತ ಮಾಡಿದರು. ರಾಜಶೇಖರ್ ಮಾಂಗ ನಿರೂಪಣೆ ಮಾಡಿ ದರು. ಸಿದ್ಧಾರ್ಥ ಚಿಮ್ಮಿ ಇದಲಾಯಿ ಸಂಗೀತ ಕಾಯಕ್ರಮ ನೀಡಿದರು. ಡಾ ಸೂರ್ಯಕಾಂತ ಸುಜಾತ,ಈಶ್ವರ ಇಂಗಿನ. ಬಿ ಎಚ್ ನಿರಗುಡಿ ಉಪಸ್ಥಿತರಿದ್ದರು.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…